ವಂಚನೆ ಪ್ರಕರಣ
- ಕುಂದಾಪುರ: ಪಿರ್ಯಾದುದಾರರಾದ ಕುಂದಾಪುರ ತಹಶೀಲ್ದಾರರು ಹಾಗೂ ತಾಲೂಕು ದಂಡಾಧಿಕಾರಿಯವರಾದ ಶ್ರೀಮತಿ ಗಾಯತ್ರಿ ನಾಯಕ್ ರವರು ಕುಂದಾಪುರ ಕಸಬಾ ಗ್ರಾಮದ ಕೋಡಿ ವಾಸಿ ರುಕ್ಸಾನಾ ಬಿನ್ ದಿ. ಆಸೀಯಾ ಯಾ ಆ್ಯಶಾಬಿ ಎಂಬುವವರಿಗೆ ಸಂಬಂಧಿಸಿದ ಕುಂದಾಪುರ ಕಸಬಾ ಗ್ರಾಮದ ಸರ್ವೆ ನಂಬ್ರ: 267/14 ರಲ್ಲಿ 10 ಎಕ್ರೆ ಜಾಗವನ್ನು ಭೂಪರಿವರ್ತನೆ ಆದೇಶ ಸಂಖ್ಯೆ ಎಎಲ್ ಎನ್:ಸಿಆರ್: 91/2014-15 ಮತ್ತು ಎಎಲ್ ಎನ್:ಎಸ್ಆರ್: 365/2014-15 ದಿನಾಂಕ: 05.12.2014 ರ ಕಛೇರಿಯ ದಾಖಲೆಗಳನ್ನು ಪರಿಶೀಲನೆ ಮಾಡಿದಾಗ ಸಾರ್ವಜನಿಕ ಅಧಿಕಾರಿಯಾದ ಪಿರ್ಯಾದುದಾರರ ಪೊರ್ಜರಿ ಸಹಿಯನ್ನು ಯಾರೋ ಅಪರಿಚಿತರು ಮಾಡಿ ನಕಲಿ ಹಿಂಬರಹವನ್ನು ಸರ್ಕಾರಿ ದಾಖಲೆಯನ್ನು ಸೃಷ್ಟಿಸಿರುತ್ತಾರೆ ಎಂಬುದಾಗಿ ಕುಂದಾಪುರ ತಹಶೀಲ್ದಾರರು ಹಾಗೂ ತಾಲೂಕು ದಂಡಾಧಿಕಾರಿಯವರಾದ ಶ್ರೀಮತಿ ಗಾಯತ್ರಿ ನಾಯಕ್ ರವರು ನೀಡಿದ ದೂರಿನಂತೆ ಕುಂದಾಪುರ ಪೋಲಿಸ್ ಠಾಣಾ ಅಪರಾಧ ಕ್ರಮಾಂಕ 248/2015, ಕಲಂ: 465, 468, 470, 471, 484 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
No comments:
Post a Comment