Saturday, April 30, 2011

Daily Crime Reported on 30/04/2011 at 17:00 Hrs

ಕಳವು ಪ್ರಕರಣಗಳು
  • ಮಲ್ಪೆ: ದಿನಾಂಕ 17/04/2011 ರಂದು ರಾತ್ರಿ ಸಮಯ ಕನ್ನರ್ಪಾಡಿ ಕಡೇಕಾರು ಗ್ರಾಮ ಎಂಬಲ್ಲಿಂದ ಸುಮಾರು 22,995/- ರೂಪಾಯಿ ಬೆಲೆ ಬಾಳುವ ಕೇಬಲ್ ವಯರನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದಾಗಿದೆ ಈ ಬಗ್ಗೆ ವಾಕರೆ, ಬಿನ್ ಕಶಪ್ಪ, ವಾಸ: ಎಸ್।ಡಿ.ಇ. ಅಜ್ಜರಕಾಡು, ನಾಯರ್ಕೆರೆ ಮೈನ್ ರೋಡ್, ಅಜ್ಜರಕಾಡು, ಉಡುಪಿರವರು ನೀಡಿದ ದೂರಿನಂತೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 55/2011 ಕಲಂ 379 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
  • ಕೊಂಕಣ ರೈಲ್ವೆ: ದಿನಾಂಕ 23/04/2011 ರಂದು ರಾತ್ರಿ 11:10ಕ್ಕೆ ಪೂರ್ಣ ಎಕ್ಸ್‌ಪ್ರೆಸ್ ಟ್ರೈನ್ ನಂ 11097 ರಲ್ಲಿ ಎಸ್‌9 ಬೋಗಿನಲ್ಲಿ ಸೀಟ್ ನಂ 1, 2, 3 ರಲ್ಲಿ ಸುಶೀಲ ವಿಜಯ ದೇವಾಡಿಗ (36) ಗಂಡ: ವಿಜಯ ದೇವಾಡಿಗ, ವಾಸ: ಬೂರದ ಹಕ್ಲಮನೆ, ಕಟ್ಟಿನ ಮಕ್ಕಿ, ಹರ್ಕೂರು ಗ್ರಾಮ, ಕುಂದಾಪುರ ತಾಲೂಕು ಎಂಬವರು ಪೂನಾದಿಂದ ತನ್ನ ತಾಯಿ ಮನೆಯಾದ ಕುಂದಾಪುರಕ್ಕೆ ತನ್ನ ಇಬ್ಬರು ಮಕ್ಕಳೊಂದಿಗೆ ಪ್ರಯಾಣ ಬೆಳೆಸಿದ್ದು, ದಿನಾಂಕ 24/04/2011 ರಂದು ರೈಲು ಭಟ್ಕಳ ಸ್ಟೇಷನ್ ತಲುಪಿದ ನಂತರ ಆ ಬೋಗಿಯಲ್ಲಿದ್ದ 7-8 ಹುಡುಗರು ಸುಶೀಲ ವಿಜಯ ದೇವಾಡಿಗರವರಿಗೆ ಇಳಿಸಲು ಸಹಕರಿಸುವಂತೆ ನಟಿಸಿ ಸೂಟ್‌ಕೇಸನ್ನು ಪಡೆದು ರೈಲಿನ ಶೌಚಾಲಯದ ಹತ್ತಿರ ಹೋಗಿ ತೆಗೆದುಕೊಂಡು ಹೋಗಿ ಅಲ್ಲಿ ಸೂಟ್‌ಕೇಸನ್ನು ಸುತ್ತುವರಿದು ನಿಂತು ಸುಶೀಲ ವಿಜಯ ದೇವಾಡಿಗರನ್ನು ಹಾಗೂ ಆಕೆಯ ಮಗಳನ್ನು ಅಲ್ಲಿಗೆ ಬರದಂತೆ ಹೇಳಿದ್ದು ಕುಂದಾಪುರ ರೈಲ್ವೆ ಸ್ಟೇಷನ್ ತಲುಪಿದಾಗ ಸೂಟ್‌ಕೇಸನ್ನು ಅಲ್ಲಿಯೇ ಬಿಟ್ಟು ತೆಗೆದು ಕೊಳ್ಳುವಂತೆ ತಿಳಿಸಿ ಹೋಗಿರುತ್ತಾರೆ। ಸುಶೀಲ ವಿಜಯ ದೇವಾಡಿಗರವರು ಇಳಿದು ಸೂಟ್‌ಕೇಸನ್ನು ನೋಡಿದಾಗ ಅದರ ಒಂದು ಬದಿಯ ಲಾಕನ್ನು ಬಲತ್ಕಾರವಾಗಿ ಮುರಿದಿರುವುದು ಕಂಡು ಬಂತು. ಸೂಟ್‌ಕೇಸನ್ನು ತೆರೆದು ನೋಡಿದಾಗ ಅದರ ಒಳಗೆ ಇಟ್ಟಿದ್ದ ಕರಿಮಣಿ ಸರ-ಸುಮಾರು 6 ಪವನ್‌, ಲಕ್ಷ್ಮೀಯ ದೊಡ್ಡ ಪೆಂಡೆಂಟ್ ಇರುವ 4 ಪವನಿನ ಗುಂಡುಮಣಿ ಸರ-1, ಸುಮಾರು 1 ಪವನ್ ತೂಕದ ಬಂಗಾರ ಪ್ಲೈನ್ ಚೈನ್‌-1, 3 ಗ್ರಾಂ ತೂಕದ ಒಂದು ಉಂಗುರ, ಬಿಳಿ ಹರಳಿರುವ ಮಾಟಿ, ಲೋಲಕ್ ಇರುವ ಬೆಂಡೋಲೆ ಒಂದು ಜೊತೆ ಹಾಗೂ ನಗದು 10,000/- ರೂಪಾಯಿ ಕಳವಾಗಿರುವುದು ಕಂಡು ಬಂದಿದ್ದು, ಕಳವಾದ ಸೊತ್ತುಗಳ ಒಟ್ಟು ಮೌಲ್ಯ ಸುಮಾರು 1,50,000/- ರೂ. ಆಗಿರುತ್ತದೆ. ಭಟ್ಕಳ ರೈಲ್ವೆ ನಿಲ್ದಾಣದಿಂದ ಕುಂದಾಪುರ ರೈಲ್ವೆ ನಿಲ್ದಾಣದ ನಡುವೆ ಸಂಜೆ 4:30 ರಿಂದ 5:30 ಗಂಟೆಯ ನಡುವೆ ಬೋಗಿಯಲ್ಲಿದ್ದ 7-8 ಜನ ಗುಂಪಿನ ಯುವಕರು ಈ ಒಡವೆಗಳನ್ನು ಕಳವು ಮಾಡಿರಬಹುದಾಗಿದೆ ಎಂಬುದಾಗಿ ಸುಶೀಲ ವಿಜಯ ದೇವಾಡಿಗರವರು ನೀಡಿದ ದೂರಿನಂತೆ ಕೊಂಕಣ ರೈಲ್ವೆ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 03/2011 ಕಲಂ 379 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಅಪಘಾತ ಪ್ರಕರಣಗಳು
  • ಕಾರ್ಕಳ: ದಿನಾಂಕ: 29/04/2011 ರಂದು ಶ್ರೀ ಸೂರಪ್ಪ ಶಟ್ಟಿ (75) ಬಿನ್ ದಿವಂಗತ ಅಪ್ಪು ಶೆಟ್ಟಿ ವಾಸ: ಗುಂಡ್ಯಡ್ಕ ಕುಕ್ಕುಂದೂರು ಗ್ರಾಮ ಕಾರ್ಕಳ ತಾಲೂಕು ಎಂಬವರು ತನ್ನ ಸೊಸೆಯ ಮಗಳ ಮೆಹಂದಿ ಕಾರ್ಯಕ್ರಮಕ್ಕೆ ಮುನಿಯಾಲಿಗೆ ಹೋಗಿದ್ದು ಮೆಹಂದಿ ಕಾರ್ಯಕ್ರಮ ಮುಗಿಸಿ ಬೆಳಿಗ್ಗೆ ಮುನಿಯಾಲಿನಿಂದ ಬಸ್ಸಿನಲ್ಲಿ ವಾಪಾಸು ಕಾರ್ಕಳಕ್ಕೆ ಹೊರಟು ಬಂದು ಕಾಬೆಟ್ಟು ಜಂಕ್ಷನ್‌ನ ಬಳಿ ಬಸ್ಸಿನಿಂದ ಇಳಿದು ಗುಂಡ್ಯಡ್ಕ ಕಡೆಗೆ ರಸ್ತೆಯ ಎಡ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಕಾರ್ಕಳ ಬಸ್ಸು ನಿಲ್ದಾಣದ ಕಡೆಯಿಂದ ಜೋಡುರಸ್ತೆ ಕಡೆಗೆ ಕೆಎ-20 ಆರ್‌-6412 ನೇ ಮೋಟಾರು ಸೈಕಲ್ ಸವಾರನು ಮೋಟಾರು ಸೈಕಲನ್ನು ಅತೀವೇಗ ಮತ್ತು ಅಜಾಗರುಕತೆಯಿಂದ ಚಲಾಯಿಸಿಕೊಂಡು ಬಂದು ಅವರಿಗೆ ಡಿಕ್ಕಿ ಹೊಡೆದ ಪರಿಣಾಮ ಅವರು ರಸ್ತೆಗೆ ಬಿದ್ದು ಮೈ ಕೈಗೆ ತರಚಿದ ಗಾಯವಾಗಿದ್ದು, ಬಲ ಕಾಲಿನ ಮೂಳೆ ಮುರಿತವುಂಟಾಗಿರುತ್ತದೆ ಎಂಬುದಾಗಿ ಸೂರಪ್ಪ ಶಟ್ಟಿ ರವರು ನೀಡಿದ ದೂರಿನಂತೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 48/2011 ಕಲಂ 279,337 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
  • ಕಾರ್ಕಳ: ದಿನಾಂಕ: 28।04.2011 ರಂದು ರಾತ್ರಿ 20:00 ಗಂಟೆಗೆ ಕಾರ್ಕಳ ತಾಲೂಕು, ಮುಂಡ್ಕೂರು ಗ್ರಾಮದ ಇನ್ನಾ ಕ್ರಾಸ್ ಎಂಬಲ್ಲಿ ಆಟೋ ರಿಕ್ಷಾ ನಂಬ್ರ ಕೆ.ಎ.20-9154 ನೇದರ ಚಾಲಕ ರವಿ ಶೆಟ್ಟಿ ಎಂಬಾತನು ಸದ್ರಿ ರಿಕ್ಷಾವನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಸೈಕಲ್‌ ಸವಾರಿ ಮಾಡುತ್ತಿದ್ದ ರತ್ನಾಕರ ಎಂಬವರಿಗೆ ಎದುರಿನಿಂದ ಢಿಕ್ಕಿ ಹೊಡೆದ ಪರಿಣಾಮ ಗಾಯಾಳು ರತ್ನಾಕರರವರಿಗೆ ತಲೆಗೆ ಪೆಟ್ಟಾಗಿದ್ದು ಚಿಕಿತ್ಸೆ ಬಗ್ಗೆ ಮಂಗಳೂರು ಎ.ಜೆ. ಆಸ್ಪತ್ರೆಗೆ ಚಿಕಿತ್ಸೆ ಬಗ್ಗೆ ದಾಖಲಿಸಲಾಗಿರುತ್ತದೆ. ಎಂಬುದಾಗಿ ಗಾಯಾಳುವಿನ ಅಣ್ಣ ದಾಮೋದರ ಆಚಾರ್ಯ (48) ಬಿನ್ ದಿವಂಗತ ನಾರಾಯಣ ಆಚಾರ್ಯ, ವಾಸ: ಅರದಾಳ ಮನೆ, ಮುಂಡ್ಕೂರು ಗ್ರಾಮ, ಕಾರ್ಕಳ ತಾಲೂಕು ಎಂಬವರು ನೀಡಿದ ದೂರಿನಂತೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 31/2011 ಕಲಂ 279,337 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಮೃತಪಟ್ಟ ಪ್ರಕರಣ
  • ಕಾರ್ಕಳ: ದಿನಾಂಕ 29.04.2011 ರಂದು ಸಂಜೆ 4:00 ಗಂಟೆ ಸಮಯಕ್ಕೆ ಪಿರ್ಯಾಧಿ ನೀಲಯ್ಯ ಬಿನ್ ಚಕ್ಕಿ ವಾಸ:ಬೋರುಗುಡ್ಡೆ, ಅಂಬಿಗಾ ನಿವಾಸ, ಎಲಿಯೂರು ಅಂಚೆ, ನೆಲ್ಲಿಕಾರು ಗ್ರಾಮ, ಮಂಗಳೂರು ತಾಲೂಕು, ಎಂಬವರ ಅಕ್ಕನ ಮಗ ಶುಭಕರ (23) ಎಂಬಾತನು ಕಾರ್ಕಳ ತಾಲೂಕು, ದುರ್ಗಾ ಗ್ರಾಮದ ಮಲೆ ಹಿತ್ಲು, ಎಂಬಲ್ಲಿನ ವಿರೂಪಾಕ್ಷ ಮರಾಠ ಎಂಬವರ ಹಳೆಯ ಮನೆಯ ಕೆಲಸ ಮಾಡಿ ಮನೆಯ ಬಳಿ ಇರುವ ಮೀಯಾರು ಹೊಳೆಗೆ ಸ್ನಾನಕ್ಕೆ ಹೋದಾಗ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಮೃತಪಟ್ಟಿರುವುದಾಗಿದೆ ಎಂಬುದಾಗಿ ನೀಲಯ್ಯ ರವರು ನೀಡಿದ ದೂರಿನಂತೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಸಂಖ್ಯೆ 17/2011 ಕಲಂ 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

Daily Crime Reported on 30/04/2011 at 07:00 Hrs

ಕುತ್ತಿಗೆಯಿಂದ ಸರ ಎಳೆದು ಪರಾರಿ
  • ಪಡುಬಿದ್ರಿ: ದಿನಾಂಕ 29।04.2011 ರಂದು 14.10 ಗಂಟೆಗೆ ಪಿರ್ಯಾದಿದಾರರಾದ ಶ್ರೀಮತಿ ಜಯಂತಿ ಪ್ರಾಯ 41 ವರ್ಷ ಗಂಡ: ದಿ: ಟಿ.ಸಿ ಪ್ರೇಮರಾಜನ್ ವಾಸ: ಬ್ರಹ್ಮಾರಿ ಕೆಲ್ಲಾರು , ನಂದಿಕೂರು ಗ್ರಾಮ, ಉಡುಪಿ ತಾಲೂಕು ಎಂಬವರು ನಂದಿಕೂರು ಗ್ರಾಮದ ಕೆಲ್ಲಾರು ನರಸಿಂಹ ಅಯಿಲ್ ಮಿಲ್‌‌ ಬಳಿಯ ಮಣ್ಣು ರಸ್ತೆಯಲ್ಲಿ ನಡೆದು ಕೊಂಡು ಹೋಗುತ್ತಿರುವಾಗ ಓರ್ವ ಸುಮಾರು 30 ರಿಂದ 35 ಪ್ರಾಯದ ಅಪರಿಚಿತ ವ್ಯಕ್ತಿ ಜಯಂತಿ ರವರ ತಲೆಗೆ ಗೊಬ್ಬರ ಸೊಪ್ಪಿನ ದೊಣ್ಣೆಯಿಂದ ಹೊಡೆದು ಬಲ ಕೈಗೆ ಚೂರಿಯಿಂದ ಗೀರಿ ಗಾಯಗೊಳಿಸಿ ಕುತ್ತಿಗೆಯಲ್ಲಿದ್ದ ಸುಮಾರು 40,000/- ಮೌಲ್ಯದ ಚಿನ್ನದ ಲಾಂಗ್‌ ಸರವನ್ನು ಬಲತ್ಕಾರವಾಗಿ ಸೆಳೆದುಕೊಂಡು ಪರಾರಿಯಾಗಿರುವುದಾಗಿದೆ ಎಂಬುದಾಗಿ ಶ್ರೀಮತಿ ಜಯಂತಿರವರು ನೀಡಿದ ದೂರಿನಂತೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 64/2011 ಕಲಂ 394 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಅಪಘಾತ ಪ್ರಕರಣಗಳು
  • ಹೆಬ್ರಿ: ದಿನಾಂಕ: 29।04.11 ರಂದು ಬೆಳಿಗ್ಗೆ ರಘುನಂದನ.ಬಿ.ಎಸ್(36), ಬಿನ್ ದಿವಂಗತ ಬಿ.ಶಂಕರನಾರಾಯಣ ರಾವ್‌, ವಾಸ: ಬ್ರಹ್ಮನ ಕೋಡು, ನಾರ್ವೆ ಪೋಸ್ಟ್‌, ಕೊಪ್ಪ ತಾಲೂಕು, ಚಿಕ್ಕಮಗಳೂರು ಜಿಲ್ಲೆ, ಎಂಬವರು ಕುಂದಾಪುರದ ಸಿದ್ದಾಪುರದಿಂದ ಕೊಪ್ಪ ತಾಲೂಕಿನ ಬ್ರಹ್ಮನ ಕೋಡಿಗೆ ಹೋಗಲು ಕೆಎ.17.ಎಂಎ.9900 ನೇ ಪೋರ್ಡ್‌ ಐಕಾನ್‌ ಕಾರಿನಲ್ಲಿ ಹೊರಟು ಹೆಬ್ರಿ –ಆಗುಂಬೆ ರಸ್ತೆಯಲ್ಲಿ ಹೋಗುತ್ತಿರುವಾಗ ಸಮಯ 07-20 ಗಂಟೆಗೆ ಕಾರ್ಕಳ ತಾಲೂಕು ನಾಡ್ಪಾಲು ಗ್ರಾಮದ ಆಗುಂಬೆ 2ನೇ ತಿರುವಿನ ಬಳಿ ತಿರುಗುವಾಗ ಎದುರಿನಿಂದ ಆಗುಂಬೆ ಕಡೆಯಿಂದ ಹೆಬ್ರಿ ಕಡೆಗೆ ಆರೋಪಿತ ನವೀನ ಹವಾಲ್ದಾರ ಎಂಬವರು ತನ್ನ ಕೆಎ.20.ಪಿ.1368ನೇ ಪೋರ್ಡ್‌ ಪಿಯೇಸ್ಟಾ ಕಾರನ್ನು ಅತಿವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ರಸ್ತೆಯ ತೀರಾ ಬಲಬದಿಗೆ ಬಂದು ರಘುನಂದನ.ಬಿ.ಎಸ್ ರವರ ಕಾರಿಗೆ ಢಿಕ್ಕಿ ಹೊಡೆದ ಪರಿಣಾಮ ಅವರ ಕಾರಿನ ಮುಂಭಾಗ ಜಖಂಗೊಂಡಿರುತ್ತದೆ ಅಲ್ಲದೇ ಆರೋಪಿತನ ಕಾರಿನ ಮುಂಭಾಗವು ಸಹ ಜಖಂಗೊಂಡಿರುತ್ತದೆ. ಈ ಅಪಘಾತದಿಂದ ಯಾರಿಗೂ ಗಾಯವಾಗಿರುವುದಿಲ್ಲ ಎಂಬುದಾಗಿ ರಘುನಂದನ.ಬಿ.ಎಸ್ ನೀಡಿದ ದೂರಿನಂತೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 20/2011 ಕಲಂ 279 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
  • ಶಂಕರನಾರಾಯಣ: ದಿನಾಂಕ 29/04/2011 ರಂದು 16:30 ಗಂಟೆಗೆ ಕುಂದಾಪುರ ತಾಲೂಕು ಸಿದ್ದಾಪುರ ಗ್ರಾಮದ ಜನ್ಸಾಲೆ ಎಂಬಲ್ಲಿ ಸಿದ್ದಾಪುರ ಕಡೆಯಿಂದ ಅಂಪಾರು ಕಡೆಗೆ ಹನುಮಾನ್‌ ಕಂಪೆನಿಯ ನಂಬ್ರ ಕೆ।ಎ 20 ಬಿ 7561 ನೇ ಬಸ್ಸನ್ನು ಅದರ ಚಾಲಕ ರಾಜೇಂದ್ರ ಎಂಬವರು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿ ಕುಂದಾಪುರ ಕಡೆಯಿಂದ ಸಿದ್ದಾಪುರ ಕಡೆಗೆ ಸಾಗುತ್ತಿದ್ದ ಕೆ.ಎ20/6652 ನೇ ಅಂಬಾಸಿಡರ್‌ ಕಾರಿಗೆ ರಬಸದಿಂದ ಡಿಕ್ಕಿ ಹೋಡೆದ ಪರಿಣಾಮ ಅಂಬಾಸಿಡರ್‌ ಕಾರಿನಲ್ಲಿದ್ದ ಶೇಖ್‌ಮೀರಾ ಸಾಹೇಬರ ತಲೆಗೆ ಮೈಗೆ ತೀವೃ ಗಾಯವಾಗಿದ್ದು ಅಲ್ಲದೇ .ಸದ್ರಿ ಕಾರಿನಲ್ಲಿದ್ದ ಮೂರು ಜನ ಹೆಂಗಸರು ಹಾಗೂ ಒಬ್ಬರು ಗಂಡಸು ಗಾಯಗೊಂಡಿದ್ದು, ಸದ್ರಿಯವರುಗಳನ್ನು 108 ಅಂಬುಲೆನ್ಸ್‌ನಲ್ಲಿ ಕುಂದಾಪುರ ಆಸ್ಪತ್ರೆಗೆ ಸಾಗಿಸಿದ್ದು .ಕುಂದಾಪುರ ಸರಕಾರಿ ಆಸ್ಪತ್ರೆಯಲ್ಲಿ ಪರೀಕ್ಷೀಸಿದಾಗ ಶೇಖ್‌ಮೀರಾ ಸಾಹೇಬರು ಹಾಗೂ ಉಳಿದಿಬ್ಬರಾದ ಶ್ರೀಮತಿ ತುಂಗಾ (35) ಹಾಗೂ ಗುಲಾಬಿ (36) ರವರು ಮೃತ ಪಟ್ಟಿರುವುದಾಗಿಯೂ ತೀವೃ ಗಾಯಗೊಂಡ ಹಾಲಪ್ಪ ಮತ್ತು ಶೈಲಾರವರನ್ನು ನಂತರ ಚಿನ್ಮಯಿ ಆಸ್ಪತ್ರೆ ಕುಂದಾಪುರಕ್ಕೆ ಚಿಕಿತ್ಸೆಗೆ ಕರದೊಯ್ದು ನಂತರ ಅಲ್ಲಿಂದ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಿಸಿರುವುದಾಗಿದೆ ಎಂಬುದಾಗಿ ಅಫೀಜ್ (24) ಬಿನ್ ಮಹಮ್ಮದ್ ವಾಸ: ಜವೂರಾ ಮಂಜಿಲ್ ಜನ್ಸಾಲೆ, ಸಿದ್ಧಾಪುರ ಗ್ರಾಮ, ಕುಂದಾಪುರ ತಾಲೂಕು ಎಂಬವರು ನೀಡಿದ ದೂರಿನಂತೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 39/2011 ಕಲಂ ಕಲಂ:279, 338 304(ಎ) ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
  • ಬೈಂದೂರು: ದಿನಾಂಕ 28/04/2011 ರಂದು ಸಮಯ 19:45 ಘಂಟೆಗೆ ರಾಮ ಪೂಜಾರಿ (35) ಬಿನ್ ಅಣ್ಣಪ್ಪ ಪೂಜಾರಿ ವಾಸ ಚ್ವೌಳಿಗುಡ್ಡೆ ಹೆರಂಜಾಲು ಗ್ರಾಮ ಕುಂದಾಪುರ ತಾಲೂಕು ಎಂಬವರು ಸೈಕಲ್‌ನಲ್ಲಿ ಕಂಬದಕೋಣಿಯಿಂದ ಹೆರಂಜಾಲು ಗ್ರಾಮದ ಚ್ವೌಳಿಗುಡ್ಡೆಗೆ ಸವಾರಿ ಮಾಡಿಕೊಂಡು ಹೋಗುತ್ತಿರುವಾಗ ಚ್ವೌಳಿಗುಡ್ಡೆ ಎಂಬಲ್ಲಿ ಅವರ ಸೈಕಲ್‌ಗೆ ಯಾವುದೋ ಒಂದು ಅಪರಿಚಿತ ವಾಹನ ಚಾಲಕ ತನ್ನ ಬಾಬ್ತು ವಾಹನವನ್ನು ಕಾಲ್ತೋಡು ಕಡೆಯಿಂದ ಕಂಬದಕೋಣೆ ಕಡೆಗೆ ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಡಿಕ್ಕಿ ಹೊಡೆದ ಪರಿಣಾಮ ಅವರು ಸೈಕಲ್‌ ಸಮೇತ ಕೆಳಗೆ ಬಿದ್ದುದರಿಂದ ಅವರ ಹಣೆಗೆ ಮತ್ತು ಬಲ ಕಾಲಿನ ಮೊಣ ಗಂಟಿನ ಕೆಳಗೆ ಗಾಯವಾಗಿದ್ದು ರಾತ್ರಿಯಾದುದರಿಂದ ಅಪಘಾತವೆಸಗಿದ ವಾಹನ ಹಾಗೂ ನಂಬ್ರ ನೋಡಲು ಆಗಿರುವುದಿಲ್ಲ, ಡಿಕ್ಕಿ ಹೊಡೆದ ವಾಹನವನ್ನು ಆರೋಪಿಯು ನಿಲ್ಲಿಸದೇ ಮುಂದಕ್ಕೆ ಚಲಾಯಿಸಿಕೊಂಡು ಹೋಗಿರುವುದಾಗಿದೆ, ಈ ಅಪಘಾತಕ್ಕೆ ಅಪರಿಚಿತ ವಾಹನ ಚಾಲಕನ ಅತೀ ವೇಗ ಮತ್ತು ಅಜಾಗರೂಕತೆಯ ಚಾಲನೆಯೇ ಕಾರಣವಾಗಿರುತ್ತದೆ ಎಂಬುದಾಗಿ ರಾಮ ಪೂಜಾರಿ ರವರು ನೀಡಿದ ದೂರಿನಂತೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 94/2011 ಕಲಂ; ಕಲಂ; 279, 337 ಐ।ಪಿ.ಸಿ ಜೊತೆಗೆ 134 (ಎ) ಮತ್ತು (ಬಿ ) ಮೋಟಾರು ವಾಹನ ಕಾಯ್ದೆಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಹಲ್ಲೆ ಪ್ರಕರಣಗಳು
  • ಬೈಂದೂರು: ದಿನಾಂಕ 28/04/2011 ರಂದು 17:30 ಘಂಟೆಗೆ ಕುಂದಾಪುರ ತಾಲೂಕು ಬಿಜೂರು ಗ್ರಾಮದ ಬೈಟು ಮನೆ ಎಂಬಲ್ಲಿ ಪಿರ್ಯಾದಿ ಮಂಜು ದೇವಾಡಿಗ (42) ಬಿನ್ ದಿವಂಗತ ಗೋವಿಂದ ದೇವಾಡಿಗ ಎಂಬವರು ತೋಟದ ತೆಂಗಿನ ಮರಗಳಿಗೆ ನೀರು ಹಾಕುತ್ತಿರುವ ಸಮಯ ಆರೋಪಿಗಳಾದ 1। ಶ್ರೀಮತಿ. ಜಾನಕಿ ಗಂಡ ಶೇಷ ದೇವಾಡಿಗ 2. ನಾಗಮ್ಮ ದೇವಾಡಿಗ ಗಂಡ ರಾಮ ದೇವಾಡಿಗ, 3. ಕಾವೇರಿ ದೇವಾಡಿಗ ಗಂಡ ಜಟ್ಟ ದೇವಾಡಿಗ ಎಂಬವರು ಸಮಾನ ಉದ್ದೇಶದಿಂದ ಬಂದು ನೀನು ಅಂಗಳಕ್ಕೆ ಯಾಕೆ ನೀರು ಹಾಕುತ್ತಿ ಎಂದು ಆಕ್ಷೇಪಿಸಿ, ಅವಾಚ್ಯ ಶಬ್ದಗಳಿಂದ ಬೈದು, ಆರೋಪಿತರು ಅವರ ಕೈಯಲ್ಲಿದ್ದ ಮರದ ದೊಣ್ಣೆಗಳಿಂದ ಮಂಜು ದೇವಾಡಿಗ ರವರ ಎಡ ಕೈ, ಕೊಲು ಕೈಗೆ, ತಲೆಯ ಎಡ ಭಾಗಕ್ಕೆ ಮತ್ತು ಬಲ ಭುಜಕ್ಕೆ ಹೊಡೆದು ಹಲ್ಲೆ ನಡೆಸಿರುವುದಾಗಿದೆ. ಈ ಕೃತ್ಯಕ್ಕೆ ಪಿರ್ಯಾದಿದಾರರು ಮತ್ತು ಆರೋಪಿತರ ನಡುವೆ ಇದ್ದ ಜಾಗದ ತಕರಾರೇ ಕಾರಣವಾಗಿರುತ್ತದೆ. ಎಂಬುದಾಗಿ ಆರೋಪಿಸಿ ಮಂಜು ದೇವಾಡಿಗ ರವರು ನೀಡಿದ ದೂರಿನಂತೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 92/2011 ಕಲಂ 504,324, ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
  • ಬೈಂದೂರು: ದಿನಾಂಕ 28/04/2011 ರಂದು 17:30 ಘಂಟೆಗೆ ಕುಂದಾಪುರ ತಾಲೂಕು ಬಿಜೂರು ಗ್ರಾಮದ ಬೈಟು ಮನೆ ಎಂಬಲ್ಲಿ ಪಿರ್ಯಾದಿ ಶ್ರೀಮತಿ ಜಾನಕಿ ದೇವಾಡಿಗ (40) ಗಂಡ ರಾಜು ದೇವಾಡಿಗ ಎಂಬವರ ಮನೆಯ ಅಂಗಳಕ್ಕೆ ಆರೋಪಿ ಮಂಜು ದೇವಾಡಿಗ ಪ್ರಾಯ 42 ವರ್ಷ ತಂದೆ; ದಿ। ಗೋವಿಂದ ದೇವಾಡಿಗ ವಾಸ; ಬೈಟು ಮನೆ ಬಿಜೂರು ಗ್ರಾಮ ಕುಂದಾಪುರ ತಾಲೂಕು ಎಂಬವರು ಅಕ್ರಮ ಪ್ರವೇಶ ಮಾಡಿ ನೀನು ನನ್ನ ವಿರುದ್ದ ಪೊಲೀಸ್‌ ಠಾಣೆಗೆ ದೂರು ನೀಡಿದ್ದು ಯಾಕೆ ? ಎಂದು ಹೇಳಿ ಮನೆಯಿಂದ ಒಂದು ಕಬ್ಬಿಣದ ರಾಡ್‌‌ನ್ನು ತಂದು ಅವರ ತಲೆಗೆ ಮೈ ಕೈಗೆ ಹಲ್ಲೆ ನಡೆಸಿದಾಗ ಬಿಡಿಸಲು ಬಂದ ಅವರ ಸಂಬಂದಿಗಳಾದ ನಾಗಮ್ಮ, ಕಾವೇರಿ ಎಂಬವರಿಗೂ ಕಬ್ಬಿಣದ ರಾಡ್‌‌ನಿಂದ ಹಾಗೂ ಕೈಯಿಂದ ಹಲ್ಲೆ ನಡೆಸಿದ್ದು ಈ ಹಲ್ಲೆಯಿಂದ ಶ್ರೀಮತಿ ಜಾನಕಿ ದೇವಾಡಿಗ ರವರ ತಲೆಯ ಎಡ ಭಾಗಕ್ಕೆ ರಕ್ತ ಗಾಯ ಎಡ ಭುಜಕ್ಕೆ ಒಳ ಜಖಂ, ಹಾಗೂ ನಾಗಮ್ಮ ಎಂಬವರ ತಲೆಯ ಎಡ ಭಾಗಕ್ಕೆ ಗಾಯ ಮತ್ತು ಎಡ ಕೈಗೆ ತರಚಿದ ಗಾಯವಾಗಿದ್ದು ಕಾವೇರಿ ಎಂಬವರ ಮುಖಕ್ಕೆ ತರಚಿದ ಗಾಯವಾಗಿರುತ್ತದೆ. ಈ ಕೃತ್ಯಕ್ಕೆ ಪಿರ್ಯಾದಿದಾರರು ಆರೋಪಿಯ ವಿರುದ್ದ ಪೊಲೀಸ್‌ ಠಾಣೆಗೆ ದೂರು ನೀಡಿದ್ದೇ ಕಾರಣವಾಗಿರುತ್ತದೆ. ಎಂಬುದಾಗಿ ಆರೋಪಿಸಿ ಶ್ರೀಮತಿ ಜಾನಕಿ ದೇವಾಡಿಗ ರವರು ನೀಡಿದ ದೂರಿನಂತೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 93/2011 ಕಲಂ; 447, 323, 324 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
  • ಹಿರಿಯಡ್ಕ: ದಿನಾಂಕ 29/04/2011 ರಂದು 12:00 ಗಂಟೆಗೆ ಉಷಾ (30) ಗಂಡ ಹರೀಶ್, ವಾಸ: ಬಾಂದಪಲ್ಕೆ ಮನೆ, ಪಂಚನಬೆಟ್ಟು ಎಂಬವರು ಬೊಮ್ಮರಬೆಟ್ಟು ಗ್ರಾಮದ ಸಾಣೆಕಲ್ಲು ನಿವಾಸಿ ಆರೋಪಿ ಡಾ. ಪಿ.ಜಿ. ಕೃಷ್ಣ ಮೂರ್ತಿ ಎಂಬಾತನ ಮನೆಗೆ ತೆರಳಿ ಆತನ ಹೆಸರಿನಲ್ಲಿ ಬಂದ ನೋಂದಾಯಿತ ಅಂಚೆಯನ್ನು ಸ್ವೀಕರಿಸುವಂತೆ ಆರೋಪಿಯಲ್ಲಿ ವಿನಂತಿಸಿಕೊಂಡಾಗ, ಆರೋಪಿಯು ನೀನು ಯಾರು, ಯಾಕೆ ಇಲ್ಲಿಗೆ ಬಂದಿದ್ದೀ ಎಂಬುವುದಾಗಿ ಅವಾಚ್ಯ ಶಬ್ದಗಳಿಂದ ಬೈಯ್ದು, ನ್ಯಾಯ ಸಮ್ಮತವಾದ ಸರಕಾರಿ ಕರ್ತವ್ಯ ನಿರ್ವಹಿಸಲು ಅಡ್ಡಿಪಡಿಸಿದ್ದು, ನೋಂದಾಯಿತ ಅಂಚೆಯನ್ನು ಸ್ವೀಕರಿಸಲು ನಿರಾಕರಿಸಿದ್ದನ್ನು ಕಂಡು, ಅವರು ವಾಪಾಸು ಹೊರಟು ಬರುವಾಗ, ಮುಂದಕ್ಕೆ ಹೋಗದಂತೆ ಅಕ್ರಮವಾಗಿ ತಡೆದು, ಕೈಯಿಂದ ದೂಡಿದ ಸಮಯ ಅವರ ಚೂಡಿದಾರದ ಟಾಪಿನ ಬಲಕೈಯ್ಯ ತೋಳು ಹರಿದುಹೋಗಿರುತ್ತದೆ ಎಂಬುದಾಗಿ ಆರೋಪಿಸಿ ಉಷಾರವರು ನೀಡಿದ ದೂರಿನಂತೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 23/2011 ಕಲಂ 504, 353, 341, 354, ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

Friday, April 29, 2011

Daily Crime Reported on 29/04/2011 17:00 Hrs

ಅಪಘಾತ ಪ್ರಕರಣ



  • ಹೆಬ್ರಿ: ದಿನಾಂಕ: 29।04।11 ರಂದು ಬೆಳಿಗ್ಗೆ ಸುಮಾರು 08-30 ಗಂಟೆಗೆ ಸತೀಶ ಮೊಗವೀರ (28), ತಂದೆ: ದಿ.ನಾಗರಾಜ ಮೊಗವೀರ, ವಾಸ: ಜಿಲ್ಲರ್‌‌ಬೆಟ್ಟು ಮನೆ, ಮಹಾಗಣಪತಿ ದೇವಸ್ಥಾನದ ಹತ್ತಿರ, ಹಟ್ಟಿಯಂಗಡಿ ಗ್ರಾಮ, ಕುಂದಾಪುರ ರವರು ತನ್ನ ಬಾಬ್ತು ಕೆಎ.20.ಜೆ.2427 ನೇ ಮೋಟಾರ್ ಸೈಕಲ್‌ನಲ್ಲಿ ಕುಚ್ಚೂರು ರಸ್ತೆಯಲ್ಲಿ ಹೋಗುತ್ತಿದ್ದು ಅವರು ಕಾರ್ಕಳ ತಾಲೂಕು ಕುಚ್ಚೂರು ಗ್ರಾಮದ ರಾಗಿಹಕ್ಲು ಎಂಬಲ್ಲಿ ತಲುಪುವಾಗ ಅವರ ಎದುರುಗಡೆಯಿಂದ ಅಂದರೆ ಕುಚ್ಚೂರು ಕಡೆಯಿಂದ ಹೆಬ್ರಿ ಕಡೆಗೆ ಕೆಎ.20.ಎ.8994ನೇ ಮಾರುತಿ ಓಮ್ನಿ ಕಾರು ಚಾಲಕ ರಾಜೀವ ಕುಲಾಲ್‌ ಎಂಬವರು ತನ್ನ ಬಾಬ್ತು ಕಾರನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ರಸ್ತೆಯ ತೀರಾ ಬಲಬದಿಗೆ ಬಂದು ಫಿರ್ಯಾದಿ ಸತೀಶ ಮೊಗವೀರವರ ಮೋಟಾರ್ ಸೈಕಲ್‌ಗೆ ಢಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ಮೋಟಾರ್ ಸೈಕಲ್‌ ಸಮೇತ ರಸ್ತೆಗೆ ಬಿದ್ದು ಗಾಯಗೊಂಡಿದ್ದು ಈ ಬಗ್ಗೆ ಹೆಬ್ರಿ ಠಾಣೆಯಲ್ಲಿ ಅಕ್ರ: 19/11, ಕಲಂ: 279, 337 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


  • ಉಡುಪಿ: ದಿನಾಂಕ: 29/04/2011 ರಂದು ಬೆಳಿಗ್ಗೆ 11:55 ಗಂಟೆ ಸಮಯಕ್ಕೆ ಫಿರ್ಯಾದಿದಾರರಾದ ಎಜಾಜ್ ಅಹಮ್ಮದ್ (22) ತಂದೆ: ಮಹಮ್ಮದ್ ಇಕ್ಬಾಲ್ ಶೇಕ್ ವಾಸ:ಸುಹೈಲ್ ಮಂಜಿಲ್ ಬೈಲಜಿಡ್ಡ, ಉದ್ಯಾವರ ಉಡುಪಿ ಇವರು ತನ್ನ ಬಾಬ್ತು ಮೋಟಾರ್ ಸೈಕಲ್ ನಂಬ್ರ ಕೆಎ 20 ಡಬ್ಲ್ಯೂ 2696 ನ್ನು ಚಲಾಯಿಸಿಕೊಂಡು ಡಯಾನ ವೃತ್ತ ಕಡೆಯಿಂದ ಉಡುಪಿ ಬಸ್ ನಿಲ್ದಾಣದ ಕಡೆಗೆ ಹೋಗುವರೇ ಕೆ।ಎಂ ರಸ್ತೆಯಲ್ಲಿ ಚರ್ಚ್ ನ ಮುಂಭಾಗ ಹೋಗುತ್ತಿರುವಾಗ ಪಿರ್ಯಾದುದಾರರ ಹಿಂದಿನಿಂದ ಕೆಎ 20 ಬಿ 1068 ದುರ್ಗಾಂಬಾ ಬಸ್ಸು ಚಾಲಕನು ತನ್ನ ಬಸ್ಸನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಢಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿ ಎಜಾಜ್ ಅಹಮ್ಮದ್ ಮೋಟಾರ್ ಸೈಕಲ್ ಸಮೇತ ರಸ್ತೆಗೆ ಮಗುಚಿ ಬಿದ್ದಿದ್ದು, ಅವರ ಬಲಕಾಲಿನ ಮೊಣಗಂಟಿಗೆ ತರಚಿದ ರಕ್ತ ಗಾಯ ಉಂಟಾಗಿದ್ದು, ಅಲ್ಲದೇ ಕಾಲಿನ ಒಳಗಡೆ ನೋವು ಉಂಟಾಗಿರುತ್ತದೆ । ಈ ಬಗ್ಗೆ ಉಡುಪಿ ನಗರ ಠಾಣೆಯಲ್ಲಿ ಅ.ಕ್ರ: 156/2011 ಕಲಂ: 279, 337ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ
    ಹಲ್ಲೆ ಪ್ರಕರಣ


  • ಉಡುಪಿ: ದಿನಾಂಕ 28/04/2011 ರಂದು ಮದ್ಯಾಹ್ನ ಸುಮಾರು 04:15 ರ ಸಮಯಕ್ಕೆ ಫಿರ್ಯಾದಿ ಗುರುರಾಜ ಉಪಾಧ್ಯ (63) ತಂದೆ: ರಾಮಕೃಷ್ಣ ಉಪಾಧ್ಯ ವಾಸ:ಉಪಾಧ್ಯ ನಿವಾಸ ಕುಂಜಿಬೆಟ್ಟು ಉಡುಪಿ ಅವರು ತನ್ನ ಮನೆಗೆ ಸಾರ್ವಜನಿಕ ದಾರಿಯಾದ ಗೋಪಾಲ ಉಪಾಧ್ಯನ ಮನೆಯ ಎದುರುಗಡೆಯಿಂದ ಬರುತ್ತಿದ್ದಾಗ ಗೋಪಾಲ ಉಪಾಧ್ಯ ಎಂಬವರು ಪಿರ್ಯಾದುದಾರರ ವಾಹನವನ್ನು ತಡೆದು ನಿಲ್ಲಿಸಿ, ಗೋಪಾಲ ಉಪಾಧ್ಯ ಮತ್ತು ಅವನ ಹೆಂಡತಿ ಫಿರ್ಯಾದಿ ಗುರುರಾಜ ಉಪಾಧ್ಯರವರ ಮೇಲೆ ಹಲ್ಲೆ ಮಾಡಿ, ಅವರ ವಾಹನವನ್ನು ದೂಡಿ ಹಾಕಿ ಕಾಲಿನಿಂದ ತುಳಿದು, ಬೇವರ್ಸಿ, ಬೋಳಿಮಗ ನಿನಗೆ ಮತ್ತು ನಿನ್ನ ಮನೆಯವರಿಗೆ ತುಂಬಾ ಅಹಂಕಾರ ಬಂದಿದೆ ಎಂದು ಅವಾಚ್ಯ ಶಬ್ದಗಳಿಂದ ಬೈದು, ನಿನ್ನನ್ನು ಮತ್ತು ನಿನ್ನ ಮನೆಯವರನ್ನು ಕೊಲ್ಲದೇ ಬಿಡುವುದಿಲ್ಲ ಎಂದು ಹೇಳುತ್ತಾ ತಡೆಯಲು ಬಂದ ಪಿರ್ಯಾದುದಾರರ ಮಕ್ಕಳಿಗೆ ಮತ್ತು ಹೆಂಡತಿಗೆ ಕೋಲಿನಿಂದ ಹಲ್ಲೆಗೆ ಮುಂದಾಗಿದ್ದು ಹಲ್ಲೆಯಿಂದ ಫಿರ್ಯಾದಿ ಗುರುರಾಜ ಉಪಾಧ್ಯರವರ ಮುಖಕ್ಕೆ, ಸೊಂಟಕ್ಕೆ ಮತ್ತು ಕೈಕಾಲಿಗೆ ತೀವೃ ತರಹದ ರಕ್ತಗಾಯ ಉಂಟಾಗಿದ್ದು , ಉಡುಪಿ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದು ಈ ಬಗ್ಗೆ ಫಿರ್ಯಾದಿದಾರರು ನೀಡಿದ ದೂರಿನಂತೆ ಉಡುಪಿ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 154/2011 ಕಲಂ: 341, 323, 324, 504,506 R/W 34 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ


  • ಉಡುಪಿ: ದಿನಾಂಕ 28-04-11ರಂದು ಗೋಪಾಲ ಉಪಾಧ್ಯ (46) ತಂದೆ: ಬಿ ಆರ್ ರಾಮಕೃಷ್ಣ ಉಪಾಧ್ಯ ವಾಸ: ಉಪಾಧ್ಯಾಯ ಕಂಪೌಂಡ್ ಗಣೇಶ್ ಸ್ಟಾಪ್ ಹತ್ತಿರ ಬುಡ್ನಾರು ಕುಂಜಿಬೆಟ್ಟು,ಉಡುಪಿ ಮನೆಯಲ್ಲಿರುವಾಗ್ಗೆ ಅವರ ಮನೆಯ ಎದುರಿನ ಕಾಲುದಾರಿಯ ಕಲ್ಲುಗಳನ್ನು ತೆಗೆಯುತ್ತಿದ್ದ ಶಬ್ದ ಕೇಳಿ ಸುಮಾರು 16:15ಗಂಟೆಯ ಸಮಯಕ್ಕೆ ಹೊರಗೆ ಬಂದು ನೋಡಿದಾಗ ಆಪಾದಿತ ಶ್ರೀನಿವಾಸ ಉಪಧ್ಯಾಯನು ಪಿರ್ಯಾದಿದಾರರ ಕಾಲುದಾರಿಯ ಬಳಿಯ ತೆಂಗಿನ ಕಟ್ಟೆಯ ಕಲ್ಲುಗಳನ್ನು ತೆಗೆದು ಬಾವಿಗೆ ಹಾಕುತ್ತಿದ್ದು, ಪಿರ್ಯಾದಿ ಗೋಪಾಲ ಉಪಾಧ್ಯ ಬಂದು ತಡೆಯುತ್ತಿದ್ದಾಗ, ಇನ್ನೊಬ್ಬ ಆಪಾದಿತ ಗುರುರಾಜ ಉಪಾಧ್ಯಾಯ ಪಿರ್ಯಾದಿದಾರರನ್ನು ಉದ್ದೇಶಿಸಿ ಬೋಳಿಮಗನೇ, ಸೂಳೆ ಮಗನೆ ನೀನು ಎಲ್ಲಿಂದ ಬಂದು ಇಲ್ಲಿ ರಾಜ್ಯಭಾರ ಮಾಡುತ್ತಿ, ನಮ್ಮ ರಸ್ತೆಯನ್ನು ಅಕ್ರಮ ಮಾಡುತ್ತಿಯಾ ಎಂದು ಅವಾಚ್ಯ ಶಬ್ದಗಳಿಂದ ಬೈದು, ಅಪಾದಿತ ಶ್ರೀನಿವಾಸ ಉಪಾಧ್ಯಾಯನು ಪಿರ್ಯಾದಿ ಗೋಪಾಲ ಉಪಾಧ್ಯರವರಿಗೆ ಕೊತ್ತಳಿಗೆಯಿಂದ ಕೈಗೆ, ಬೆನ್ನಿಗೆ, ಹೊಡೆದಿರುತ್ತಾರೆ। ಪಿರ್ಯಾದಿದಾರರನ್ನು ತಪ್ಪಿಸಲು ಬಂದ ಪಿರ್ಯಾದಿದಾರರ ಹೆಂಡತಿ ಗೀತಾ ಉಪಾಧ್ಯಾಯರಿಗೂ ಹೊಡೆಯಲು ಬಂದಿದ್ದು, ನಿಮ್ಮಿಬ್ಬರನ್ನು ಸುಮ್ಮನೆ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿದ್ದಾಗಿದೆ. ಪಿರ್ಯಾದಿದಾರರು ಈ ಹಲ್ಲೆಯಿಂದ ಗಾಯಗೊಂಡು ಉಡುಪಿ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು,ಹಲ್ಲೆಯಸಮಯ ಪಿರ್ಯಾದಿದಾರರ ಚಿನ್ನದ ಸರ ಮತ್ತು ಸ್ಟಟಿಕದ ಮಾಲೆ ಬಿದ್ದು ಹೋಗಿರುತ್ತದೆ. ಪಿರ್ಯಾದಿ ಗೋಪಾಲ ಉಪಾಧ್ಯ ಮತ್ತು ಗುರುರಾಜ ಉಪಾಧ್ಯಾಯ ಹಾಗೂ ಶ್ರೀನಿವಾಸ ಉಪಧ್ಯಾಯ ಮನೆಯ ಎದುರಿನ ಕಾಲುದಾರಿಯ ಬಗ್ಗೆ ತಕರಾರು ಇದ್ದು, ಇದೇ ವಿಚಾರದಲ್ಲಿ ಪಿರ್ಯಾದಿದಾರರಿಗೆ ಹಲ್ಲೆ ಮಾಡಿದ್ದಾಗಿರುತ್ತದೆ .ಈ ಬಗ್ಗೆ ಗೋಪಾಲ ಉಪಾಧ್ಯರವರು ಉಡುಪಿ ನಗರ ಠಾಣೆಗೆ ದೂರು ನೀಡಿದ್ದು ಅದರಂತೆ ಉಡುಪಿ ನಗರ ಠಾಣೆಯಲ್ಲಿ ಅ.ಕ್ರ 155/2011 ಕಲಂ: 323 324 504 506 34 ಐಪಿಸಿ ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ



Daily Crime Reported on 29/04/2011 07:00 Hrs

ಅಪಘಾತ ಪ್ರಕರಣಗಳು

  • ಕಾರ್ಕಳ :ದಿನಾಂಕ: 28.04.2011 ರಂದು ಬೆಳಿಗ್ಗೆ 09:30 ಗಂಟೆಗೆ ರಾಜೇಶ್ ಶೆಟ್ಟಿ (42 ವರ್ಷ) ತಂದೆ: ಶಿವರಾರ್ಮ ಶೆಟ್ಟಿ, ವಾಸ: ಶ್ರೀನಿದಿ, ಕೆಮ್ಮಣ್ಣು, ನಿಟ್ಟೆ ಗ್ರಾಮ, ಕಾರ್ಕಳ ತಾಲೂಕುರರು ತನ್ನ ಅಂಬಾಸಿಡರ್ ಕಾರು ನಂಬ್ರ ಸಿ.ಟಿ.ಎಕ್ಸ್ 3394 ನೇದರಲ್ಲಿ ಮುಂಡ್ಕೂರು ಕಡೆಯಿಂದ ಬೆಳ್ಮಣ್ ಕಡೆಗೆ ಬರುತ್ತಾ ಕಾರ್ಕಳ ತಾಲೂಕು ಮುಲ್ಲಡ್ಕ ಗ್ರಾಮದ, ಬೇಬಿನಾಲ್ ಎಂಬಲ್ಲಿಗೆ ತಲುಪುವಾಗ ಎದುರಿನಿಂದ ಅಂದರೆ ಬೆಳ್ಮಣ್ ಕಡೆಯಿಂದ ಮುಂಡ್ಕೂರು ಕಡೆಗೆ ಕೆ.ಎ.20.ಬಿ.0412 ನೇ ಬಸ್ಸನ್ನು ಅದರ ಚಾಲಕ ಪುಷ್ಪರಾಜ್ ಎಂಬವರು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ರಸ್ತೆಯ ತೀರಾ ಬಲಬದಿಗೆ ಬಂದು ಪಿರ್ಯಾದಿದಾರರ ಕಾರಿಗೆ ಡಿಕ್ಕಿಹೊಡೆದ ಪರಿಣಾಮ ಪಿರ್ಯಾದಿದಾರರ ಎಡಕೈ ಮೂಳೆ ಮುರಿತವುಂಟಾಗಿ ಚಿಕಿತ್ಸೆ ಬಗ್ಗೆ ಕಾರ್ಕಳ ಸ್ಪಂದನಾ ಆಸ್ಪತ್ರೆಗೆ ಎಂಬುದಾಗಿ ರಾಜೇಶ್ ಶೆಟ್ಟಿ ರವರು ನೀಡಿದ ದೂರಿನಂತೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ ಅ.ಕ್ರ 30/2011 ಕಲಂ: 279,338 ಐ.ಪಿ.ಸಿ. ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
  • ಕಾಪು :ದಿನಾಂಕ 28-04-2011 ರಂದು 16:00 ಗಂಟೆಗೆ ಉಳಿಯಾರಗೋಳಿ ಗ್ರಾಮದ ಕೊತ್ತಲ್ ಕಟ್ಟೆ ಬಳಿ ,ರಾ.ಹೆ-17 ರಲ್ಲಿ ಆರೋಪಿ ಕೆಎ-19-ಸಿ -5805 ನೇ ಝೇಲೋ ಕಾರಿನ ಚಾಲಕ ಆಶ್ವಿನಿರವರು ಕಾರನ್ನು ಉಡುಪಿ ಕಡೆಯಿಂದ ಕಾಪು ಕಡೆಗೆ ಅತೀ ವೇಗ ಮತ್ತು ನಿರ್ಲಕ್ಷತನದಿಂದ ಚಲಾಯಿಸಿ ಮುಂದುಗಡೆ ಹೋಗುತ್ತಿದ್ದ ಕೆಎ-20-ಬಿ-7936 ನೇ ಟಾಟಾ .ಸಿ. ಎಕ್ಸ್ ಮಿನಿ ಟೆಂಪೋವನ್ನು ಓವರ್ ಟೆಕ್ ಮಾಡುತ್ತಿದಾಗ ಮಿನಿ ಟೆಂಪೋದ ಮುಂದಿನ ಬಲ ಬದಿಗೆ ಡಿಕ್ಕಿ ಹೊಡೆದು ಮುಂದಕ್ಕೆ ಹೋಗಿ ನಿಲ್ಲಿಸಿರುತ್ತಾನೆ. ಮಿನಿ ಟೆಂಪೋದ ಎದುರಿನ ಬಲ ಬದಿ ಹಾಗೂ ಕಾರಿನ ಎಡ ಬಾಗದ ಡೋರ್ ಜಂಕಮ್ ಗೊಂಡಿರುತ್ತದೆ ಎಂಬುದಾಗಿ ಗಣೇಶ್.ಎಂ (28 ವರ್ಷ), ತಂದೆ- ಮಂಜಪ್ಪ ಕೆ, ವಾಸ: ಹಾರತಾಳ ಅಂಚೆ, ಹೊಸನಗರ ರವರು ನೀಡಿದ ದೂರಿನಂತೆ ಕಾಪು ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ ಅ.ಕ್ರ 76/2011 ಕಲಂ: 279 ಐ.ಪಿ.ಸಿ. ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ
ಜೀವ ಬೆದರಿಕೆ ಪ್ರಕರಣಗಳು
  • ಗಂಗೊಳ್ಳಿ :ದಿನಾಂಕ: 27/04/2011ರಂದು ರಾತ್ರಿ ಸಮಯ ಸುಮಾರು 20:15 ಗಂಟೆಗೆ ಶ್ರೀಮತಿ ಸುಶೀಲ ಪೂಜಾರಿ(37 ವರ್ಷ) ಗಂಡ:ಮಹಾಬಲ ಪೂಜಾರಿ, ವಾಸ: ಹೊಸಮನೆ, ಕೊಡಪಾಡಿ, ಗುಜ್ಜಾಡಿ ಗ್ರಾಮ ಕುಂದಾಪುರ ತಾಲೂಕುರರು ಅವರ ಅಂಗಡಿಯಿಂದ ಮನೆಗೆ ಬಂದು ಊಟ ಮಾಡಿ ಮಲಗಿಕೊಂಡಿರುವಾಗ ರಾತ್ರಿ ಸಮಯ ಸುಮಾರು 21:15 ಗಂಟೆಗೆ ಅವರ ಮನೆಯ ಎದುರಿನ ಮಹಾಬಲ ಪೂಜಾರಿಯವರು ಫಿರ್ಯಾದಿದಾರರ ಮನೆಯ ಬಳಿ ಅಕ್ರಮ ಪ್ರವೇಶ ಮಾಡಿ ಬಾಗಿಲನ್ನು ಬಡಿದಾಗ ಫಿರ್ಯಾದಿದಾರರು ಅವರ ಮನೆಯ ಕಿಟಕಿ ಬಾಗಿಲಿನಲ್ಲಿ ನೋಡಿ ಬಾಗಿಲನ್ನು ತೆರೆದು ಹೊರಗೆ ಬಂದಾಗ ಮಹಾಬಲ ಪೂಜಾರಿಯು ಫಿರ್ಯಾದಿದಾರರನ್ನು ಉದ್ದೇಶಿಸಿ ನೀನು ನಮ್ಮ ಜಾಗದಲ್ಲಿ ಅಡಿಕೆ ಸಸಿಗಳನ್ನು ತುಂಡು ಮಾಡಿದ್ದೀಯಾ ಎಂದು ಹೇಳಿ ಅವಾಚ್ಯ ಶಬ್ದಗಳಿಂದ ಬೈದು ನಿನ್ನನ್ನು ಕೊಲ್ಲದೇ ಬಿಡುವುದಿಲ್ಲ ಎಂಬುದಾಗಿ ಜೀವ ಬೆದರಿಕೆ ಹಾಕಿ ಕೈಯಿಂದ ಫಿರ್ಯಾದಿದಾರರ ಜುಟ್ಟನ್ನು ಹಿಡಿದು ತಲೆಯನ್ನು ಬಗ್ಗಿಸಿ ಕೈಯಿಂದ ಹೊಡೆದು ಹೋಗಿರುತ್ತಾನೆ ಎಂಬುದಾಗಿ ಸುಶೀಲ ಪೂಜಾರಿ ರವರು ನೀಡಿದ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 31/2011 ಕಲಂ: 323,447,504,506,354 .ಪಿ.ಸಿ.ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
  • ಗಂಗೊಳ್ಳಿ :ದಿನಾಂಕ:27/04/2011ರಂದು ರಾತ್ರಿ 21:15 ಗಂಟೆಗೆ ಕುಪ್ಪು ಪೂಜಾರ್ತಿ(56 ವರ್ಷ) ಗಂಡ: ದಿ. ಬಾಬು ಪೂಜಾರಿ, ವಾಸ:ಮಾಚಿಮನೆ, ಕೊಡಪಾಡಿ. ಗುಜ್ಜಾಡಿ ಗ್ರಾಮ, ಕುಂದಾಪುರ ತಾಲೂಕುರರ ಹಿಂದಿನ ಮನೆಯ ಸುಶೀಲ ಪೂಜಾರ್ತಿ ಮತ್ತು ಅವಳ ಅಣ್ಣ ಮಹಾಲಿಂಗ ಫಿರ್ಯಾದಿದಾರರ ಜಾಗಕ್ಕೆ ಅಕ್ರಮ ಪ್ರವೇಶ ಮಾಡಿ ಅಡಿಕೆ ಗಿಡಗಳನ್ನು ಕೋಲಿನಿಂದ ಬಡಿದು ಗಿಡಗಳನ್ನು ತುಂಡುಮಾಡಿದ್ದು ಆಗ ಫಿರ್ಯಾದಿದಾರರು ಅಲ್ಲಿಗೆ ಬಂದು ನಮ್ಮ ಜಾಗದ ಗಿಡಗಳನ್ನು ಯಾಕೆ ಕಡಿಯುತ್ತೀಯಾ ಎಂದು ಕೇಳಿದಾಗ ಮಹಾಲಿಂಗನು ಫಿರ್ಯಾದಿದಾರರ ರವಿಕೆಯನ್ನು ಹಿಡಿದೆಳೆದು ಕೈಗಳಿಂದ ಹೊಡೆದು ದೂಡಿ ಹಾಕಿ ಅವಾಚ್ಯ ಶಬ್ದಗಳಿಂದ ಬೈದು ನಿನ್ನನ್ನು ಕೊಲ್ಲದೇ ಬಿಡುವುದಿಲ್ಲವೆಂದು ಕೊಲೆ ಬೆದರಿಕೆ ಹಾಕಿ ಎಂಬುದಾಗಿ ಕುಪ್ಪು ಪೂಜಾರ್ತಿ ರವರು ನೀಡಿದ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 32/2011 ಕಲಂ: 323,447,504,506,354 ಜೊತೆಗೆ 34 .ಪಿ.ಸಿ.ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಅಸ್ವಾಭಾವಿಕ ಮರಣ ಪ್ರಕರಣ
  • ಹೆಬ್ರಿ :ಶ್ರೀಮತಿ ಭವಾನಿ(24 ವರ್ಷ), ಗಂಡ: ಪಾಂಡು ನಾಯ್ಕ, ವಾಸ: ಮಾತ್ಕಲ್ಲುಜೆಡ್ಡು ಕುಚ್ಚೂರು ಗ್ರಾಮ, ಕಾರ್ಕಳ ತಾಲೂಕುರ ಗಂಡ ಪಾಂಡು ನಾಯ್ಕ (32) ಎಂಬವರು ವಿಪರೀತ ಮಧ್ಯಸೇವನೆ ಮಾಡುವ ಚಟವುಳ್ಳವರಾಗಿದ್ದು ಪ್ರತಿದಿನ ಮಧ್ಯಸೇವನೆ ಮಾಡಿ ಮನೆಗೆ ಬಂದು ಪಿರ್ಯಾದಿದಾರರಿಗೆ ಹಾಗೂ ಮಕ್ಕಳಿಗೆ ಹೊಡೆಯುತ್ತಿದ್ದರು ಅಂತೆಯೇ ದಿನಾಂಕ: 27-04-2011 ರಂದು ಸಂಜೆ 07:30 ಗಂಟೆಗೆ ವಿಪರೀತ ಮಧ್ಯಸೇವನೆ ಮಾಡಿ ಮನೆಗೆ ಬಂದಿರುವುದನ್ನು ಕಂಡು ಪಿರ್ಯಾದಿದಾರರು ಹೆದರಿ ತನ್ನ ಮಕ್ಕಳೊಂದಿಗೆ ತನ್ನ ಅಕ್ಕಮನೆಯಾದ ಸೊಳ್ಳೆಕಟ್ಟೆಗೆ ಹೋಗಿದ್ದು ಈ ದಿನ ದಿನಾಂಕ: 28-04-2011 ರಂದು ಮದ್ಯಾಹ್ನ 12:00 ಗಂಟೆಗೆ ವಾಪಾಸು ಕಾರ್ಕಳ ತಾಲೂಕು ಕುಚ್ಚೂರು ಗ್ರಾಮದ ಮಾತ್ಕಲ್ಲುಜೆಡ್ಡುವಿನ ತನ್ನ ಮನೆಗೆ ಬಂದಾಗ ಪಿರ್ಯಾದಿದಾರರ ಗಂಡ ಪಾಂಡು ನಾಯ್ಕ ರವರು ಮನೆಯ ಬಳಿ ಕವುಚಿ ಬಿದ್ದು ಮೃತಪಟ್ಟಿರುತ್ತಾರೆ. ಮೃತ ಪಾಂಡು ನಾಯ್ಕ ರವರು ವಿಪರೀತ ಮದ್ಯ ಸೇವನೆ ಮಾಡಿದ ಪರಿಣಾಮ ಮನೆಯ ಬಳಿ ಹಾಕಿದ ಕಲ್ಲಿನ ದಂಡಗೆ ಅವರ ಕಾಲು ತಾಗಿ ಏಳಲು ಅಗದೇ ಅಲ್ಲೇ ಮೃತಪಟ್ಟಿರ ಬಹುದು ಅಥವಾ ಯಾವುದೋ ವಿಷ ಸೇವನೆ ಮಾಡಿ ಮೃತಪಟ್ಟಿರಬಹುದಾಗಿದೆ ಎಂಬುದಾಗಿ ಶ್ರೀಮತಿ ಭವಾನಿ ರವರು ನೀಡಿದ ದೂರಿನಂತೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ ಅ.ಕ್ರ 10/2011 ಕಲಂ: 174 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ

Thursday, April 28, 2011

Daily Crimes Reported as on 28/04/2011 at 17:00 Hrs

ಅಪಘಾತ ಪ್ರಕರಣ:
  • ಬ್ರಹ್ಮಾವರ: ದಿನಾಂಕ 26/04/11 ರಂದು 13.30 ಗಂಟೆಗೆ ಮಟಪಾಡಿ ಗ್ರಾಮದ ಬೋಳುಗುಡ್ಡೆ ಎಂಬಲ್ಲಿ ಈ ಪ್ರಕರಣದ ಆರೋಪಿ ಸುರೇಶ ಪೂಜಾರಿಯವರು ಮೋಟಾರು ಸೈಕಲ್ ನಂಬ್ರ ಕೆಎ 20 ವಿ 6460 ನೇದನ್ನು ಮಟಪಾಡಿ ಕಡೆಯಿಂದ ಬ್ರಹ್ಮಾವರ ಕಡೆಗೆ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಮೋಟಾರು ಸೈಕಲ್ ಆರೋಪಿಯ ಹತೋಟಿ ತಪ್ಪಿ ಸ್ಕಿಡ್ ಆಗಿ ಬಿದ್ದ ಪರಿಣಾಮ ಮೋಟಾರು ಸೈಕಲಿನ ಹಿಂದೆ ಕುಳಿತಿದ್ದ ಪಿರ್ಯಾದಿ ಉಮೇಶ ಪೂಜಾರಿ (37) ತಂದೆ: ಗುಂಡು ಪೂಜಾರಿ ವಾಸ: ಬೊಳ್ಜಿ ಕಾಲನಿ ಮಟಪಾಡಿ ಗ್ರಾಮ ಇವರಿಗೆ ಹಾಗೂ ಆರೋಪಿಗೆ ಸಾದಾ ಸ್ವರೂಪದ ಗಾಯುಂಟಾಗಿದ್ದಾಗಿದೆ. ಈ ಸಂಬಂದ ಬ್ರಹ್ಮಾವರ ಠಾಣೆಗೆ ಉಮೇಶ್‌ ಪೂಜಾರಿರವರು ಪಿರ್ಯಾದಿ ನೀಡಿದ್ದು ಠಾಣಾಧಿಕಾರಿರವರು ಠಾಣಾ ಅಪರಾದ ಕ್ರಮಾಂಕ 84/11 ಕಲಂ 279,337 ಐಪಿಸಿ ರಂತೆ ಪ್ರಕರಣ ದಖಲಿಸಿ ತನಿಖೆ ಮುಂದುವರಿಸಲಾಗಿದೆ.
  • ಬೈಂದೂರು: ದಿನಾಂಕ 27/04/2011 ರಂದು 14:45 ಗಂಟೆಗೆ ಕುಂದಾಪುರ ತಾಲೂಕು ನಾವುಂದ ಗ್ರಾಮದ ಮಸ್ಕಿ ಎಂಬಲ್ಲಿನ ರಾ.ಹೆ. 17 ರಲ್ಲಿ ಕುಂದಾಪುರ ಕಡೆಯಿಂದ ಬೈಂದೂರು ಕಡೆಗೆ ಪಿರ್ಯಾದಿ ರವಿ (38) ತಂದೆ: ಮಂಜಪ್ಪ ವಾಸ: ಹಿರಿಯ ಪ್ರಾಥಮಿಕ ಶಾಲೆಯ ಬಳಿ ದುಬಾರ ತಟ್ಟಿ ನಗರ ಅಂಚೆ ಹೊಸನಗರ ತಾಲೂಕು ಇವರು ಚಲಾಯಿಸಿಕೊಂಡು ಬರುತ್ತಿದ್ದ ಹನುಮಾನ್‌ ಬಸ್‌ ಕೆಎ 20 ಸಿ 1072ರಲ್ಲಿನ ಪ್ರಯಾಣಿಕರನ್ನು ಮಸ್ಕಿ ಬಸ್‌‌ ನಿಲ್ದಾಣದ ಬಳಿ ಬಸ್ಸಿನಿಂದ ಇಳಿಸುವರೇ ರಸ್ತೆ ಎಡ ಬದಿಯಲ್ಲಿ ನಿಲ್ಲಸಿದಾಗ ಆರೋಪಿ ಚಂದ್ರಶೇಖರ ಶೆಟ್ಟಿ ಕೆಎ 20 ಪಿ 2821ನೇ ಮಾರುತಿ ಎ-ಸ್ಟಾರ್‌ ಕಾರು ಚಾಲಕ ತನ್ನ ಬಾಬ್ತು ಕಾರನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಬೈಂದೂರು ಕಡೆಯಿಂದ ಕುಂದಾಪುರ ಕಡೆಗೆ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರು ನಿಲ್ಲಿಸಿದ್ದ ಬಸ್ಸಿನ ಎದುರು ಭಾಗಕ್ಕೆ ಡಿಕ್ಕಿ ಹೊಡೆಸಿದ ಪರಿಣಾಮ ಕಾರು ಚಾಲಕ ಚಂದ್ರಶೇಖರ ಶೆಟ್ಟಿಯವರ ಹಣೆಗೆ ಮತ್ತು ಬಸ್ಸಿನಿಂದ ಇಳಿಯುತ್ತಿದ್ದ ಇಬ್ಬರು ಮಹಿಳಾ ಪ್ರಯಾಣಿಕರಿಗೆ ತರಚಿದ ಗಾಯವಾಗಿರುವುದಾಗಿದೆ. ಈ ಅಪಘಾತದಿಂದ ಪಿರ್ಯಾದಿದಾರರು ಚಲಾಯಿಸುತ್ತಿದ್ದ ಬಸ್‌‌ ಹಾಗೂ ಆರೋಪಿತರು ಚಲಾಯಿಸುತ್ತಿದ್ದ ಕಾರು ಮುಂಭಾಗ ಜಖಂ ಆಗಿರುವುದಾಗಿದೆ ಈ ಸಂಬಂದ ಬೈಂದೂರು ಠಾಣೆಗೆ ರವಿರವರು ಪಿರ್ಯಾದಿ ನೀಡಿದ್ದು ಠಾಣಾಧಿಕಾರಿರವರು ಠಾಣಾ ಅಪರಾದ ಕ್ರಮಾಂಕ 91/2011 ಕಲಂ; 279,337 ಐ.ಪಿ.ಸಿ ರಂತೆ ಪ್ರಕರಣ ದಖಲಿಸಿ ತನಿಖೆ ಮುಂದುವರಿಸಲಾಗಿದೆ.
ಅಸ್ವಾಭಾವಿಕ ಮರಣ ಪ್ರಕರಣ:
  • ಶಿರ್ವಾ: ಪಿರ್ಯಾದಿ ಸುಂದರ ಶೆಟ್ಟಿ (70) ತಂದೆ ದಿ/ದೇಜು ಶೆಟ್ಟಿ ಗುಡ್ಡಬೆಟ್ಟು ಮನೆ ಮೂಡುಬೆಳ್ಳೆ ಬೆಳ್ಳೆ ರವರ ಹೆಂಡತಿ ಶ್ರೀಮತಿ ರತಿ ಶೆಟ್ಟಿ (65 ವರ್ಷ) ದಿನಾಂಕ 27/04/2011 ರಂದು ಮಧ್ಯಾಹ್ನ 3:30 ಗಂಟೆಗೆ ಹತ್ತಿರದ ತಮ್ಮ ಬಾವಿಯಿಂದ ನೀರನ್ನು ಸೇದುವರೇ ಹೋಗಿದ್ದು ,ಅದೇ ಸಮಯ ಬಾವಿಯ ಬಳಿಯಿಂದ ಶಬ್ದ ಕೇಳಿದ್ದು , ಕೂಡಲೇ ನಾನು ಬಾವಿಯ ಬಳಿ ಹೋದಾಗ ನನ್ನ ಹೆಂಡತಿಯು ಅಲ್ಲಿ ಇರಲಿಲ್ಲ ಬಾವಿಯ ಹಗ್ಗ ರಾಟೆಯಲ್ಲಿದ್ದು ಹಗ್ಗ ಬಾವಿಯಲ್ಲಿ ನೇತಾಡಿಕೊಂಡಿದ್ದು ,ನಾನು ಬಾವಿಯನ್ನು ನೋಡಿದಾಗ ನನ್ನ ಹೆಂಡತಿ ಬಾವಿಯ ನೀರಿನಲ್ಲಿ ಕವಾಚಿ ಬಿದ್ದು ಮೃತ ಪಟ್ಟ ಸ್ಥಿತಿಯಲ್ಲಿದ್ದು , ನೀರು ಸೇದುವ ವೇಳೆ ಆಕಸ್ಮಿಕ ವಾಗಿ ಆಯ ತಪ್ಪಿ ವಾಲಿ ಬಾವಿಯ ನೀರಿಗೆ ಬಿದ್ದು ಮೃತ ಪಟ್ಟಿರುವುದಾಗಿದೆ। ಈ ಸಂಬಂದ ಸುಂದರ ಶೆಟ್ಟಿರವರು ಶಿರ್ವಾ ಠಾಣೆಗೆ ದೂರು ನೀಡಿದ್ದು ಶಿರ್ವಾ ಠಾಣಾಧಿಕಾರಿರವರು ಠಾಣಾ ಯು.ಡಿ.ಆರ್‌ ಸಂಖ್ಯೆ ನಂ. 04/2011 ಕಲಂ;174 ಸಿ.ಆರ್.ಪಿ.ಸಿ ರಂತೆ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಲಾಗಿದೆ.
  • ಮಲ್ಪೆ: ದಿನಾಂಕ 28/04/11 ರಂದು ಬೆಳೀಗ್ಗೆ 05:30 ಗಂಟೆಯಿಂದ 06:40 ಗಂಟೆ ಮದ್ಯೆ ಅವಧಿಯಲ್ಲಿ ಮೂಡುತೋನ್ಸೆ ಗ್ರಾಮದ ಕಲ್ಯಾಣಪುರ ಪಕ್ಕಿಬೆಟ್ಟು ಪಡುಮನೆ ಎಂಬಲ್ಲಿ ಪಿರ್ಯಾದಿ ಪ್ರಭಾಕರ ವಿ ಕೋಟ್ಯಾನ್ (40) ತಂದೆ: ಅಣ್ಣಯ್ಯ ಪೂಜಾರಿ ವಾಸ: ಪಕ್ಕಿಬೆಟ್ಟು ಪಡುಮನೆ ಕಲ್ಯಾಣಪುರ ರವರ ತಂದೆ ಅಣ್ಣಯ್ಯ ಪೂಜಾರಿ (74) ಎಂಬವರು ಮಾನಸಿಕ ಕಿನ್ನತೆಯಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಯಾವುದೋ ವಿಷ ಪದಾರ್ಥ ಸೇವಿಸಿ ಮೃತಪಟ್ಟಿರುವುದಾಗಿದೆ. ಈ ಸಂಬಂದ ಪ್ರಭಾಕರರವರು ಮಲ್ಪೆ ಠಾಣೆಗೆ ದೂರು ನೀಡಿದ್ದು ಮಲ್ಪೆ ಠಾಣಾಧಿಕಾರಿರವರು ಠಾಣಾ ಯು.ಡಿ.ಆರ್‌ ಸಂಖ್ಯೆ ನಂ. 17/2011 ಕಲಂ;174 ಸಿ.ಆರ್.ಪಿ.ಸಿ ರಂತೆ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಲಾಗಿದೆ.
ಹಲ್ಲೆ ಪ್ರಕರಣ
  • ಹೆಬ್ರಿ: ದಿನಾಂಕ:27/04/11 ರಂದು ಬೆಳಿಗ್ಗೆ 11:00 ಗಂಟೆಗೆ ಪಿರ್ಯಾದಿ ಶ್ರೀಮತಿ ವಿಮಲ ಗಂಡ:ವಿಠಲ ನಾಯ್ಕ್ ವಾಸ:ಬಡ್ತನಾಬೈಲು ಕುಚ್ಚೂರು ಗ್ರಾಮ ಕಾರ್ಕಳ ತಾಲೂಕು.ಇವರು ಮನೆಯಲ್ಲಿ ಬಟ್ಟೆ ಓಗೆಯುತ್ತಿರುವಾಗ ಪಿರ್ಯಾದಿದಾರರ ಮಗಳು ಶ್ವೇತಾಳು ರಾಗಿಯನ್ನು ಚೆಲ್ಲಿದಾಗ ಪಿರ್ಯಾದುದಾರರು ತನ್ನ ಮಗಳಿಗೆ ಬೈದುದನ್ನು ಕಂಡು ಆರೋಪಿಗಳಾದ ಪಕ್ಕದ ಮನೆಯ ಪದ್ದು ಮತ್ತು ಆಕೆಯ ಮಗಳಾದ ಭಾರತಿಯವರು ಪಿರ್ಯಾದಿದಾರರು ತಮಗೆ ಬೈದರೆಂದು ಭಾವಿಸಿ ಪಿರ್ಯಾದಿದಾರರ ಮನೆಯ ಅಂಗಳಕ್ಕೆ ಬಂದು ಪಿರ್ಯಾಧಿದಾರರಿಗೆ ಅವಾಚ್ಯ ಶಬ್ದಗಳಿಂದ ಬೈದು ಆರೋಪಿ ಭಾರತಿಯು ತನ್ನ ಕೈಯಲ್ಲಿದ್ದ ಮರದ ದೊಣ್ಣೆಯಿಂದ ಪಿರ್ಯಾದುದಾರರ ತಲೆಯ ಎಡಭಾಗಕ್ಕೆ ಹಾಗೂ ಆರೋಪಿ ಪದ್ದು ತನ್ನ ಕೈಯಲ್ಲಿದ್ದ ಕಸದ ಪೊರಕೆಯಿಂದ ಪಿರ್ಯಾದುದಾರರ ಬಲ;ಭುಜಕ್ಕೆ ಹೊಡೆದು ನೋವುಂಟು ಮಾಡಿರುವುದಾಗಿದೆ ಈ ಸಂಬಂದ ಹೆಬ್ರಿ ಠಾಣೆಗೆ ಶ್ರೀಮತಿ ವಿಮಲರವರು ಪಿರ್ಯಾದಿ ನೀಡಿದ್ದು ಠಾಣಾಧಿಕಾರಿರವರು ಠಾಣಾ ಅಪರಾದ ಕ್ರಮಾಂಕ 18/11, ಕಲಂ: 447,504,324, ಜೊತೆಗೆ 34 ಐಪಿಸಿ ರಂತೆ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಲಾಗಿದೆ.

Daily Crimes Reported as on 28-04-2011 at 07:00 Hrs

ಅಪಘಾತ ಪ್ರಕರಣ:

  • ಮಲ್ಪೆ: ದಿನಾಂಕ 26/04/2011 ರಂದು ಸಮಯ ಸುಮಾರು 10:00 ಗಂಟೆAiÀÄ ಸಮಯದಲ್ಲಿ ಪಿರ್ಯದಿ ಜಗನಾಥ ಕೋಟ್ಯಾನ್ ಪ್ರಾಯ: (47) ತಂದೆ: ದಿವಂಗತ ಕೃಷ್ಣ ಸುವರ್ಣ ವಾಸ: ಪಡ್ಲನೆರ್ಗಿ ಕೊಡವುರು ಗ್ರಾಮ ಉಡುಪಿ ರವರು ತನ್ನ ಕೆಎ 20 ಎ 7951ನೇ ವಿಕ್ರಮ್ 450 ರಿಕ್ಷಾದಲ್ಲಿ ಕಲ್ಮಾಡಿ ಬ್ರಿಡ್ಜ್ ನ ಐಸ್ ಪ್ಲಾಂಟ್ ಗೆ ಬರುವರೇ ವಾಹನವನ್ನು ಚಲಾಯಿಸಿಕೊಂಡು ಕೊಡವೂರು ಗ್ರಾಮದ ಮಲ್ಪೆಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಎದುರು ಬರುತ್ತಿರುವಾಗ ಕೆಎ 20 ಬಿ 8525ನೇ ನಂಬ್ರದ ಟೆಂಪೋ ಚಾಲಕನು ತನ್ನ ಬಾಬ್ತು ಟೆಂಪೋವನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ತನ್ನ ಬಾಬ್ತು ಕೆಎ 20 ಎ 7951ನೇ ವಿಕ್ರಮ್ 450 ರಿಕ್ಷಾಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸದ್ರಿ ರಿಕ್ಷಾ ಜಖುಂಗೊಂಡು ಬಂದು ತನ್ನ ಬಾಬ್ತು ಕೆಎ 20 ಎ 7951ನೇ ವಿಕ್ರಮ್ 450 ರಿಕ್ಷಾಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸದ್ರಿ ರಿಕ್ಷಾ ಜಖುಂಗೊಂಡು ತನ್ನ ಬಲಕೈಗೆ, ಬಲಕಣ್ಣಿನ ಪಕ್ಕಗೆ ಬಲಕಾಲಿನ ಮೊಣಗಂಟಿಗೆ ರಕ್ತಗಾಯ ಉಂಟಾಗಿರುತ್ತದೆ ಈ ಸಂಬಂದ ಜಗನಾಥ ಕೋಟ್ಯಾನ್ ರವರು ಮಲ್ಪೆ ಠಾಣೆಗೆ ದೂರು ನೀಡಿದ್ದು ಠಾಣಾಧಿಕಾರಿರವರು ಠಾಣಾ ಅಪರಾಧ ಕ್ರಮಾಂಕ 54/2011 ಕಲಂ 279, 338 ಐ.ಪಿ.ಸಿ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ಹುಡುಗಿ ಕಾಣೆ:

  • ಶಂಕರನಾರಾಯಣ: ಫಿರ್ಯಾಧಿ ನಾರಾಯಣ ಬೆಳಾರಿ, (50) ತಂದೆ: ದಿ: ಶಂಕರ ಬೆಳಾರಿ,ವಾಸ:ಹೆಂಗವಳ್ಳಿ ಶಾಲೆ ಬಳಿ,ಹೆಂಗವಳ್ಳಿ ಗ್ರಾಮ, ಕುಂದಾಪುರ ತಾಲೂಕು ಇವರ ಮಗಳಾದ ಅಮಿತಾ (22) ಎಂಬವರು ಗೇರು ಬೀಜ ಪ್ಯಾಕ್ಟರಿಯಲ್ಲಿ ಕೆಲಸಕ್ಕೆ ಹೋಗುತ್ತಿದ್ದು ಅವಳಿಗೆ ದಿನಾಂಕ 09/05/2011 ರಂದು ನರಸಿಂಹ ಎಂಬವರೊಂದಿಗೆ ಮದುವೆ ನಿಶ್ಚಯವಾಗಿದ್ದು ಸದ್ರಿ ಅಮಿತಾಳು ದಿನಾಂಕ 23/04/2011 ರಂದು ಬೆಳಿಗ್ಗೆ 11:00 ಗಂಟೆಗೆ ಅಮಾವಾಸ್ಯೆಬೈಲಿಗೆ ಬಟ್ಟೆಗಳನ್ನು ಇಸ್ತ್ರೀ ಹಾಕಿಕೊಂಡು ಬರುತ್ತೇನೆಂದು ಹೋದವಳು ಈತನಕವೂ ಮನೆಗೆ ಬಾರದೇ ಇದ್ದುದರಿಂದ ಸಂಬಂಧಿಕರ ಮನೆಗಳಲ್ಲಿ ಹುಡುಕಿದರೂ ಸಿಗದೇ ಇದ್ದು, ಅವಳಿಗೆ ಮದುವೆ ನಿಶ್ಚಯವಾದ ನರಸಿಂಹನಿಗೆ ದೂರವಾಣಿ ಮುಖಾಂತರ ತನಗೆ ಮದುವೆಯಾಗಿದೆ ಎಂಬುದಾಗಿ ತಿಳಿಸಿದ್ದು, ಅಲ್ಲದೇ ಫಿರ್ಯಾಧಿದಾರರ ಮಗಳಾದ ಅನಿತಾಳಿಗೂ ದೂರವಾಣಿ ಮಾಡಿ ‘’ನನಗೆ ಮದುವೆಯಾಗಿದೆ ಎಂದು ನಮ್ಮ ಮನೆಯ'ವರಿಗೆ ತಿಳಿಸು’’ ಎಂಬುದಾಗಿ ತಿಳಿಸಿದ್ದು, ಕಾಣೆಯಾದ ಅಮಿತಾ ಯಾರ ಜೊತೆ ಇದ್ದಾಳೆ ಎಂದು ತಿಳಿದಿರುವುದಿಲ್ಲ. ಈ ಸಂಬಂದ ನಾರಾಯಣ ಬೆಳಾರಿ ರವರು ಶಂಕರನಾರಾಯಣ ಠಾಣೆಗೆ ದೂರು ನೀಡಿದ್ದು ಠಾಣಾಧಿಕಾರಿರವರು ಠಾಣಾ ಅಪರಾಧ ಕ್ರಮಾಂಕ 35/2011 ಕಲಂ ಹುಡುಗಿ ಕಾಣೆ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ಹಲ್ಲೆ ಪ್ರಕರಣ:

  • ದಿನಾಂಕ 26/04/2011 ರಂದು 19:00 ಗಂಟೆಯ ಸಮಯ ಫಿರ್ಯಾಧಿ ನಟರಾಜ ಮಡಿವಾಳ (47)ತಂದೆ ಅಣ್ಣಯ್ಯ ಮಡಿವಾಳ ವಾಸ ಬೂತನಾಡಿ ಚಕ್ರಮೈದಾನ ಹಳ್ಳಿಹೊಳೆ ಗ್ರಾಮ ಇವರು ಹಳ್ಳಿಹೊಳೆ ಗ್ರಾಮದ ಚಕ್ರಮೈದಾನದಲ್ಲಿರುವ ಆನಂದಮರಾಠೆ ಎಂಬುವವರ ಅಂಗಡಿಗೆ ಅವರಿಗೆ ಬರಬೇಕಾದ ಹಣವನ್ನು ಕೇಳಲು ಹೋದಾಗ ಆನಂದ ಮರಾಠೆಯವರು ಇವರಿಗೆ ಅವಾಚ್ಯ ಶಬ್ದಗಳಿಂದ ಬೈದು ಸೋಡಾಬಾಟಲಿಯಿಂದ ತಲೆಗೆ ಮತ್ತು ಬಲಬುಜಕ್ಕೆ ಹೊಡೆದಿದ್ದು ನೆಲದ ಮೇಲೆ ಬಿದ್ದ ಫಿರ್ಯದಿದಾರರಿಗೆ ತುಳಿದಿರುತ್ತಾರೆ. ಈ ಸಂಬಂದ ನಟರಾಜ ಮಡಿವಾಳರವರು ಶಂಕರನಾರಾಯಣ ಠಾಣೆಗೆ ದೂರು ನೀಡಿದ್ದು ಠಾಣಾಧಿಕಾರಿರವರು ಠಾಣಾ ಅಪರಾಧ ಕ್ರಮಾಂಕ 36/11 ಕಲಂ 504,324,323 ಐ ಪಿ ಸಿ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
  • ಶಂಕರನಾರಾಯಣ:ದಿನಾಂಕ:26-04-2011 ರಂದು ಫಿರ್ಯಾದಿದಾರರಾದ ಆನಂದ ಮರಾಠೆಯವರು ಹಳ್ಳಿಹೊಳೆ ಗ್ರಾಮದ ಚಕ್ರಮೈದಾನದಲ್ಲಿರುವ ತನ್ನ ಬಟ್ಟೆ ಅಂಗಡಿಯಲ್ಲಿ ವ್ಯಾಪಾರ ಮಾಡಿಕೊಂಡಿರುವ ಸಮಯ 19-15 ಗಂಟೆಗೆ ಅವರ ಪರಿಚಯದ ನಟರಾಜ್‌ ಮಡಿವಾಳ ಎಂಬುವರು ಅಕ್ರಮ ಪ್ರವೇಶ ಮಾಡಿ, ಹಣವನ್ನು ಕೇಳಿದ್ದು ಕೊಡುವುದಿಲ್ಲವೆಂದು ಹೇಳಿದ್ದಕ್ಕೆ ಕೈಯಿಂದ ಕೆನ್ನೆಗೆ ಹೊಡೆದು, ಕಾಲಿನಿಂದ ತುಳಿದು ಅಂಗಡಿಯಲ್ಲಿದ್ದ ಸೋಡಾ ಬಾಟಲಿಯನ್ನು ತೆಗೆದು ತಿವಿಯಲು ಬಂದಾಗ ಬಾಟಲಿಯು ಫಿರ್ಯಾದಿದಾರರ ಕಾಲಿನ ಪಾದಕ್ಕೆ ತಾಗಿ ರಕ್ತಗಾಯವಾಗಿದ್ದು,, ಕೊಲ್ಲದೇ ಬಿಡುವುದಿಲ್ಲ ಎಂಬುದಾಗಿ ಬೆದರಿಸಿ ನಂತರ ಅಂಗಡಿಯ ಶೋಕೆಸಿನ ಗ್ಲಾಸಿಗೆ ರಸ್ತೆ ಬದಿಯಲ್ಲಿನ ಕಲ್ಲನ್ನು ಎಸೆದು ಹುಡಿಮಾಡಿರುತ್ತಾರೆ. ಈ ಸಂಬಂದ ನಟರಾಜ ಮಡಿವಾಳರವರು ಶಂಕರನಾರಾಯಣ ಠಾಣೆಗೆ ದೂರು ನೀಡಿದ್ದು ಠಾಣಾಧಿಕಾರಿರವರು ಠಾಣಾ ಅಪರಾಧ ಕ್ರಮಾಂಕ 37/11 ಕಲಂ 448,323,324 506,427 ಐಪಿಸಿ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ಪತಿಯಿಂದ ಪತ್ನಿಗೆ ಕಿರುಕುಳ:

  • ಬ್ರಹ್ಮಾವರ:ತೀಥಹಳ್ಳಿ ಪೊಲೀಸು ಠಾಣೆಯಿಂದ ವರ್ಗಾವಣೆಯಾಗಿ ಬಂದ ಅಪರಾಧ ಕ್ರಮಾಂಕ 98/11 ರಲ್ಲಿ ಪ್ರಕರಣದ ಆರೋಪಿ ಸತೀಶರವರು ಪಿರ್ಯಾದಿ ಶ್ರೀಮತಿ ಜ್ಯೋತಿ ಗಂಡ: ಸತೀಶ ವಾಸ: ಕುರ್ಪಾಡಿ,ಸಾವಂತರ ಮನೆ ಹೊಸೂರು ಇವರನ್ನು ದಿನಾಂಕ 24/06/10 ರಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಶಿವ ಪಾರ್ವತಿ ಕೃಪದಲ್ಲಿ ಹಿರಿಯರ ಸಮಕ್ಷಮ ಮದುವೆಯಾಗಿದ್ದು ಮದುವೆಯ ತರುವಾಯ ಉಡುಪಿಯ ಹೊಸೂರು ಗ್ರಾಮದ ಕುರ್ಪಾಡಿ ಸಾವಂತರ ಮನೆ ಎಂಬಲ್ಲಿ ಆರೋಪಿ ಶ್ರೀಮತಿಯೊಂದಿಗೆ ಸೇರಿ ಕುಡಿದುಕೊಂಡು ಬಂದು ಕೈಯಿಂದ ಹೊಡೆದು ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡಿದ್ದಾಗಿದೆ. ಈ ಸಂಬಂದ ಶ್ರೀಮತಿ ಜ್ಯೋತಿ ರವರು ಬ್ರಹ್ಮಾವರ ಠಾಣೆಗೆ ದೂರು ನೀಡಿದ್ದು ಬ್ರಹ್ಮಾವರ ಠಾಣಾಧಿಕಾರಿರವರು ಠಾಣಾ ಅ.ಕ್ರ 83/11 ಕಲಂ 498(ಎ), ಜೊತೆಗೆ 34 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ಇತರ ಪ್ರಕರಣ:

  • ಉಡುಪಿನಗರ:ದಿನಾಂಕ:27-04-11ರಂದು 13:०० ಗಂಟೆಗೆ ಉಡುಪಿ ತಾಲೂಕಿನ ಸರ್ವಿಸ್‌ ಬಸ್ಸು ನಿಲ್ದಾಣದ ಬಳಿ ಇರುವ ಕಮಲ್‌‌ ಬಿಲ್ಡಿಂಗ್‌‌ನ್ನಲ್ಲಿರುವ ಅರುಣ ರೇಡಿಯೊ ಇಲೆಕ್ಟ್ರನಿಕ್ಸ್‌‌ ಎಂಬ ಅಂಗಡಿಗೆ ಪಿರ್ಯಾದಿ ಎಚ್‌।ಸೈಯ್ಯದ್‌ ಇಮ್ರಾನ್‌ ,,,,, ಬೆಂಗಳೂರು ಇವರು ಹೋಗಿ ಪರಿಶೀಲಿಸಿದಾಗ, ಆಪಾದಿತರು ಪಿರ್ಯಾದಿದಾರರ ಕಂಪೆನಿಯ ಮಾಲಕತ್ವಕ್ಕೆ ಸೇರಿದ ಪಟಿಯಾಲ ಹೌಸ್‌‌,, ಕಾಫಿ ರೈಟ್‌ ಕಾಯಿದೆ 1957ನ್ನು ಉಲ್ಲಂಘನೆ ಮಾಡಿ ವ್ಯವಹಾರ ಮಾಡುತ್ತಿರುವುದಾಗಿದೆ. ಈ ಸಂಬಂದ ಹೆಚ್‌.ಸಯದ್‌ ರವರು ಉಡುಪಿ ನಗರ ಠಾಣೆಗೆ ದೂರು ನೀಡಿದ್ದು ಉಡುಪಿ ನಗರ ಠಾಣಾಧಿಕಾರಿರವರು ಠಾಣಾ 153/11 ಕಲಂ 58ಎ,68ಎ ಕಾಫಿ ರೈಟ್‌ ಕಾಯಿದೆ 1957ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


Wednesday, April 27, 2011

Daily Crimes Reported as on 27/04/2011 at 17:00 hrs

ಅಪಘಾತ ಪ್ರಕರಣಗಳು
  • ಉಡುಪಿ: ದಿನಾಂಕ 27-04-11ರಂದು ರಹೀಂಖಾನ್‌‌(37), ತಂದೆ: ವಿ.ಕೆ ಮೊಹಮ್ಮದ್‌, ವಾಸ: ಮೆಸ್ಕಾಂ ಕ್ವಾಟ್ರಾಸ್ನಂ. ಇಬಿವದಭಾನ್ದೀಶ್ವರ್, ಮಲ್ಪೆ, ಉಡುಪಿ ಎಂಬವರು ತಮ್ಮ ಮೋಟಾರ್ಸೈಕಲ್ನ್ನು ಸವಾರಿ ಮಾಡಿಕೊಂಡು ಮಲ್ಪೆಯಿಂದ ಉಡುಪಿಕಡೆಗೆ ಬರುತ್ತಿರುವಾಗ್ಗೆ ಪಂದುಬೆಟ್ಟು ಬಳಿ ಬೆ.07:45ಗಂಟೆಗೆ ತಲುಪುವಾಗ್ಗೆ ಉಡುಪಿ ಕಡೆಯಿಂದ ಮಲ್ಪೆ ಕಡೆಗೆ ರಿಕ್ಷಾ ಚಾಲಕನುಅತೀ ವೇಗ ಮತ್ತು ಅಜಗರೂಕತೆಯಿಂದ ಚಲಾಯಿಸಿಕೊಂಡು ಎದುರಿನಿಂದ ಹೋಗುತ್ತಿದ್ದ ಇನ್ನೊಂದು ವಾಹನವನ್ನು ಒವರ್ಟೇಕ್ಮಾಡುವ ಭರದಲ್ಲಿ ಮೋಟಾರ್ಸೈಕಲ್ಗೆ ಢಿಕ್ಕಿ ಹೊಡೆದ ಪರಿಣಾಮ ಬೈಕ್ಸಮೇತ ರಸ್ತೆಗೆ ಬಿದ್ದು, ಅವರ ಬಲ ಬದಿಯ ಭುಜಕ್ಕೆಜಖಂ ಉಂಟಾಗಿದ್ದು, ಬಲಬದಿಯ ಕಣ್ಣಿನ ಬಳಿ ರಕ್ತಗಾಯವಾಗಿರುತ್ತದೆ. ರಿಕ್ಷಾ ಚಾಲಕ ಮತ್ತು ಇತರರು ಚಿಕಿತ್ಸೆಯ ಬಗ್ಗೆ ಉಡುಪಿಹೈ-ಟೆಕ್ಆಸ್ಪತ್ರೆಗೆ ಕರೆದುಕೊಂಡು ಬಂದು ದಾಖಲಿಸಿದ್ದಾಗಿದೆ ಎಂಬುದಾಗಿ ರಹೀಂಖಾನ್‌‌ ರವರು ನೀಡಿದ ದೂರಿನಂತೆ ಉಡುಪಿನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 151/2011 ಕಲಂ 279,338 .ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆಕೈಗೊಳ್ಳಲಾಗಿದೆ
  • ಉಡುಪಿ: ದಿನಾಂಕ 27-04-11ರಂದು ಶಿವಕುಮಾರ್‌‌(41), ತಂದೆ: ಷಣ್ಮುಗಂ ಚೆಟ್ಟಿಯಾರ್‌, ವಾಸ: ಮಧ್ವನಗರ, ಹರಿಪ್ರಸಾದ್ಹೊಟೇಲ್‌‌ ಹಿಂಬಾಗ,ಆದಿಉಡುಪಿ, ಕೊಡವೂರು, ಉಡುಪಿ ಎಂಬವರು ಪಳನಿ ಸ್ವಾಮಿರವರ ಯಮಹಾ ವೈಬಿಆರ್‌‌ ನೇದರಲ್ಲಿಹಿಂಬದಿ ಸವಾರರಾಗಿ ಕುಳಿತುಕೊಂಡು, ಪಳನಿ ಸ್ವಾಮಿರವರು ಬೈಕನ್ನು ಸವಾರಿ ಮಾಡಿಕೊಂಡು ರಾ.ಹೆ 17ರಿಂದಾಗಿ ಬ್ರಹ್ಮಾವರಕಡೆಗೆ ಹೋಗುತ್ತಿರುವಾಗ್ಗೆ ಬೆ.08:45ಗಂಟೆಗೆ ನಿಟ್ಟೂರು ಪೂಜಾ ಮಾರ್ಬಲ್ಸ್‌‌ ಬಳಿ ತಲುಪುವಾಗ್ಗೆ ಅವರ ಹಿಂದಿನಿಂದ ಆಲ್ಟೋಕಾರಿನ ಚಾಲಕನು ತಾನು ಚಲಾಯಿಸಿಕೊಂಡು ಬರುತ್ತಿದ್ದ ಕಾರನ್ನು ಅತೀ ವೇಗ ಮತ್ತು ಅಜಗರೂಕತೆಯಿಂದ ಚಲಾಯಿಸಿಕೊಂಡುಬಂದು ಮೋಟಾರ್ಸೈಕಲ್ನ್ನು ಒವರ್ಟೇಕ್ಮಾಡಿ, ನಿರ್ಲಕ್ಷ್ಯತನದಿಂದ ಒಮ್ಮಲೆ ಎಡರಸ್ತೆಗೆ ತಿರುಗಿಸಿದನು, ಪರಿಣಾಮ ಬೈಕ್ಗೆಕಾರು ಢಿಕ್ಕಿ ಹೊಡೆದಿದ್ದು, ಬೈಕ್ನ್ನಲಿದ್ದ ಇಬ್ಬರು ರಸ್ತೆಗೆ ಬಿದ್ದು, ಬೈಕ್ಸವಾರಿ ಮಾಡುತ್ತಿದ್ದ ಪಳನಿಸ್ವಾಮಿರವರಿಗೆ ಬಲಭುಜಕ್ಕೆತೀವ್ರವಾದ ರಕ್ತಗಾಯವಾಗಿ, ದೇಹದ ಉಳಿದ ಭಾಗಗಳಿಗೆ ತರಚಿದ ಗಾಯವಾಗಿರುತ್ತದೆ. ಶಿವಕುಮಾರ್ರವರ ಬಲಕಾಲಿನಮೊಣಗಂಟಿಗೆ ತರಚಿದ ಗಾಯವಾಗಿರುತ್ತದೆ. ಅಪಘಾತವೆಸಗಿದ ಕಾರು ಚಾಲಕ ಮತ್ತು ಶಿವಕುಮಾರ್ಪಳನಿ ಸ್ವಾಮಿಯನ್ನುಚಿಕಿತ್ಸೆಯ ಬಗ್ಗೆ ಉಡುಪಿ ಹೈ+-ಟೆಕ್ಆಸ್ಪತ್ರೆಗೆ ಕರೆದುಕೊಂಡು ಬಂದು ಒಳರೋಗಿಯಾಗಿ ದಾಖಲಿಸಿದ್ದಾಗಿದೆ ಬಗ್ಗೆಶಿವಕುಮಾರ್ರವರು ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 152/2011 ಕಲಂ279,338.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.‌ ‌‌‌ ‌
ಕಳವು ಪ್ರಕರಣ
  • ಹೆಬ್ರಿ : ದಿನಾಂಕ: 25.04.11 ರಂದು ಮದ್ಯಾಹ್ನ 2-30 ಗಂಟೆಗೆ ಎಸ್‌.ಕೆ ಜಯಂತಿ ಭಟ್‌‌(42), ಗಂಡ: ಎಸ್‌.ಕೃಷ್ಣಮೂರ್ತಿ ಭಟ್‌, ಮರ್ಚ್ಂಟ್‌, ಮಂಡಗದ್ದೆ ಅಂಚೆ, ತೀರ್ಥಹಳ್ಳಿ ತಾಲೂಕು ಎಂಬವರು ತನ್ನ ತವರು ಮನೆಯಾದ ಉಡುಪಿಗೆ ಅಕ್ಕನ ಮಗಳ ಮದುವೆ ಸಲುವಾಗಿ ಕಪ್ಪು ಬಣ್ಣದ ಬ್ಯಾಗ್ನಲ್ಲಿ ಚಿನ್ನಾಭರಣ ಹಾಗೂ ನಗದನ್ನು ಇರಿಸಿಕೊಂಡು ತನ್ನ ಮನೆಯಾದ ಮಂಡಗದ್ದೆಯಿಂದ ಶ್ರೀ ಕೃಷ್ಣ ಮಿನಿ ಬಸ್ಸಿನಲ್ಲಿ ಹೊರಟು ಬಸ್ಸಿನಲ್ಲಿ ತುಂಬಾ ಪ್ರಯಾಣಿಕರು ಇದ್ದ ಕಾರಣ ಬಸ್ಸಿನ ನಿರ್ವಾಹಕನು ತನ್ನ ಕೈಯಲ್ಲಿದ್ದ ಕಪ್ಪು ಬಣ್ಣದ ಬ್ಯಾಗನ್ನು ಕೇಳಿ ತೆಗೆದುಕೊಂಡು ಚಾಲಕನ ಸೀಟಿನ ಹಿಂಭಾಗದಲ್ಲಿ ಇರಿಸಿದ್ದು ನಂತರ ಬಸ್ಸು ಸಮಯ ಸುಮಾರು ಸಂಜೆ 5-40 ಗಂಟೆಗೆ ಉಡುಪಿ ತಲುಪಿದಾಗ ಪಿರ್ಯಾದಿದಾರರು ತನ್ನ ಬ್ಯಾಗ್ಕಾಣೆಯಾದ ಬಗ್ಗೆ ನಿರ್ವಾಹಕನಲ್ಲಿ ವಿಚಾರಿಸಿದಾಗ ಸಮಯ ಸುಮಾರು ಸಂಜೆ 4-40 ಗಂಟೆಗೆ ಹೆಬ್ರಿ ಬಸ್ಸು ನಿಲ್ದಾಣದಲ್ಲಿ ಯಾರೋ 7 ಜನ ಲಂಭಾಣಿ ಮಾತನಾಡುವವರು ಬಸ್ಸಿನಿಂದ ಇಳಿದಿದ್ದು ಅವರುಗಳ ಪೈಕಿ ಒಬ್ಬಾತನ ಕೈಯಲ್ಲಿ ಬ್ಯಾಗ್ಇರುವುದಾಗಿ ತಿಳಿಸಿದ್ದು ಅವರುಗಳು ತಮ್ಮ ಬ್ಯಾಗನ್ನು ಅವರ ಬ್ಯಾಗ್ಎಂದು ತಿಳಿದು ತೆಗೆದುಕೊಂಡು ಹೋಗಿರಬಹುದೆಂದು ತಿಳಿದು ಅವರುಗಳು ವಾಪಾಸು ಬ್ಯಾಗ್ನ್ನು ಕೊಡದ ಕಾರಣ ಅವರು ಕಳವು ಮಾಡುವ ಉದ್ದೇಶದಿಂದ ಬಸ್ಸಿನಲ್ಲಿಟ್ಟಿದ್ದ ಕಪ್ಪು ಬಣ್ಣದ ಬ್ಯಾಗ್ನಲ್ಲಿ ಇಟ್ಟಿದ್ದ ಸುಮಾರು 193 ಗ್ರಾಂ ತೂಕದ ಚಿನ್ನಾಭರಣ ಹಾಗೂ ನಗದು ರೂ 2,000/- ಹಾಗೂ ಬಟ್ಟೆ ಬರೆಗಳನ್ನು ಬ್ಯಾಗ್ಸಮೇತ ಕಳವು ಮಾಡಿರುವುದಾಗಿದೆ. ಇದರ ಅಂದಾಜು ಮೌಲ್ಯ ಸುಮಾರು ರೂ 4 ಲಕ್ಷ ಆಗಬಹುದಾಗಿದೆ ಎಂಬುದಾಗಿ ಎಸ್‌.ಕೆ ಜಯಂತಿ ಭಟ್‌‌ರವರು ಹೆಬ್ರಿ ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನಂತೆ ಅಪರಾಧ ಕ್ರಮಾಂಕ 17/2011 ಕಲಂ 379 .ಪಿ.ಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.





ಉಡುಪಿ ಜಿಲ್ಲೆಗೆ ಎರಡು ಹೊಸ ಇಂಟರ್ಸೆಪ್ಟರ್ ಸೇವೆ

ಈಗಾಗಲೇ ಜಿಲ್ಲೆಯಲ್ಲಿರುವ ಒಂದು ಇಂಟರ್ಸೆಪ್ಟರ್ ವಾಹನದ ಜೊತೆಗೆ ಈಗ ಜಿಲ್ಲೆಗೆ ಹಂಚಿಕೆಯಾದ ಹೊಸ 2 ಇಂಟರ್ಸೆಪ್ಟರ್ (ಟಾಟಾ ವಿಂಗರ್) ವಾಹನಗಳಲ್ಲಿ ಈ ಕೆಳಗೆ ಕಾಣಿಸಿರುವ ಸಾಮಗ್ರಿಗಳನ್ನು ಅಳವಡಿಸಲಾಗಿದೆ. ಇವುಗಳಿಂದ ಆಲ್ಕೋಹಾಲ್ ಸೇವಿಸಿ ವಾಹನ ಚಲಾಯಿಸುವುದು, ನಿಗದಿತ ವೇಗಕ್ಕಿಂತ ಹೆಚ್ಚು ವೇಗವಾಗಿ ವಾಹನ ಚಾಲಾಯಿಸುವುದನ್ನು ಪತ್ತೆ ಹಚ್ಚಿ, ಸ್ಥಳದಲ್ಲಿಯೇ ದಂಡ ವಸೂಲು ಮಾಡಲು ಸದರಿ ಉಪಕರಣಗಳನ್ನು ಉಪಯೋಗಿಸಲಾಗುತ್ತದೆ. ಸಾರ್ವಜನಿಕರಿಗೆ ಸಂದರ್ಭಕ್ಕನುಸಾರವಾಗಿ ರಸ್ತೆ ಸುರಕ್ಷತೆ ಬಗ್ಗೆ ಮಾಹಿತಿ ಕೂಡ ನೀಡಬಹುದಾಗಿದೆ.

1. speed laser gun with camera and mounting

2. Dot matrix printer with Alco meter

3. On Board Color Printer

4. Public Address systems with Siren

5. Roof Top Surveillance

6. 250 GB DVR Ptz Camera

7. on Board Laptop

8. On Board 1 KVA UPS with Batteries

9. Remote printing station

10. Roof light bar

11. IR Flash to record evidence in night time



ರಸ್ತೆಯಲ್ಲಿ ಸಂಚಾರಿ ನಿಯಮ ಉಲ್ಲಂಘಿಸುವವರ ವಿರುದ್ಧ ಕಾನೂನು ಕ್ರಮ ವಹಿಸಲು ಹಾಗೂ ಸಂಚಾರಿ ನಿಯಮ ಉಲ್ಲಂಘನೆ ತಡೆಗಟ್ಟಿ ಈ ಮೂಲಕ ಸಾರ್ವಜನಿಕರ ಒಳಿತಿಗಾಗಿ ಹಾಗೂ ಸುರಕ್ಷಿತ ಸಂಚಾರ ನಿರ್ವಹಣೆಗಾಗಿ ಇಂಟರ್ಸೆಪ್ಟರ್ ವಾಹನಗಳ ಸೇವೆ ಪ್ರಾರಂಭವಾಗಿದೆ. ಈ ಕಾರ್ಯಕ್ರಮವು ಈ ದಿನ ಬೆಳಿಗ್ಗೆ 11:00 ಗಂಟೆಗೆ ಮಾನ್ಯ ಶ್ರೀ ರಮೇಶ್‌ ಪ್ರಾದೇಶಿಕ ಸಾರಿಗೆ ಅಧಿಕಾರಿ ಉಡುಪಿರವರು ಉದ್ಘಾಟಿಸಿ ಮಾನ್ಯ ಶ್ರೀ ಎಮ್‌.ವಿ ವೆಂಕಟೇಶಪ್ಪ ಹೆಚ್ಚುವರಿ ಪೊಲೀಸ್‌ ಅಧೀಕ್ಷಕರು ಉಡುಪಿರವರು ವಾಹನದ ಪ್ರಭಾರ ಅಧಿಕಾರರವರಿಗೆ ಕೀಯನ್ನು ಹಸ್ತಾಂತರಿಸಿದರು. ಉಡುಪಿ ಉಪ ವಿಭಾಗದ ಪೊಲೀಸ್‌ ಉಪಾಧೀಕ್ಷಕರು, ಉಡುಪಿ ವೃತ್ತನಿರೀಕ್ಷಕರು, ಸಹಾಯಕ ಆಡಳಿತ ಅಧಿಕಾರಿ ಜಿಲ್ಲಾ ಪೊಲೀಸ್‌ ಕಛೇರಿ ,ಆರಕ್ಷಕ ನಿರೀಕ್ಷಕರು ಡಿಎಆರ್‌ ಉಡುಪಿ ಹಾಗೂ ಸಿಬ್ಬಂದಿವರ್ಗದವರು ಈ ಕಾರ್ಯಕ್ರಮಲ್ಲಿ ಉಪ ಸ್ಥಿತರಿರುತ್ತಾರೆ.

Daily Crimes Reported as on 27/08/2011 at 07:00 hrs

ಅಪಘಾತ ಪ್ರಕರಣಗಳು




  • ಉಡುಪಿ: ದಿನಾಂಕ 26-04-11ರಂದು ಜರ್ನಾಧನ(39), ತಂದೆ: ರಾಮಕೃಷ್ಣ ಭಟ್‌, ವಾಸ: ಓಕುಡೆ ಟವರ್ಸ್‌‌, ಕಡಿಯಾಳಿ, ಉಡುಪಿ ಎಂಬವರು ತಮ್ಮ ಕಾರನ್ನು ಸವಾರಿ ಮಾಡಿಕೊಂಡು ತನ್ನ ಮನೆಯಿಂದ ಕಚೇರಿಗೆ ಕಡೆಗೆ ಬರುತ್ತಿರುವಾಗ್ಗೆ ಚಿಟ್ಪಾಡಿ ಹನುಮಾನ್‌‌ ಗ್ಯಾರೇಜ್‌ ಬಳಿ ಬೆಳಿಗ್ಗೆ 09:15ಗಂಟೆಗೆ ತಲುಪಿದಾಗ್ಗೆ ಅವರ ಎದುರಿನಿಂದ ಯು.ಟಿ.ಸಿ ಕಂಪೆನಿಯ ಬಸ್ಸು ನೇದರ ಚಾಲಕನು ಅತೀ ವೇಗ ಮತ್ತು ಅಜಗರೂಕತೆಯಿಂದ ಚಲಾಯಿಸಿಕೊಂಡು ಬಂದು ಕಾರಿಗೆ ಢಿಕ್ಕಿ ಹೊಡೆದನು. ಪರಿಣಾಮ ಕಾರಿನ ಬಲಭಾಗದ ಹಿಂದಿನ ಬಾಗಿಲಿನ ಬಳಿ ಜಖಂ ಉಂಟಾಗಿದ್ದು, ಅಂದಾಜು ರೂ 12000/-ನಷ್ಟ ಉಂಟಾಗಿರುತ್ತದೆ. ಈ ಅಪಘಾತದಿಂದ ಯಾವುದೇ ಅಪಾಯ ಉಂಟಾಗಿರುವುದಿಲ್ಲ ಎಂಬುದಾಗಿ ರಮೇಶ್‌ ರವರು ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 150/2011 ಕಲಂ 279, ಐ.ಪಿ.ಸಿ ಮತ್ತು 134 ಐ.ಎಂ.ವಿ ಕಾಯ್ದೆಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


  • ಬ್ರಹ್ಮಾವರ : ದಿನಾಂಕ 26/04/2011 ರಂದು 12.00 ಗಂಟೆಗೆ ಉಪ್ಪೂರು ಗ್ರಾಮದ ಹೇರಾಯಿಬೆಟ್ಟು ಎಂಬಲ್ಲಿ ರಾ.ಹೆ 17ರಲ್ಲಿ ಆರೋಪಿ ತನ್ನ ಇನ್ಸುಲೇಟರ್‌‌‌ ಲಾರಿಯನ್ನು ಕುಂದಾಪುರ ಕಡೆಯಿಂದ ಉಡುಪಿ ಕಡೆಗೆ ವೇಗವಾಗಿ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ರಸ್ತೆಯ ಅತೀ ಬಲಕ್ಕೆ ಬಂದು ರಘುರಾಮ್‌ ತಂದೆ:ಮೋಹನ್‌‌ ಪೂಜಾರಿ ವಾಸ:ಬೇಳಂಜೆ ಬಡಾಬೆಟ್ಟು ಮನೆ(ಹೆಬ್ರಿ) ಬೆಳಂಜೆ ಗ್ರಾಮ, ಕಾರ್ಕಳ ತಾಲೂಕು ಎಂಬವರು ಉಡುಪಿ ಕಡೆಯಿಂದ ಕುಂದಾಪುರ ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದ ಬಸ್ಸುಗೆ ಡಿಕ್ಕಿ ಹೊಡೆದ ಪರಿಣಾಮವಾಗಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಸುಧಾಕರ ಎಂಬವರಿಗೆ ಬಲಕೈ ಮೂಳೆ ಮುರಿದ ಗಾಯವಾಗಿರುತ್ತದೆ. ಗಾಯಾಳು ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿದೆ. ಈ ಬಗ್ಗೆ ರಘುರಾಮ್‌ ಎಂಬವರು ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನಂತೆ ಅಪರಾಧ ಕ್ರಮಾಂಕ 82/2011 ಕಲಂ 279,338 ಐ.ಪಿ.ಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


  • ಕೊಲ್ಲೂರು: ದಿನಾಂಕ 22.04.2011 ರಂದು 17:30 ಗಂಟೆಯ ಸಮಯ ಜಡ್ಕಲ್ ಗ್ರಾಮದ ಹಾಲ್ಕಲ್ ಬ್ರಿಡ್ಜ್ ತಿರುವಿನ ಬಳಿ ರಾಜ್ಯ ಹೆದ್ದಾರಿ ರಸ್ತೆಯಲ್ಲಿ ಮೋಟಾರು ಸೈಕಲ್ ಸವಾರ ಮಂಜುನಾಥ ಶೆಟ್ಟಿ ಎಂಬುವರು ತನ್ನ ಮೋಟಾರು ಸೈಕಲನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಎದುರಿನಿಂದ ಬರುತ್ತಿದ್ದ 407 ವಾಹನವನ್ನು ನೋಡಿ ಗಲಿಬಿಲಿಗೊಂಡ ಪರಿಣಾಮ ಬೈಕ್ ಸವಾರನ ಹತೋಟಿ ತಪ್ಪಿ ತೀರಾ ಎಡಬದಿಗೆ ಚಲಿಸಿ ಸ್ಕಿಡಾಗಿ ಬಿದ್ದು, ಬೈಕ್‌ನ ಹಿಂದುಗಡೆ ಕುಳಿತಿದ್ದ ಚಂದ್ರ ಶೆಟ್ಟಿ ತಂದೆ :ದಿ ಮುತ್ತಯ್ಯ ಶೆಟ್ಟಿ,ವಾಸ ಮಾವಿನ ಮನೆ, ಗೋಳಿಹೊಳೆಗ್ರಾಮ ಎಂಬವರ ಎಡಕಾಲು ಬೈಕಿನ ಅಡಿಯಲ್ಲಿ ಸಿಕ್ಕಿ ಎಡಕಾಲಿನ ಮಣಿಗಂಟಿನ ಸ್ವಲ್ಪ ಮೇಲ್ಭಾಗದಲ್ಲಿ ಮೂಳೆ ಮುರಿತದ ರಕ್ತಗಾಯ ಉಂಟಾಗಿರುತ್ತದೆ ಈ ಬಗ್ಗೆ ಚಂದ್ರ ಶೆಟ್ಟಿ ರವರು ನೀಡಿದ ದೂರಿನಂತೆ ಕೊಲ್ಲೂರು ಠಾಣೆಯಲ್ಲಿ ಅಪರಾಧ ಕ್ರಮಾಂಕ 28/2011 ಕಲಂ 279,338 ಐ.ಪಿ.ಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ


  • ಕಾಪು: ದಿನಾಂಕ. 25.04.2011 ರಂದು 22:30 ಗಂಟೆಗೆ ಉದ್ಯಾವರ ಗ್ರಾಮದ ಹಾಲಿಮಾ ಸಬ್ಜು ಹಾಲ್ ಬಳಿ ರಾ.ಹೆ 17 ರಲ್ಲಿ ಪಡುಬಿದ್ರಿ ಕಡೆಯಿಂದ ಉಡುಪಿಯ ಕಡೆಗೆ ಕಾರನ್ನು ಶ್ರೀಮತಿ ಉಷಾ ಶೆಟ್ಟಿ, (64 ವರ್ಷ) ತಂದೆ:-ಚಂದ್ರಶೇಖರ ಶೆಟ್ಟಿ, ವಾಸ-ಉಜ್ವಲ್, ಶ್ರೀ ವೀರಭದ್ರ ದೇವಸ್ಥಾನ ಹಿಂಬದಿ, ಕನ್ನರ್ಪಾಡಿ ಎಂಬವರ ತಂಗಿ ಮಗನಾದ ಕೀರ್ತಿರವರು ಅತೀ ವೇಗ ಮತ್ತು ನಿರ್ಲಕ್ಷತನದಿಂದ ಚಲಾಯಿಸಿ ಲಾರಿಯನ್ನು ಓವರ್ ಟೆಕ್ ಮಾಡಿ ಮುಂದಕ್ಕೆ ಚಲಾಯಿಸಿದಾಗ ಅದೇ ಸಮಯ ಎದುರುಗಡೆಯಲ್ಲಿ ಓವರ್ ಟೆಕ್ ಮಾಡಿಕೊಂಡು ಬರುತ್ತಿರುವ ಲಾರಿಯನ್ನು ನೋಡಿ ತನ್ನ ಎಡ ಬದಿಯಿಂದ ಡಾಮಾರು ರಸ್ತೆಯ ತೀರಾ ಬಲಬದಿಗೆ ಒಮ್ಮೇಲೆ ಚಲಾಯಿಸಿದಾಗ ಚಾಲಕನ ಚಾಲನೆಯ ಹತ್ತೋಟಿ ತಪ್ಪಿ ಕಾರು ಡಾಮಾರು ರಸ್ತೆಯಲ್ಲಿ ಪಾಲ್ಟಿಯಾಗಿ ಮಗುಚಿ ಬಿದ್ದ ಪರಿಣಾಮ ಕಾರಿನಲ್ಲಿದ್ದ ಶ್ರೀಮತಿ ಉಷಾ ಶೆಟ್ಟಿ ಎಂಬವರ ಬಲ ಹಾಗೂ ಎಡ ಹಣೆಯ ಬಳಿ ಗಾಯವಾಗಿ, ಬಲದವಡೆ ಬಳಿ, ಬಲಕೈ ಬೆರಳಿಗೆ ಗಾಯವಾಗಿ ಸೊಂಟದ ಎಡಭಾಗದಲ್ಲಿ ಮೂಳೆ ಮುರಿತವಾಯಿತು. ಹಾಗೂ ಅವರ ಗಂಡ ಚಂದ್ರ ಶೇಖರ ಶೆಟ್ಟಿರವರಿಗೆ ಕುತ್ತಿಗೆ ಬಳಿ ಮೂಳೆ ಮುರಿತವಾಯಿತು ಹಾಗೂ ಮುಖಕ್ಕೆ ತರಚಿದ ಗಾಯವಾಗಿತ್ತು, ಚಾಲಕ ಕೀರ್ತಿಗೆ ಎಡಕೈ ತಟ್ಟು ಮೂಳೆ ಮುರಿತವಾಗಿ ಎದೆಯ ಬಲಭಾಗದಲ್ಲಿ ಗುದ್ದಿದ ಒಳ ನೋವಾಗಿದ್ದು, ಉಡುಪಿ ಹೈ-ಟೆಕ್ ಆಸ್ಪತ್ರೆಗೆ ದಾಖಲಾಗಿರುತ್ತಾರೆ ಈ ಬಗ್ಗೆ ಶ್ರೀಮತಿ ಉಷಾ ಶೆಟ್ಟಿರವರು ನೀಡಿದ ದೂರಿನಂತೆ ಕಾಪು ಠಾಣೆಯಲ್ಲಿ ಅಪರಾಧ ಕ್ರಮಾಂಕ 75/2011 ಕಲಂ 279,338 ಐ.ಪಿ.ಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ಕೊಲೆ ಪ್ರಕರಣ




  • ಶಂಕರನಾರಾಯಣ : ದಿನಾಂಕ 25/04/2011 ರಂದು ಸಂಜೆ 06:30 ಗಂಟೆಗೆ ಶ್ರೀಮತಿ ರತ್ನಾವತಿ (50) ಗಂಡ ನಾರಾಯಣ ಶೆಟ್ಟಿ ವಾಸ: ಶ್ರೀ ರಾಮದರ್ಶನ್ ಅಬ್ಬಿಮಕ್ಕಿ ಸಿದ್ದಾಪುರ ಗ್ರಾಮ ಕುಂದಾಪುರ ತಾಲೂಕು ಎಂಬವರ ಗಂಡ ನಾರಾಯಣ ಶೆಟ್ಟಿ (55) (ಮೃತ) ರವರು ವಿಪರೀತ ಶರಾಬು ಕುಡಿದು ಪೇಟೆಯಿಂದ ಮನೆಯಾದ ಸಿದ್ಧಾಪುರ ಗ್ರಾಮದ ಅಬ್ಬಿಮಕ್ಕಿ ಗೆ ಬಂದು ತನಗೂ ಹಾಗೂ ಹೆಣ್ಣುಮಕ್ಕಳಿಗೂ ಅವಾಚ್ಯ ಶಬ್ದಗಳಿಂದ ಬೈದು ಮನೆಯಿಂದ ಹೊರಗೆ ಹಾಕಿದ್ದು ನಂತರ ಕೈಯಲ್ಲಿ ಚೂರಿ ಹಿಡಿದು ಬೈಯುತ್ತಾ ಕುಳಿತುಕೊಂಡಿದ್ದು ರಾತ್ರಿ 08:30 ಗಂಟೆಗೆ ಮಗ ಸಂತೋಷ ಎಂಬವನು ಮನೆಗೆ ಬಂದು ತಂದೆಯಲ್ಲಿ- ತಾಯಿ ಹಾಗೂ ತಂಗಿಯಂದಿರು ಎಲ್ಲಿ? ಎಂದು ಕೇಳಿದ್ದಕ್ಕೆ ನಾರಾಯಣ ಶೆಟ್ಟಿಯು ಕೋಪಗೊಂಡು ತನ್ನ ಕೈಯಲ್ಲಿದ್ದ ಚೂರಿಯಿಂದ ಮಗ ಸಂತೋಷನ ಕೈಕಾಲುಗಳಿಗೆ ತಿವಿದು ರಕ್ತಗಾಯ ಮಾಡಿದ್ದು ಆಗ ಅವರೊಳಗೆ ಹೊಡೆದಾಟವಾಗಿ ಸಂತೋಷನು ತಂದೆಯ ಕೆನ್ನೆಗೆ ,ಎದೆಗೆ ಬೆನ್ನಿಗೆ ಕೈಯಿಂದ ಹೊಡೆದು ದೂಡಿ ಹಾಕಿದ್ದು ನಂತರ ಪುನ: ಸಂತೋಷನಿಗೆ ಗಂಡ ತಿವಿಯಲು ಬಂದಾಗ ಕೋಪಗೊಂಡು ನೀನು ಬದುಕಿದರೆ ಮನೆಯವರಿಗೆಲ್ಲಾ ತೊಂದರೆ ಇದ್ದು ನೀನು ಸಾಯಲೇ ಬೇಕು ಎಂದು ಸಂತೋಷನು ಬಲವಾಗಿ ಕೆನ್ನೆಗೆ ಹೊಡೆದು ಅಂಗಳದಲ್ಲಿ ದೂಡಿ ಹಾಕಿ ನೆಲಕ್ಕೆ ಜಜ್ಜಿದ್ದು ರಾತ್ರಿ 10:00 ಗಂಟೆಯಾದರೂ ಏಳದಿದ್ದನ್ನು ನೋಡಿ ಫಿರ್ಯಾಧಿದಾರರು ಅವರನ್ನು ಎಬ್ಬಿಸಿದಾಗ ನಾರಾಯಣ ಶೆಟ್ಟಿ ಮೃತಪಟ್ಟಿರುವುದಾಗಿ ತಿಳಿದುಬಂದಿರುತ್ತದೆ. ಎಂಬುದಾಗಿ ಶ್ರೀಮತಿ ರತ್ನಾವತಿರವರು ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನಂತೆ ಅಪರಾಧ ಕ್ರಮಾಂಕ 33/2011 ಕಲಂ 302 ಐ.ಪಿ.ಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


  • ಶಂಕರನಾರಾಯಣ; ಸಂತೋಷ (25) ತಂದೆ:ನಾರಾಯಣ ಶೆಟ್ಟಿ ವಾಸ: ಶ್ರೀ ರಾಮದರ್ಶನ್ ಅಬ್ಬಿಮಕ್ಕಿ ಸಿದ್ದಾಪುರ ಗ್ರಾಮ ಕುಂದಾಪುರ ತಾಲೂಕು ಎಂಬವರು ದಿನಾಂಕ 25/04/2011 ರಂದು ಎಂದಿನಂತೆ ವ್ಯಾಪಾರ ಮುಗಿಸಿ ಸಂಜೆ 08:30 ಗಂಟೆಗೆ ತನ್ನ ಮನೆಯಾದ ಸಿದ್ಧಾಪುರ ಗ್ರಾಮದ ಅಬ್ಬಿಮಕ್ಕಿಗೆ ಬಂದಾಗ ತಂದೆ ನಾರಾಯಣ ಶೆಟ್ಟಿಯವರು ವಿಪರೀತ ಮದ್ಯಪಾನ ಮಾಡಿ ಕೈಯಲ್ಲಿ ಒಂದು ಚೂರಿಯನ್ನು ಹಿಡಿದು ಮನೆಯವರಿಗೆ ಬೈಯ್ಯುತ್ತಿದ್ದು ತಾಯಿ ಹಾಗೂ ತಂಗಿಯಂದಿರು ಮನೆಯಲ್ಲಿ ಕಾಣದೇ ಇದ್ದುದ್ದರಿಂದ ಈ ಬಗ್ಗೆ ತಂದೆಯವರಲ್ಲಿ ಕೇಳಿದಾಗ ಅವರು ಕೋಪಗೊಂಡು ಅವರ ಕೈಯಲ್ಲಿದ್ದ ಚೂರಿಯಿಂದ ಬಲಕೈಗೆ ಹಾಗೂ ಎಡತೊಡೆಗೆ ತಿವಿದು ರಕ್ತಗಾಯಮಾಡಿದ್ದು ನಂತರ ಹೊಡೆದಾಟವಾಗಿ ನಾರಾಯಣ ಶೆಟ್ಟಿಯವರ ಕೆನ್ನೆಗೆ ಎದೆಗೆ ಹೊಡೆದು ದೂಡಿಹಾಕಿದ್ದು ನಂತರ ಚಿಕಿತ್ಸೆ ಬಗ್ಗೆ ಕುಂದಾಪುರ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದಾಗಿದೆ. ಎಂಬುದಾಗಿ ಸಂತೋಷರವರು ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನಂತೆ ಅಪರಾಧ ಕ್ರಮಾಂಕ 34/2011 ಕಲಂ 324 ಐ.ಪಿ.ಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ

ಹುಡುಗಿ ಕಾಣೆ ಪ್ರಕರಣ




  • ಬೈಂದೂರು: ದಿನಾಂಕ 21/04/2011 ರಂದು ಸಂಜೆ 17:30 ಘಂಟೆಯಿಂದ 18:30 ಘಂಟೆಯ ಮಧ್ಯಾವಧಿಯಲ್ಲಿ ಕುಂದಾಪುರ ತಾಲೂಕು ಕೆರ್ಗಾಲು ಗ್ರಾಮದ ಮಕ್ಕಿಗದ್ದೆ ಮನೆ ಎಂಬಲ್ಲಿನ ದೇವರಾಯ ದೇವಾಡಿಗ(27ವರ್ಷ)ತಂದೆ: ನಾರಾಯಣ ದೇವಾಡಿಗ ವಾಸ: ಮಕ್ಕಿಗದ್ದೆ ಮನೆ ಕೆರ್ಗಾಲು ಗ್ರಾಮ ಕುಂದಾಪುರ ತಾಲೂಕು ಎಂಬವರ ಕಿರಿಯ ತಂಗಿ ಕುಮಾರಿ ಗುಲಾಬಿ (23 ವರ್ಷ) ತಂದೆ: ನಾರಾಯಣ ದೇವಾಡಿಗ ಎಂಬವರು ಮನೆಯಿಂದ ಕಾಣೆಯಾಗಿದ್ದು ತಲಾಷೆಯ ಬಗ್ಗೆ ತಮ್ಮ ನರೆಕರೆಯ ಪರಿಚಯದ ಹಾಗೂ ಸಂಬಂಧಿಕರ ಮನೆಗಳಲ್ಲಿ ಹುಡುಕಾಡಿದರೂ ಪತ್ತೆಯಾಗದೇ ಇದ್ದುದಾಗಿದೆ ಈ ಬಗ್ಗೆ ದೇವರಾಯ ದೇವಾಡಿಗರವರು ನೀಡಿದ ದೂರಿನಂತೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 90/2011 ಕಲಂ ಹುಡುಗಿ ಕಾಣೆಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

Tuesday, April 26, 2011

Daily Crime Reported on 26/04/2011 17:00 Hrs

ಅಪಘಾತ ಪ್ರಕರಣ

  • ಮಣಿಪಾಲ :ದಿನಾಂಕ 26.04.2011 ರಂದು ನೋರ್ಮನ್ ಸಂದೀಪ್ ನರೋನ್ನ(29 ವರ್ಷ), ತಂದೆ:ದಿ. ಮರಿಯನ್ ಪೀಟರ್ ನರೋನ್ನ, ವಾಸ: ಹಿಲ್ ಸೈಡ್ ಹೌಸ್, ಕೊರಂಗ್ರಪಾಡಿ ಪೋಸ್ಟ್, ಉಡುಪಿ.ರವರು ತನ್ನ ಕ್ವಾಲಿಸ್ ನಂಬ್ರ ಕೆಎ 05 ಎಂಬಿ 2112ನೇದರಲ್ಲಿ ತನ್ನ ಮನೆಯಿಂದ ದೆಂದೂರುಕಟ್ಟೆಗೆ ಹೋಗುತ್ತಿರುವಾಗ ಸಮಯ ಬೆಳಿಗ್ಗೆ 7:20 ಗಂಟೆಗೆ ಅಲೆವೂರು ರಾಂಪುರ ಎಂಬಲ್ಲಿಗೆ ತಲುಪಿದಾಗ ಎದುರುಗಡೆಯಿಂದ ಒಂದು ಬಸ್ಸು ಉಡುಪಿ ಕಡೆಗೆ ಹೋಗುತ್ತಿದ್ದುದನ್ನು ಬೈಕ್ ನಂಬ್ರ ಕೆಎ 20 ಆರ್‌ 3173ನೇದರ ಸವಾರ ಬಸ್ಸನ್ನು ಓವರ್‌ಟೇಕ್ ಮಾಡಲು ಪ್ರಯತ್ನಿಸಿ ಪಿರ್ಯಾದಿದಾರರು ಚಲಾಯಿಸುತ್ತಿದ್ದ ಕ್ವಾಲಿಸ್ ಕಾರ್‌ನ ಮುಂಭಾಗಕ್ಕೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರನಿಗೆ ಅಲ್ಪಸ್ಪಲ್ಪ ತರಚಿದ ಗಾಯಗಳಾಗಿರುತ್ತದೆ ಹಾಗೂ ಪಿರ್ಯಾದಿದಾರರ ವಾಹನದ ಮುಂಭಾಗ ಜಖಂ ಗೊಂಡಿರುತ್ತದೆ. ಅಪಘಾತಕ್ಕೆ ಬೈಕ್ ಸವಾರ ತನ್ನ ಬೈಕನ್ನು ಅತಿವೇಗ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿರುವುದೇ ಅಪಘಾತಕ್ಕೆ ಕಾರಣವಾಗಿರುತ್ತದೆ ಎಂಬುದಾಗಿ ನೋರ್ಮನ್ ಸಂದೀಪ್ ನರೋನ್ನ ರವರು ನೀಡಿದ ದೂರಿನಂತೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ ಅ.ಕ್ರ 89/2011 ಕಲಂ: 279 ಐ.ಪಿ.ಸಿ. ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಮೋಟಾರು ಸೈಕಲ್‌ ಕಳವು ಪ್ರಕರಣ
  • ಬೈಂದೂರು :ದಿನಾಂಕ 24/04/2011 ರಂದು ಬೆಳಗಿನ ಜಾವ 05:30 ಘಂಟೆಯಿಂದ ಬೆಳಿಗ್ಗೆ 11:00 ಘಂಟೆಯ ಮಧ್ಯಾವಧಿಯಲ್ಲಿ ಅಮ್ಜದ್‌‌ ಹುಸೇನ್‌ ದಬಾಪ್ಪು (28 ವರ್ಷ) ತಂದೆ: ಡಿ.ಎಮ್‌. ಬಾಕರ್‌ ವಾಸ: ಕಮಲಾ ನಿವಾಸ ನಾಕಟ್ಟೆ ಯಡ್ತರೆ ಗ್ರಾಮ ಕುಂದಾಪುರ ತಾಲೂಕು ರವರ ಮನೆ ಸಮೀಪದ ಮಸೀದಿಯಲ್ಲಿ ನಮಾಜು ಮಾಡಿ ವಾಪಾಸ್ಸು ತಂದು ನಿಲ್ಲಿಸಿದ್ದ ಪಿರ್ಯಾದಿದಾರರ ಯಮಹಾ ಫೇಜರ್‌ ಮೋಟಾರು ಸೈಕಲ್‌ ಕೆಎ 20 ಡಬ್ಲ್ಯೂ 1875ನೇದನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು ಪಿರ್ಯಾದಿದಾರರು ಈ ವರೆಗೆ ಯಾರಾದರೂ ಸ್ನೇಹಿತರು ತನ್ನ ಮೊಟಾರು ಸೈಕಲ್‌ ಕೊಂಡು ಹೋಗಿರ ಬಹುದೆಂದು ಭಾವಿಸಿ ಹುಡಕಾಡಿದರೂ ಪತ್ತೆಯಾಗದೇ ಇದ್ದುದರಿಂದ ಈ ಪಿರ್ಯಾದು ನೀಡಲು ವಿಳಂಭವಾಗಿರುತ್ತದೆ ಕಳವು ಆದ ಮೋಟಾರು ಸೈಕಲ್‌ ಮೊತ್ತ ರೂ 45 ಸಾವಿರ ಆಗಿರುತ್ತದೆ ಎಂಬುದಾಗಿ ಅಮ್ಜದ್‌‌ ಹುಸೇನ್‌ ದಬಾಪ್ಪು ರವರು ನೀಡಿದ ದೂರಿನಂತೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ ಅ.ಕ್ರ 89/2011 ಕಲಂ: 379 ಐ.ಪಿ.ಸಿ. ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಖಾಸಗಿ ದೂರು ದಾಖಲು
  • ಬೈಂದೂರು :ಮಾನ್ಯ ನ್ಯಾಯಾಲಯಾದ ಖಾಸಗಿ ಪಿರ್ಯಾದ ಸಂಖ್ಯೆ 74/2011 ಸಾರಾಂಶವೇನೆಂದರೆ, ದಿನಾಂಕ 29-03-2011 ರಂದು 10:30 ಘಂಟೆಗೆ ಕುಂದಾಪುರ ತಾಲೂಕು ಹೆರಂಜಾಲು ಗ್ರಾಮದ ಆಶ್ರಯ ಕಾಲೋನಿ ಎಂಬಲ್ಲಿನ ಪಿರ್ಯಾದಿಧಾರರ ಮನೆ ಸಮೀಪದಲ್ಲಿ ಗ್ರಾಮ ಪಂಚಾಯತ್‌ ಅಳವಡಿಸಿದ ಕುಡಿಯು ನಳ್ಳಿ ನೀರಿನ ವಿಚಾರದಲ್ಲಿ ಆರೋಪಿಗಳಾದ 1. ಶ್ರೀ. ಪ್ರಭಾಕರ ಮೊಗವೀರ ಪ್ರಾಯ 28 ವರ್ಷ ತಂದೆ ವೆಂಕಟೇಶ ಮೊಗವೀರ, 2.ಶ್ರೀಮತಿ ಮಾಚಿ ಪ್ರಾಯ 50 ವರ್ಷ ಗಂಡ: ವೆಂಕಟೇಶ ಮೊಗವೀರ, 3.ಜ್ಯೂತಿ ಪ್ರಾಯ 25 ವರ್ಷ ತಂದೆ ವೆಂಕಟೇಶ ಮೊಗವೀರ, 4.ನಾಗರತ್ನ ಪ್ರಾಯ 22 ವರ್ಷ ತಂದೆ ವೆಂಕಟೇಶ ಮೊಗವೀರ 5.ಜನಾರ್ಧನ ಪ್ರಾಯ 20 ವರ್ಷ ತಂದೆ ವೆಂಕಟೇಶ ಮೊಗವೀರ (ಎಲ್ಲಾ ಆರೋಪಿತರು ಹೆಂಜಾಲು ಗ್ರಾಮದ ಆಶ್ರಯ ಕಾಲೋನಿ ವಾಸಿಗಳು.)ರವರುಗಳು ಸಮಾನ ಉದ್ದೇಶದಿಂದ ಅಕ್ರಮ ಕೂಟ ಸೇರಿಕೊಂಡು ಪಿರ್ಯಾದಿದಾರರನ್ನು ಮತ್ತು ನಾರಾಯಣ ಪೂಜಾರಿ ಎಂಬವರನ್ನು ಅಡ್ಡಗಟ್ಟಿ ಅವಾಚ್ಯ ಶಬ್ದಗಳಿಂದ ಬೈದು ಆರೋಪಿತರೆಲ್ಲರೂ ಪಿರ್ಯಾಧಿಗೆ ಮತ್ತು ನಾರಾಯಣ ಪೂಜಾರಿಯವರಿಗೆ ಕೈ ಗಳಿಂದ ಹೊಡೆದು ಕೆಳಗೆ ಬೀಳಿಸಿ ತುಳಿದು ವಾಪಾಸ್ಸು ಹೋಗುವಾಗ ಪಿರ್ಯಾಧಿ ಮತ್ತು ನಾರಾಯಣ ಪೂಜಾರಿಯವರನ್ನು ಉದ್ದೇಶಿಸಿ ನಿಮಗೆ ನಿಮಗೆ ಇಷ್ಡಕ್ಕೆ ಮುಗಿಯಲಿಲ್ಲ ಮುಂದೆ ನಿಮ್ಮಿಬ್ಬರ ಕೈ ಕಾಲು ಮುರಿದು ಹಾಕುತ್ತೇವೆ ಎಂದು ಜೀವ ಬೆದರಿಕೆ ಹಾಕಿರುವುದಾಗಿದೆ ಎಂಬುದಾಗಿ ಶ್ರೀಮತಿ ಕನಕ ಪೂಜಾರ್ತಿ (62 ವರ್ಷ) ತಂಗ ದಿ. ಶೀನ ಪೂಜಾರಿ ವಾಸ; ಆಶ್ರಯ ಕಾಲೋನಿ ಹೆರಂಜಾಲು ಗ್ರಾಮ ಕುಂದಾಪುರ ತಾಲೂಕು ರವರು ನೀಡಿದ ದೂರಿನಂತೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ ಅ.ಕ್ರ 87/2011 ಕಲಂ: 143,147,341,232,506 ಜೊತೆಗೆ 149 ಐ.ಪಿ.ಸಿ. ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ
  • ಬೈಂದೂರು :ಮಾನ್ಯ ನ್ಯಾಯಾಲಯಾದ ಖಾಸಗಿ ಪಿರ್ಯಾದ ಸಂಖ್ಯೆ 62/2011 ಸಾರಾಂಶವೇನೆಂದರೆ, ದಿನಾಂಕ 14/06/1981 ರಂದು ಕುಂದಾಪುರ ತಾಲೂಕು ಉಳ್ಳೂರು ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಹಿಂದೂ ಸಂಪ್ರದಾಯದಂತೆ ಮುದುವೆಯಾದ ಆರೋಪಿ 1ನೇಯವರು ಪಿರ್ಯಾದಿದಾರರೊಂದಿಗೆ 10 ವರ್ಷಗಳ ಕಾಲ ವೈವಾಹಿಕ ಜೀವನ ನಡಸಿ ಮೂರು ಮಕ್ಕಳನ್ನು ಹೊಂದಿ ಸರಿಯಾಗಿ ಮಕ್ಕಳನ್ನು ನೋಡಿಕೊಳ್ಳದೇ ಪಿರ್ಯಾದಿದಾರರೊಂದಿಗೆ ಸರಿಯಾಗಿ ಜೀವನ ನಡೆಸದೇ ತನ್ನ ತವರು ಮನೆಯಲ್ಲಿಯೇ ಉಳಕೊಂಡು ನಂತ್ರ ಆರೋಪಿ 2ನೇಯವರರೊಂದಿಗೆ ಅನೈತಿಕ ಸಂಬಂಧ ಬೆಳಸಿ ಪಿರ್ಯಾದಿದಾರರು ಜೀವಂತವಿರುವಾಗಲೇ ವಿವಾಹ ವಿಚ್ಚೇಧನವನ್ನು ಪಡೆಯದೇ ದಿನಾಂಕ 26/05/2008 ರಂದು ಬಡಾಕೆರೆ ಚೆರಿನ ಮಕ್ಕಿ ಹನೆಯಡಿ ಮನೆ ಎಂಬಲ್ಲಿ ಆರೋಪಿ 3 ರಿಂದ 7ನೇಯವರ ಪ್ರೇರಪಣೆಯಿಂದ ಇನ್ನೊಂದು ಮದುವೆಯಾಗಿರುವುದಾಗಿದೆ ಆರೋಪಿಗಳಾದ 1. ಪಾರ್ವತಿ ಪೂಜಾರ್ತಿ ತಾಯಿ; ಪುಟ್ಟಮ್ಮ ವಾಸ ಕಿರಿಮಂಜೇಶ್ವರ ಗ್ರಾಮ ಕುಂದಾಪುರ ತಾಲೂಕು 2. ನಾರಾಯಣ @ ನಾರಾಯಣ ಪೂಜಾರಿ ತಂದೆ : ಮಹಾಲಿಂಗ ಪೂಜಾರಿ ವಾಸ:ನಂದನವನ ಮನೆ ಕಾಕತೋಟ 11ನೇ ಉಳ್ಳೂರು ಕುಂದಾಪುರ ತಾಲೂಕು ಉಡುಪಿ 3.ಮರ್ಲಿ ಖಾರ್ವಿ ಗಂಡ: ಬಚ್ಚ ಖಾರ್ವಿ ವಾಸ;- ಪಂಡಿ ಮನೆ ನಾವುಂದ ಗ್ರಾಮ ಕುಂದಾಪುರ ತಾಲೂಕು 4. ಶ್ರೀನಿವಾಸತಂದೆ: ರಾಮಪ್ಪ ವಾಸ; ಕಾನ್‌ಬೇರಿ ಓಟೂರು ಗ್ರಾಮ ಸೊರಬ ತಾಲೂಕು ಶಿವಮೊಗ್ಗ ಜಿಲ್ಲೆ 5.ರೇಣುಕಾ ಗಂಡ ಶ್ರೀನಿವಾಸ ಪೂಜಾರಿ ವಾಸ; ಕಾನ್‌ಬೇರಿ ಓಟೂರು ಗ್ರಾಮ ಸೊರಬ ತಾಲೂಕು ಶಿವಮೊಗ್ಗ ಜಿಲ್ಲೆ 6.ಪುಟ್ಟಮ್ಮ ಗಂಡ ರಾಮಪ್ಪ ಪೂಜಾರಿ ವಾಸ; ಕಾನ್‌ಬೇರಿ ಓಟೂರು ಗ್ರಾಮ ಸೊರಬ ತಾಲೂಕು ಶಿವಮೊಗ್ಗ ಜಿಲ್ಲೆ 7. ಮೀನಾಕ್ಷಿ ಗಂಡ ನಾರಾಯಣ ಪೂಜಾರಿ ವಾಸ; ಮೇಲ್‌ ಮನೆ ಚೆರಿನ್‌ ಮಕ್ಕಿ ಹನೆಯಡಿ ಮನೆ ಬಡಾಕರೆ ಗ್ರಾಮ ಕುಂದಾಪುರ ತಾಲೂಕು ಉಡುಪಿ ಜಿಲ್ಲೆ ರವರುಗಳ ಮೇಲೆ ಮಂಜು ಪೂಜಾರಿ (48 ವರ್ಷ) ತಾಯಿ ದುಗ್ಗಿ ಪೂಜಾರಿ ವಾಸ; ಯರುಕೋಣಿ ಗ್ರಾಮ ಕುಂದಾಪುರ ತಾಲೂಕುರವರು ನೀಡಿದ ದೂರಿನಂತೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ ಅ.ಕ್ರ 88/2011 ಕಲಂ: 494,497,110 ಜೊತೆಗೆ 149 ಐ.ಪಿ.ಸಿ. ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ