ಅಸ್ವಾಭಾವಿಕ ಮರಣ ಪ್ರಕರಣ :
- ಉಡುಪಿ ನಗರ : ಶ್ರೀಮತಿ ಮಲ್ಲಮ್ಮ (40) ಗಂಡ: ಬೀರಪ್ಪ, ವಾಸ: ಬೈಲೂರು ಶಾಂತಿ ನಗರ 76 ಬಡಗುಬೆಟ್ಟು ಗ್ರಾಮ ಉಡುಪಿ ಇವರ ಗಂಡ ಬೀರಪ್ಪ ವಿಪರೀತ ಶರಾಬು ಸೇವಿಸುವ ಚಟವನ್ನು ಹೊಂದಿದ್ದು ದಿನಾಂಕ 06/09/2015 ರಂದು ಕೂಲಿ ಕೆಲಸಕ್ಕೆ ಹೋಗಿದ್ದು ರಾತ್ರಿ ಸಮಯ ಸುಮಾರು 10:45 ಗಂಟೆಗೆ ಬೀರಪ್ಪನವರು ವೀಪರೀತ ಶರಾಬು ಸೇವಿಸಿ ಮನೆ ಕಡೆಗೆ ನಡೆದುಕೊಂಡು ಬರುವಾಗ ಮನೆಯ ಎದುರಿನ ತೋಡಿಗೆ ಬಿದ್ದು ಹಣೆಯಲ್ಲಿ ರಕ್ತಗಾಯವಾಗಿರುತ್ತದೆ. ಬೀರಪ್ಪನವರು ಪ್ರತಿ ದಿನ ಕುಡಿದು ಬಿಳುತ್ತಿದ್ದರಿಂದ ಈ ಬಗ್ಗೆ ಶ್ರೀಮತಿ ಮಲ್ಲಮ್ಮರು ತಲೆ ಕೆಡಿಸಿಕೊಳ್ಳದೆ ಮಲಗಿದ್ದು ದಿನಾಂಕ 07/09/2015 ರಂದು ಬೆಳಗ್ಗೆ 05:00 ಗಂಟೆಗೆ ಎದ್ದು ನೋಡುವಾಗ ಬೀರಪ್ಪನವರು ಏಳದೆ ಇದ್ದು ಮೃತಪಟ್ಟಿರುವುದಾಗಿ ಕಂಡು ಬಂದಿರುತ್ತದೆ. ಬೀರಪ್ಪನವರು ವೀಪರೀತ ಶರಾಬು ಸೇವಿಸಿ ಮನೆಯ ಎದುರಿನ ತೋಡಿನ ಕಲ್ಲಿನ ಮೇಲೆ ಬಿದ್ದು ತಲೆಗೆ ಗಾಯವಾಗಿದ್ದರಿಂದ ಮೃತಪಟ್ಟಿರಬಹುದಾಗಿದೆ ಎಂಬುದಾಗಿ ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣಾ ಯುಡಿಆರ್ ಕ್ರಮಾಂಕ : 49/2015 ಕಲಂ 174 ಸಿ ಆರ್ಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
- ಹಿರಿಯಡ್ಕ : ಉಮೇಶ್ ಪೂಜಾರಿ (35) ತಂದೆ: ಸೋಮಪ್ಪ ಪೂಜಾರಿ ವಾಸ: ಬೃಂದಾವನ ಪಾಲುಬೆಟ್ಟು, ಅಂಜಾರು ಗ್ರಾಮ, ಉಡುಪಿಯವರ ಚಿಕ್ಕಮ್ಮನ ಮಗ ಅಂಜಾರು ಗ್ರಾಮದ ನಿವಾಸಿ ಸಂದೀಪ್ ಪೂಜಾರಿ (26) ಎಂಬವರು ಈ ದಿನ ದಿನಾಂಕ: 07/09/2015 ರಂದು ಗದ್ದೆಗೆ ನೀರು ಬಿಡುವ ಸಮಯ ಸುಮಾರು ಮಧ್ಯಾಹ್ನ 12.15 ಗಂಟೆಗೆ ಅನಿರೀಕ್ಷಿತವಾಗಿ ಸಿಡಿಲು ಬಡಿದು ಅಸ್ವಸ್ಥಗೊಂಡವರನ್ನು ಮಣಿಪಾಲ ಕೆಎಂಸಿ ಆಸ್ಪತ್ರೆಗೆ ಕೊಂಡು ಹೋಗುವಾಗ ಮೃತಪಟ್ಟಿರುವುದಾಗಿದೆ ಎಂಬುದಾಗಿ ಉಮೇಶ್ ಪೂಜಾರಿಯವರು ನೀಡಿದ ದೂರಿನಂತೆ ಹಿರಿಯಡ್ಕ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ : 17/2015 ಕಲಂ. 174 ಸಿ ಆರ್ಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
No comments:
Post a Comment