ಕಳವು ಪ್ರಕರಣ
- ಕುಂದಾಪುರ: ಪಿರ್ಯಾದಿದಾರರಾದ ವಿ. ಲಕ್ಷ್ಮಣ (40) ತಂದೆ: ಎ. ನಾರಾಯಣ ವಾಸ: ನಾನಾ ಸಾಹೇಬ್ ರಸ್ತೆ, ಪ್ರಸಾದ ಫಾರ್ಮ್ಸ್ ಬಳಿ, ವಡೇರಹೋಬಳಿ ಗ್ರಾಮ, ಕುಂದಾಪುರ ತಾಲೂಕು ರವರು ಕೆಎ 20 ಸಿ 4293 ನೇ ಟಿಪ್ಪರ್ ಲಾರಿಯ ನೊಂದಣಿ ಮಾಲೀಕರಾಗಿದ್ದು, ಸುಮಾರು 2 ವರ್ಷಗಳಿಂದ ಸದ್ರಿ ಟಿಪ್ಪರ್ ಲಾರಿಯಲ್ಲಿ ಪ್ರವೀಣ ಎಂಬವರು ಚಾಲಕರಾಗಿ ಕೆಲಸ ಮಾಡುತ್ತಿದ್ದು, ದಿನಾಂಕ 16.06.2015 ರಂದು ಎಂದಿನಂತೆ ಲಾರಿ ಚಾಲಕ ಪ್ರವೀಣನು 18:30 ಗಂಟೆಗೆ ಕುಂದಾಪುರ ತಾಲೂಕು ಕೋಣಿ ಗ್ರಾಮದ ಕೋಣಿ ಕಾರ್ತಿಕೇಯ ಪೆಟ್ರೋಲ್ ಬಂಕ್ ಎದುರು ಲಾರಿಯನ್ನು ಡೋರ್ ಲಾಕ್ ಮಾಡಿ ನಿಲ್ಲಿಸಿದ್ದು, ದಿನಾಂಕ 17.06.2015 ರಂದು ಬೆಳಿಗ್ಗೆ 07:45 ಗಂಟೆಗೆ ಸ್ಥಳಕ್ಕೆ ಹೋಗಿ ನೋಡಲಾಗಿ ಲಾರಿಯು ನಿಲ್ಲಿಸಿದ ಸ್ಥಳದಲ್ಲಿ ಇಲ್ಲದೆ ಇದ್ದು, ಸದ್ರಿ ಟಿಪ್ಪರ್ ಲಾರಿಯನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು, ಕಳವಾದ ಲಾರಿಯ ಮೌಲ್ಯ ರೂಪಾಯಿ 10 ಲಕ್ಷ ಆಗಿರುತ್ತದೆ ಎಂಬುದಾಗಿ ವಿ. ಲಕ್ಷ್ಮಣ ರವರು ನೀಡಿದ ದೂರಿನಂತೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 240/2015 ಕಲಂ 379 ಐ.ಪಿ.ಸಿಯಂತೆ ಪ್ರಕರಣ ದಾಖಲಿಸಲಾಗಿದೆ.
No comments:
Post a Comment