ಅಪಘಾತ ಪ್ರಕರಣ
- ಕಾರ್ಕಳ: ದಿನಾಂಕ 01/08/2015 ರಂದು ಸಂಜೆ 16:30 ಗಂಟೆಗೆ ಕಾರ್ಕಳ ತಾಲೂಕು ಕುಕ್ಕುಂದೂರು ಗ್ರಾಮದ ಜೋಡುರಸ್ತೆಯ ಬಳಿ ಇರುವ ಬಿ.ಟಿ.ಕೆ ಪೆಟ್ರೋಲ್ ಪಂಪ್ ಎದುರು ಪಿರ್ಯಾದಿದಾರರಾದ ಬೋಜ ಪರವ (50) ತಂದೆ: ದಿವಂಗತ ಕುಡ್ವ ಪರವ ವಾಸ: ನಿಜಮಂಡೆ ಮನೆ, ಕುಕ್ಕುಂದೂರು ಅಂಚೆ ಮತ್ತು ಗ್ರಾಮ, ಕಾರ್ಕಳ ತಾಲೂಕು ಇವರು ನಡೆದುಕೊಂಡು ಮಹಾಲಕ್ಷ್ಮೀ ಹೊಟೇಲ್ ಕಡೆಗೆ ಹೋಗುತ್ತಿದ್ದಾಗ ಅವರ ಹಿಂದಿನಿಂದ ಬಂದ ಓರ್ವ ಅಪರಿಚಿತ ಮೋಟಾರ್ ಸೈಕಲ್ ಸವಾರನು ತನ್ನ ಮೋಟಾರ್ ಸೈಕಲ್ ನ್ನು ಅತೀವೇಗ ಹಾಗೂ ಆಜಾಗರೂಕತೆಯಿಂದ ಕಾರ್ಕಳ ಕಡೆಯಿಂದ ಜೋಡುರಸ್ತೆ ಕಡೆಗೆ ಚಲಾಯಿಸಿ ಬೋಜ ಪರವ ರವರಿಗೆ ಡಿಕ್ಕಿಹೊಡೆದ ಪರಿಣಾಮ ಅವರ ಬಲ ಕಾಲಿನ ಮೊಣಗಂಟಿನ ಕೆಳಗೆ ಮೂಳೆ ಮುರಿತದ ಗಾಯವಾಗಿದ್ದು ಚಿಕಿತ್ಸೆಯ ಬಗ್ಗೆ ಕಾರ್ಕಳದ ಸಾರ್ವಜನಿಕ ಸರಕಾರಿ ಆಸ್ಪತ್ರೆಗೆ ದಾಖಲಾಗಿರುತ್ತಾರೆ. ಬೋಜ ಪರವ ರವರಿಗೆ ಡಿಕ್ಕಿ ಹೊಡೆದ ಮೋಟಾರ್ ಸೈಕಲ್ ಸವಾರನು ತನ್ನ ಮೋಟಾರ್ ಸೈಕಲ್ ನ್ನು ನಿಲ್ಲಿಸದೇ ಪರಾರಿಯಾಗಿರುತ್ತಾನೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 108/2015 ಕಲಂ: 279, 338 ಐಪಿಸಿ ಮತ್ತು 134(ಎ) (ಬಿ) ಮೋಟಾರ್ ವಾಹನ ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.
No comments:
Post a Comment