ಅಪಘಾತ ಪ್ರಕರಣ
- ಕೋಟ: ಪಿರ್ಯಾದಿದಾರರಾದ ರಾಜೇಶ ಮರಕಾಲ (35), ತಂದೆ: ದಿ.ಶೀನ ಮರಕಾಲ, ವಾಸ: ಎಂಜಿ ಕಾಲೂನಿ ವಡ್ಡರ್ಸೆ ಗ್ರಾಮ ಉಡುಪಿ ತಾಲೂಕು ಎಂಬುವವರು ದಿನಾಂಕ 06/09/2015ರಂದು ಸಂಜೆ ತನ್ನ ಸುಜುಕಿ ಮೋಟಾರ್ ಸೈಕಲ್ ನಂಬ್ರ KA 19 W 1043 ನೇದರಲ್ಲಿ ಸವಾರಿ ಮಾಡಿಕೊಂಡು ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಸಾಲಿಗ್ರಾಮದಿಂದ ಉಡುಪಿ ಕಡೆಗೆ ಹೋಗುತ್ತಾ ಸಾಲಿಗ್ರಾಮದ ಮೀನು ಮಾರುಕಟ್ಟೆ ಜಂಕ್ಷನ್ ಬಳಿ ಮೋಟಾರು ಸೈಕಲ್ ನ್ನು ತಿರುಗಿಸಿಕೊಂಡು ಉಡುಪಿ ಕಡೆಗೆ ಹೋಗುವಾಗ ಸಂಜೆ 04:30 ಗಂಟೆಗೆ ಉಡುಪಿ ಕಡೆಯಿಂದ ಕುಂದಾಪುರ ಕಡೆಗೆ KA 20 D 2823 ನೇ ಬಸ್ ನ ಚಾಲಕ ರೋಬರ್ಟ ಡೇಸಾ ಎಂಬುವವರು ಅತಿವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ರಾಜೇಶ ಮರಕಾಲ ರವರು ಚಲಾಯಿಸುತ್ತಿದ್ದ ಮೋಟಾರು ಸೈಕಲ್ಗೆ ಹಿಂದಿನಿಂದ ಡಿಕ್ಕಿಹೊಡೆದ ಪರಿಣಾಮ ಅವರು ಮೋಟಾರು ಸೈಕಲ್ ಸಮೇತ ಡಾಮರು ರಸ್ತೆಗೆ ಬಿದ್ದು ಎಡ ಕೈ ಭುಜಕ್ಕೆ ಮೂಳೆ ಮುರಿತ ಹಾಗೂ ಸೊಂಟಕ್ಕೆ ಮತ್ತು ಮೈಕೈಗೆ ಗುದ್ದಿದ ನೋವು ಉಂಟಾಗಿದ್ದು ಈ ಬಗ್ಗೆ ಬ್ರಹ್ಮಾವರ ಮಹೇಶ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 201/2015 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
- ಬ್ರಹ್ಮಾವರ: ದಿನಾಂಕ 06/09/2015 ರಂದು 15:15 ಗಂಟೆಗೆ ಉಡುಪಿ ತಾಲೂಕು ಹೊಸೂರು ಗ್ರಾಮದ ಪಾಲಂಡೆ ಎಂಬಲ್ಲಿ ಪಿರ್ಯಾದಿದಾರರಾದ ಸುರೇಶ ಶೆಟ್ಟಿ(47), ತಂದೆ: ದಿ. ಕೃಷ್ಣಯ್ಯ ಶೆಟ್ಟಿ, ವಾಸ: ಪಾಲಂಡೆ ಮನೆ ಕರ್ಜೆ ಅಂಚೆ ಹೊಸೂರು ಗ್ರಾಮ ಉಡುಪಿ ತಾಲೂಕು ಇವರ ತಮ್ಮ ರಮೇಶ ಶೆಟ್ಟಿ (45) ಹಾಗೂ ತಮ್ಮನ ಹೆಂಡತಿ ಆರತಿ ಶೆಡ್ತಿ (33) ಎಂಬುವವರು ಅವರ ವಾಸದ ಮನೆಯ ಬಳಿ ಕೆರೆಯ ಅಂಚಿನಲ್ಲಿರುವ ಗದ್ದೆಯಲ್ಲಿ ಕೃಷಿ ಕೆಲಸ ಮಾಡಿಕೊಂಡಿರುವಾಗ ಆರತಿ ರವರು ಆಕಸ್ಮಿಕವಾಗಿ ಕೆರೆಯ ನೀರಿಗೆ ಜಾರಿ ಬಿದ್ದು ನೀರಿನಲ್ಲಿ ಮುಳುಗಿದವರನ್ನು ಬದುಕಿಸಲು ಗದ್ದೆಯ ಬಳಿಯಲ್ಲಿ ಕೆಲಸ ಮಾಡುತ್ತಿದ್ದ ರಮೇಶ ಶೆಟ್ಟಿ ರವರು ಕೆರೆಯ ನೀರಿನಿಂದ ಆರತಿಯವರನ್ನು ಮೇಲಕ್ಕೆತ್ತಲು ಕೆರೆಯ ನೀರಿಗೆ ಇಳಿದು ಪ್ರಯತ್ನಿಸಿದ್ದು ಈಜು ಬಾರದ ಕಾರಣ ಅವರಿಬ್ಬರೂ ಕೆರೆಯ ನೀರಿನಲ್ಲಿ ಮುಳುಗಿ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 50/2015 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
No comments:
Post a Comment