ಕಳವು ಪ್ರಕರಣ
- ಕುಂದಾಪುರ : ದಿನಾಂಕ 23.06.2015 ರಂದು ಪಿರ್ಯಾದಿ ಆನಂದ ಶೆಟ್ಟಿ (58) ತಂದೆ: ದಿ. ಕೃಷ್ಣಪ್ಪ ಶೆಟ್ಟಿ ವಾಸ: ದಬ್ಬೆಕಟ್ಟೆ ಮೇಲ್ಮನೆ, ಮೂಡ್ಲಕಟ್ಟೆ, ಕಂದಾವರ ಗ್ರಾಮ, ಕುಂದಾಪುರ ತಾಲೂಕು ಇವರ ಮೂರುವರೆ ವರ್ಷ ಪ್ರಾಯದ ಕಂದು ಬಣ್ಣದ ದನವನ್ನು ಕುಂದಾಪುರ ತಾಲೂಕು ಕಂದಾವರ ಗ್ರಾಮದ ಮೂಡ್ಲಕಟ್ಟೆ ದಬ್ಬೆಕಟ್ಟೆ ಮೇಲ್ಮನೆ ಎಂಬಲ್ಲಿ ಆನಂದ ಶೆಟ್ಟಿ ರವರ ಮನೆಯ ಬಳಿ ಗದ್ದೆಯಲ್ಲಿ ಮೇಯಲು ಕಟ್ಟಿದ್ದು, ಬೆಳಿಗ್ಗೆ 11:30 ಗಂಟೆಗೆ ಇಬ್ಬರು ಆಪಾದಿತರು ಸೇರಿಕೊಂಡು ಗದ್ದೆಯಲ್ಲಿ ಮೇಯುತ್ತಿದ್ದ ದನವನ್ನು ಕಳವು ಮಾಡುವ ಉದ್ದೇಶದಿಂದ ಕಟ್ಟಿದಲ್ಲಿಂದ ಹಗ್ಗ ಸಮೇತ ಬಿಚ್ಚಿ ಸ್ವಲ್ಪ ದೂರ ತೆಗೆದುಕೊಂಡು ಹೋಗಿದ್ದು, ಇದನ್ನು ನೋಡಿದ ಆನಂದ ಶೆಟ್ಟಿ ಹಾಗೂ ಅವರ ಸಂಬಂಧಿಕರಾದ ಚಂದ್ರ ಮತ್ತು ಬಾಲ ರವರು ಓಡಿ ಬರುತ್ತಿರುವುದನ್ನು ನೋಡಿ ಆಪಾದಿತರು ದನವನ್ನು ಅಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾರೆ, ಸದ್ರಿ ದನದ ಮೌಲ್ಯ ರೂ. 2,000/- ಆಗಬಹುದು. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 245/2015, ಕಲಂ: 379 ಐಪಿಸಿರಂತೆ ಪ್ರಕರಣ ದಾಖಲಾಗಿರುತ್ತದೆ.
ಅಪಘಾತ ಪ್ರಕರಣ
- ಪಡುಬಿದ್ರಿ: ದಿನಾಂಕ 23/06/2015 ರಂದು ಉಡುಪಿ ತಾಲೂಕು ನಡ್ಸಾಲು ಗ್ರಾಮದ ಪಡುಬಿದ್ರಿ ಕನ್ನಂಗಾರ್ ಎಂಬಲ್ಲಿ ರಾಹೆ 66 ರಲ್ಲಿ ಕೆಎ-19-ಸಿ-9798 ಆಂಬುಲೆನ್ಸ್ ಚಾಲಕ ವಾಸುದೇವ ಎಂಬವರು ಅವರ ಬಾಬ್ತು ಅಂಬುಲೆನ್ಸ್ ಅನ್ನು ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ವಾಹನ ಹತೋಟಿ ತಪ್ಪಿ ರಸ್ತೆಯ ತೀರಾ ಪೂರ್ವ ಬದಿಗೆ ಬಂದು ಹೊಂಡಕ್ಕೆ ಹೋಗಿ ಎದುರಿನಲ್ಲಿದ್ದ ಒಂದು ಮರಕ್ಕೆ ಡಿಕ್ಕಿ ಹೊಡೆದು ನಂತರ ತಿರುಗಿ ಬಲ ಮಗ್ಗುಲಾಗಿ ಬಿದ್ದಿದ್ದು ಪರಿಣಾಮ ವಾಸುದೇವ ರವರು ವಾಹನದಿಂದ ಹೊರಗೆ ಎಸೆಯಲ್ಪಟ್ಟು ತಲೆಗೆ ಗಾಯವಾಗಿದ್ದು ಚಿಕಿತ್ಸೆ ಬಗ್ಗೆ ಮಂಗಳೂರು ಎ.ಜೆ ಆಸ್ವತ್ರೆಗೆ ಕರೆದುಕೊಂಡು ಹೋಗಿದ್ದು ಅಲ್ಲಿ ವೈದ್ಯಾಧಿಕಾರಿಯವರು ಪರೀಕ್ಷಿಸಿ ಒಳರೋಗಿಯಾಗಿ ದಾಖಲಿಸಿರುತ್ತಾರೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 87/15 ಕಲಂ. 279 ಐಪಿಸಿ ರಂತೆ ಪ್ರಕರಣ ದಾಖಲಾಗಿರುತ್ತದೆ.
No comments:
Post a Comment