ಅಪಘಾತ ಪ್ರಕರಣ
- ಕೋಟ: ಪಿರ್ಯಾದಿ ಜಯಪ್ರಕಾಶ ಶೆಟ್ಟಿ,ತಂದೆ:ಸಿ.ನಾರಾಯಣ ಶೆಟ್ಟಿ,ವಾಸ:ಹೊಯಿನಾಳಿ ,ಹಾರ್ದಳ್ಳಿ ಮಂಡಳ್ಳಿ ಗ್ರಾಮ,ಕುಂದಾಪುರ ತಾಲೂಕು ಇವರು ದಿನಾಂಕ:29/08/2015 ರಂದು ಸಂಜೆ ಸುಮಾರು 5:30 ಗಂಟೆಗೆ ಹುಣ್ಸೆಮಕ್ಕಿಯಿಂದ ಬಿದ್ಕಲ್ಕಟ್ಟೆ ಕಡೆಗೆ ಬೈಕಿನಲ್ಲಿ ಹೋಗುವಾಗ ಯಡಾಡಿ-ಮತ್ಯಾಡಿ ಗ್ರಾಮದ ಗುಡ್ಡೆಅಂಗಡಿ ಬಳಿ ಕೋಟೇಶ್ವರ –ಸೋಮೆಶ್ವರ ರಸ್ತೆಯ ಇಳಿಜಾರಿನಲ್ಲಿ ಅವರ ಎದುರಿನಿಂದ ಕೆಎ 40 ಎ 2358 ನೇ ವಾಹನದ ಚಾಲಕ ಆತನ ವಾಹನವನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ಕೊಂಡು ಬಂದು ರಸ್ತೆ ದಾಟುತ್ತಿದ್ದ ಜಯಲಕ್ಷ್ಮೀ ಎಂಬುವರಿಗೆ ಢಿಕ್ಕಿ ಹೊಡೆದ ಪರಿಣಾಮ ಅವರ ತಲೆಗೆ ಪೆಟ್ಟಾಗಿ ಚಿಕಿತ್ಸೆ ಬಗ್ಗೆ ಕುಂದಾಪುರ ಚಿನ್ಮಯಿ ಆಸ್ಪತ್ರೆಗೆ ಕೊಂಡು ಹೋಗಿ ಬಳಿಕ ಹೆಚ್ಚಿನ ಚಿಕಿತ್ಸೆ ಬಗ್ಗೆ ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಿಸಿರುವುದಾಗಿದೆ, ಈ ಬಗ್ಗೆ ಕೋಟ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ: 198/2015 ಕಲಂ:279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ
No comments:
Post a Comment