Wednesday, September 02, 2015

Daily Crime Reports As on 02/09/2015 at 17:00 Hrs

ಅಪಘಾತ ಪ್ರಕರಣ
  • ಕುಂದಾಪುರ:  ದಿನಾಂಕ 02/09/2015 ರಂದು ಬೆಳಿಗ್ಗೆ  6:15  ಗಂಟೆಗೆ  ಕುಂದಾಪುರ  ತಾಲೂಕು ಬೀಜಾಡಿ  ಗ್ರಾಮದ ಪೂಜಾ ಟೈಲ್ಸ್‌ ಬಳಿ ರಾ.ಹೆ  66 ರಸ್ತೆಯಲ್ಲಿ ಆಪಾದಿತ  ಮಹೇಶ ಎಂಬವರು KA20-B-8913   ನೇ ಮಹೀಂದ್ರ ಜೈಲೋ  ವಾಹನವನ್ನು ಕುಂದಾಪುರ  ಕಡೆಯಿಂದ  ಉಡುಪಿ  ಕಡೆಗೆ  ಅತೀವೇಗ  ಹಾಗೂ  ಅಜಾಗರೂಕತೆಯಿಂದ  ಚಲಾಯಿಸಿಕೊಂಡು  ಬಂದು   ರಸ್ತೆಯ  ಬದಿಯಲ್ಲಿ  ನಡೆದುಕೊಂಡು  ಹೋಗುತ್ತಿದ್ದ  ರಮೇಶ  ಎಂಬವರಿಗೆ  ಡಿಕ್ಕಿ ಹೊಡೆದ ಪರಿಣಾಮ ಅವರ  ತಲೆಗೆ ಹಾಗೂ  ಮೈಕೈಗೆ ಗಾಯ ನೋವು  ಆಗಿ ಕೊಟೇಶ್ವರ  ಎನ್‌‌. ಆರ್‌‌. ಆಚಾರ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ  ಪಡೆದು  ಹೆಚ್ಚಿನ ಚಿಕಿತ್ಸೆ  ಬಗ್ಗೆ ಮಣಿಪಾಲದ  ಕೆ.ಎಂ.ಸಿ  ಆಸ್ಪತ್ರೆಗೆ  ಹೋಗಿರುತ್ತಾರೆ. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 108/15  ಕಲಂ 279, 337  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 ಅಸ್ವಾಭಾವಿಕ ಮರಣ ಪ್ರಕರಣಗಳು
  • ಕುಂದಾಪುರ: ಪಿರ್ಯಾದಿ ಬಾಬು ಪೂಜಾರಿ  ಇವರ ತಂಗಿಯ ಮಗಳು ಶ್ರೀಮತಿ ಸಲೀತಾ ಪೂಜಾರಿ ಪ್ರಾಯ 30 ವರ್ಷ ಎಂಬವರು ದಿನಾಂಕ 01.09.2015 ರಂದು ಮಧ್ಯಾಹ್ನ 12:00 ಗಂಟೆಗೆ ಬೀಜಾಡಿ ಗ್ರಾಮದ ಬೀಜಾಡಿ ತ್ರಿಮೂರ್ತಿ ಸರ್ಕಲ್‌ ಬಳಿ ಮನೆಯಲ್ಲಿ ಯಾರೂ ಇಲ್ಲದ ಸಮಯ ವಿಷ ಸೇವಿಸಿದ್ದು, ಬಳಿಕ ಮಂಗಳೂರು ವೆನ್‌ಲಾಕ್‌ ಆಸ್ಪತ್ರೆಗೆ ದಾಖಲಿಸಿದ್ದು ದಿನಾಂಕ 02.09.2015 ರಂದು ಬೆಳಿಗ್ಗೆ 09:00 ಗಂಟೆಗೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಕುಂದಾಪುರ  ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 39/2015 ಕಲಂ: 174 ಸಿ.ಆರ್‌.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 

No comments: