ಅಸ್ವಾಭಾವಿಕ ಮರಣ ಪ್ರಕರಣ
- ಬ್ರಹ್ಮಾವರ :ದಿನಾಂಕ: 02/07/2015 ರಂದು ಬೆಳಿಗ್ಗೆ 09:00 ಗಂಟೆಯ ಸಮಯಕ್ಕೆ ಉಡುಪಿ ತಾಲೂಕು 34ನೇ ಕುದಿ ಗ್ರಾಮ ನಿಂಜೂರು ಬೆಟ್ಟು ಎಂಬಲ್ಲಿ ಪಿರ್ಯಾದಿದಾರರಾದ ಸಂಜೀವಿ, (43),ಗಂಡ: ಪುಟ್ಟಯ್ಯ ನಾಯ್ಕ, ವಾಸ: ನಿಂಜೂರುಬೆಟ್ಟು ಬೈದಬೆಟ್ಟು, 34 ನೇ ಕುದಿ ಗ್ರಾಮ,ಉಡುಪಿ ತಾಲೂಕು ಮತ್ತು ಅವರ ಗಂಡ ಪುಟ್ಟಯ್ಯ ನಾಯ್ಕ (51) ಎಂಬವರು ಅವರ ಗದ್ದೆಗೆ ಗೊಬ್ಬರವನ್ನು ಚೆಲ್ಲುತ್ತಿರುವಾಗ ಪುಟ್ಟಯ್ಯ ನಾಯ್ಕ ರವರು ಅಸ್ವಸ್ಥರಾಗಿ ಗದ್ದೆಯಲ್ಲಿ ಕುಸಿದು ಬಿದ್ದು ಉಸಿರಾಟ ನಿಂತು ಮೃತಪಟ್ಟಿರುತ್ತಾರೆ.ಈ ಬಗ್ಗೆ ಬ್ರಹ್ಮಾವರ ಠಾಣೆ ಯು.ಡಿ.ಆರ್ ಕ್ರಮಾಂಕ 36/2015 ಕಲಂ: 174 ಸಿ.ಆರ್.ಪಿ.ಸಿ ರಂತೆ ಪ್ರಕರಣ ದಾಖಲಾಗಿರುತ್ತದೆ.
No comments:
Post a Comment