ಹುಡುಗಿ ಕಾಣೆ ಪ್ರಕರಣ
- ಬ್ರಹ್ಮಾವರ : ದಿನಾಂಕ: 24/08/2015 ರಂದು ಬೆಳಿಗ್ಗೆ 09:00 ಗಂಟೆಯ ಸಮಯಕ್ಕೆ ಪಿರ್ಯಾದಿ ರವಿ ನಾಯ್ಕ (25) ತಂದೆ: ದೇವಣ್ಣ ನಾಯ್ಕ ವಾಸ: ಕೊಕ್ಕರ್ಣೆ ಅಂಚೆ, ಗಾಂಧಿನಗರ ಪೆಜಮಂಗೂರು ಗ್ರಾಮ ಉಡುಪಿ ತಾಲೂಕು ರವರ ಮನೆಯಿಂದ ಸ್ವಲ್ಪ ಮಾನಸಿಕವಾಗಿ ಅಸ್ವಸ್ಥಳಾಗಿದ್ದ ಅಕ್ಕ ನೀಲ (27) ಎಂಬವರು ಕೆಂಜೂರು ಗ್ರಾಮದ ಬಲ್ಲೆಬಯಲು ಎಂಬಲ್ಲಿರುವ ತನ್ನ ಚಿಕ್ಕಮ್ಮನ ಮನೆಗೆ ಹೋಗಿ ಬರುತ್ತೇನೆಂದು ತಾಯಿಯ ಬಳಿ ತಿಳಿಸಿ ತನ್ನ ಆಧಾರ್ ಕಾರ್ಡ್ನ್ನು ತೆಗೆದುಕೊಂಡು ಹೋದವರು ಈವರೆಗೆ ಚಿಕ್ಕಮ್ಮನ ಮನೆಗೂ ಹೋಗದೇ ತನ್ನ ಮನೆಗೂ ಬಾರದೇ ನಾಪತ್ತೆಯಾಗಿರುತ್ತಾಳೆ , ಈ ಬಗ್ಗೆ ಬ್ರಹ್ಮಾವರ ಪೋಲಿಸ್ ಠಾಣೆ ಅಪರಾಧ ಕ್ರಮಾಂಕ 170/15 ಕಲಂ: ಹುಡುಗಿ ಕಾಣೆ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಅಸ್ವಾಭಾವಿಕ
ಮರಣ ಪ್ರಕರಣ
- ಮಲ್ಪೆ: ಪಿರ್ಯಾದಿ ದೇವಯ್ಯ(30) ತಂದೆ: ಕುಪ್ಪಯ್ಯ, ವಾಸ: ಹುಲ್ಮಕ್ಕಿ, ಹೆಬ್ಬಾಳ, ಭಟ್ಕ್ಳ ತಾ. ಉತ್ತರ ಕನ್ನ ಜಿಲ್ಲೆರವರ ಅಣ್ಣನಾದ ಕೃಷ್ಣ (51) ಇವರು ಮಲ್ಪೆಯಲ್ಲಿ ಶೇಖರ ಸುವರ್ಣ ರವರ ಮೀನುಗಾರಿಕೆ ಬೋಟಿನಲ್ಲಿ ಮೀನುಗಾರಿಕೆ ಕೆಲಸ ಮಾಡಿಕೊಂಡಿದ್ದು, ದಿನಾಂಕ:18/08/2015 ರಂದು ಮೀನುಗಾರಿಕೆಂದು ಮಲ್ಪೆಯಿಂದ ಅರಬ್ಬೀ ಸಮುದ್ರಕ್ಕೆ ಹೋಗಿರುತ್ತಾರೆ, ದಿನಾಂಕ:25/08/2015 ರಂದು ಮೀನುಗಾರಿಕೆ ಮುಗಿಸಿ ವಾಪಸು ಮಲ್ಪೆ ಬಂದರು ಸಮೀಪ ಬರುತ್ತಿರುವಾಗ ಬೆಳಿಗ್ಗೆ ಸಮಯ ಸುಮಾರು 8.30 ಗಂಟೆಗೆ ಕೃಷ್ಣ ರವರು ಬೋಟಿನಿಂದ ಆಕಸ್ಮಿಕವಾಗಿ ಕಾಲು ಜಾರಿ ಸಮುದ್ರಕ್ಕೆ ಬಿದ್ದಿದ್ದು ಹುಡುಕಾಡಿದಲ್ಲಿ ಸಿಕ್ಕಿರುವುದಿಲ್ಲ, ಬಂದರಿನ ಆಸುಪಾಸಿನಲ್ಲಿ ಹುಡುಕಾಡಿದಲ್ಲಿ ಪತ್ತೆಯಾಗಿರುವುದಿಲ್ಲ, ದಿನಾಂಕ:26/08/2015 ರಂದು ಬೆಳಿಗ್ಗೆಯಿಂದ ಹುಡುಕಾಡುತ್ತಿದ್ದಾಗ ಸಂಜೆ 3.30 ಗಂಟೆಯೊಷ್ಟೊತ್ತಿಗೆ ಮಲ್ಪೆ ಬಂದರಿನಲ್ಲಿ ಒಂದು ಶವ ನೀರಿನಲ್ಲಿ ತೇಲಾಡುತ್ತಿದೆ ಎಂಬ ವಿಚಾರ ತಿಳಿದು ಕೂಡಲೇ ಸ್ಥಳಕ್ಕೆ ಹೋಗಿ ನೋಡಿದಾಗ, ಕೃಷ್ಣನವರ ಶವವಾಗಿರುತ್ತದೆ, ಈ ಬಗ್ಗೆ ಮಲ್ಪೆ ಠಾಣೆ ಯು.ಡಿ.ಆರ್ ನಂಬ್ರ 37/2015, ಕಲಂ: 174 ಸಿಆರ್ಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
No comments:
Post a Comment