ಅಪಘಾತ
ಪ್ರಕರಣ
- ಕುಂದಾಪುರ: ದಿನಾಂಕ 27/08/2015 ರಂದು ಬೆಳಿಗ್ಗೆ 10:45 ಗಂಟೆಗೆ ಕುಂದಾಪುರ ತಾಲೂಕು ಕುಂಭಾಶಿ ಸ್ವಾಗತ ಗೋಪುರದ ಎದುರುಗಡೆ ಪಶ್ಚಿಮ ಬದಿಯ ರಾಷ್ಟ್ರೀಯ ಹೆದ್ದಾರಿ 66 ರಸ್ತೆಯಲ್ಲಿ ಆಪಾದಿತ ವೀರಭದ್ರ ವಿ ಮಾಟೊಳ್ಳಿ ಎಂಬವರು KA 15 F- 3080 ನೇ KSRTC ಬಸ್ ನ್ನು ತೆಕ್ಕಟ್ಟೆ ಕಡೆಯಿಂದ ಕುಂದಾಪುರ ಕಡೆಗೆ ಅತೀವೇಗ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಕುಂಭಾಶಿ ಸ್ವಾಗತ ಗೋಪುರದ ಎದುರುಗಡೆಯ ಡಿವೈಡರ್ ಕಡೆಯಿಂದ ಪಿರ್ಯಾದಿ ರಾಘವೇಂದ್ರ 35 ವರ್ಷ ತಂದೆ ಮಹಾಬಲ ಪೂಜಾರಿ ವಾಸ: ಕೆಳಬೆಟ್ಟು ಹಲ್ತೂರು ಒಳ್ತೂರು ಗ್ರಾಮ &ಅಂಚೆ ಕುಂದಾಪುರ ತಾಲೂಕು ರವರು ಅದೇ ದಿಕ್ಕಿನಲ್ಲಿ ಚಲಾಯಿಸಿಕೊಂಡಿದ್ದ KA20 C 9735 ನೇ ಮಹೀಂದ್ರ ಪಿಕಪ್ ಗೂಡ್ಸ್ ವಾಹನಕ್ಕೆ ಹಿಂದಿನಿಂದ ಡಿಕ್ಕಿಹೊಡೆದ ಪರಿಣಾಮ ವಾಹನಗಳು ಜಖಂಗೊಂಡಿದ್ದು ಮೆಸ್ಕಾಂ ಸಂಸ್ಥೆಗೆ ಸೇರಿದ ವಿದ್ಯುತ್ ಕಂಬ ತುಂಡಾಗಿರುತ್ತದೆ, ಈ ಬಗ್ಗೆ ಕುಂದಾಪುರ ಸಂಚಾರ ಪೋಲಿಸ್ ಠಾಣೆ ಅಪರಾಧ ಕ್ರಮಾಂಕ 103/ 15 ಕಲಂ 279 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
ಇತರೇ ಪ್ರಕರಣ
- ಬ್ರಹ್ಮಾವರ: ದಿನಾಂಕ: 27/08/2015 ರಂದು ಬೆಳಗಿನ ಜಾವ 06:15 ಗಂಟೆಗೆ ಉಡುಪಿ ತಾಲೂಕು, ಕಚ್ಚೂರು ಗ್ರಾಮದ , ಬಾರ್ಕೂರಿನ ಸ್ನೇಹ ಬಾರ್ ಎದುರು ರಸ್ತೆಯಲ್ಲಿ ಆರೋಪಿಗಳು ಕೋಕ್ಕರ್ಣೆ ಕಡೆಯಿಂದ ಕೇರಳ ರಾಜ್ಯಕ್ಕೆ ಮಾಂಸಕ್ಕಾಗಿ 16 ಕೋಣಗಳನ್ನು ಕೆಎ 21 ಎ 9290 ನೇ 909 ಗೂಡ್ಸ್ ವಾಹನದಲ್ಲಿ ಕೋಣಗಳಿಗೆ ಹಿಂಸೆ ಆಗುವ ರೀತಿಯಲ್ಲಿ ತುಂಬಿಸಿಕೊಂಡು ಸಾಗಿಸುತ್ತಿರುವಾಗ ಅನಂತಪದ್ಮನಾಭ ಕೆ.ವಿ. ಪೊಲೀಸ್ ಉಪ ನಿರೀಕ್ಷಕರು ಬ್ರಹ್ಮಾವರ ಪೊಲೀಸ್ ಠಾಣೆರವರು ಠಾಣಾಸಿಬ್ಬಂದಿಯವರೊಂದಿಗೆ ಖಚಿತ ಮಾಹಿತಿಯಂತೆ ರೂ 2,10,000/- ಮೌಲ್ಯದ 16 ಕೋಣಗಳನ್ನು , ರೂ 8,00,000/- ಮೌಲ್ಯದ ಗೂಡ್ಸ್ ವಾಹನವನ್ನು ಸ್ವಾಧೀನ ಪಡಿಸಿಕೊಂಡು ಆರೋಪಿಗಳಾದ 1) ಜೈನುಲ್ಲಾ ಅಬೀದ್, (27), ತಂದೆ: ದಿ|| ಇಬ್ರಾಹಿಂ, ವಾಸ: ಬೇಬಿಂಜ, ಚಂಗಳ ತಾಲೂಕು, ಕಾಸರಗೋಡು ಜಿಲ್ಲೆ, ಕೇರಳ ರಾಜ್ಯ,2) ಅಬ್ದುಲ್ ಎ. (41), ತಂದೆ: ದಿ. ಅಬುಬಕ್ಕರ್, ವಾಸ: ಮೈನ್ಹೌಸ್, ಅಲಂಬಾಡಿ, ಕಾರಗೋಡು, ಕೇರಳ ಇವರನ್ನು ವಶಕ್ಕೆ ತೆಗೆದುಕೊಂಡಿದ್ದಾಗಿದೆ, ಈ ಬಗ್ಗೆ ಬ್ರಹ್ಮಾವರ ಪೋಲಿಸ್ ಠಾಣೆ ಅಪರಾಧ ಕ್ರಮಾಂಕ 169/15 ಕಲಂ: KARNTAKA PREVENTION OF COW SLANGHTER & CATTLE PREVENTION ACT-1964 (U/s-8,9,11); PREVENTION OF CRUELTY TO ANIMALS ACT, 1960 (U/s-11(1 ) (D)); INDIAN MOTOR VEHICLES ACT, 1988 (U/s-192); IPC 1860 (U/s-379; CODE OF CRIMINAL PROCEDURE, 1973 (U/s-41(D) &-102);) ಯಂತೆ ಪ್ರಕರಣ ದಾಖಲಾಗಿರುತ್ತದೆ.
No comments:
Post a Comment