ಮಟ್ಕಾ ಜುಗಾರಿ ಪ್ರಕರಣ
- ಬ್ರಹ್ಮಾವರ: ದಿನಾಂಕ 25/04/2015 ರಂದು ಬ್ರಹ್ಮಾವರ ಪೊಲೀಸ್ ವೃತ್ತ ನಿರೀಕ್ಷಕರಾದ ಅರುಣ್ ಬಿ.ನಾಯಕ್ ರವರು ಸಿಬ್ಬಂದಿಯವರೊಂದಿಗೆ ಖಚಿತ ವರ್ತಮಾನದ ಮೇರೆಗೆ ಉಡುಪಿ ತಾಲೂಕು ಚೇರ್ಕಾಡಿ ಗ್ರಾಮದ ಪೇತ್ರಿ ಮೀನು ಮಾರ್ಕೆಟ್ ಸಮೀಪ ಧಾಳಿ ನಡೆಸಿ ಮಟ್ಕಾ ಜುಗಾರಿ ಆಟದ ಬಗ್ಗೆ ಹಣ ಸಂಗ್ರಹಿಸುತ್ತಿರುವ ರಾಕಿ ಡಿ ಸೋಜ ಎಂಬಾತನನ್ನು ವಶಕ್ಕೆ ಪಡೆದುಕೊಂಡು ಮಟ್ಕಾ ಜುಗಾರಿ ಆಟಕ್ಕೆ ಬಳಸಿದ ಮಟ್ಕಾ ಚೀಟಿ 1, ಬಾಲ್ ಪೆನ್ 1 ಮತ್ತು ನಗದು ರೂ. 530ನ್ನು ವಶಪಡಿಸಿಕೊಂಡಿದ್ದು ಮತ್ತು ಆರೋಪಿತನು ತಾನು ಮಟ್ಕಾ ಜೂಜಾಟಕ್ಕೆ ನಡೆಸಿದ ಹಣವನ್ನು ಚಂದ್ರ ಕರ್ಜೆ ಎಂಬುವವನಿಗೆ ನೀಡುವುದಾಗಿ ತಿಳಿಸಿರುತ್ತಾನೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ವೃತ್ತ ನಿರೀಕ್ಷಕರಾದ ಅರುಣ್ ಬಿ.ನಾಯಕ್ ರವರು ನೀಡಿದ ದೂರಿನಂತೆ ಬ್ರಹ್ಮಾವರ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ : 65/15 ಕಲಂ. 78(1)(3) ಕೆ.ಪಿ ಕಾಯ್ದೆಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
- ಶಿರ್ವಾ : ದಿನಾಂಕ:25-04-2015 ರಂದು ನಿತಿನ್ ಪೂಜಾರಿ(23) ವಾಸ:ಗಾಣದ ಬೆಟ್ಟು ಮನೆ ಕುದ್ರಿ ಪದವು ಪೊಸ್ಟ್ ಕಲ್ಲು ಮೂಣ್ಕೂರು ಗ್ರಾಮ ಇವರು ತನ್ನ ಬಾಬ್ತು ಕೆಎ 19 ಇಎನ್ -7245 ಮೋಟಾರ್ ಸೈಕಲ್ ನಲ್ಲಿ ಸಹ ಸವಾರನಾಗಿ ತನ್ನ ಸ್ನೇಹಿತ ಗಣೇಶ್ ಎಂಬಾತನನ್ನು ಕುಳ್ಳಿರಿಸಿಕೊಂಡು ಕಟಪಾಡಿ ಕಡೆಯಿಂದ ಶಿರ್ವಾ ಕಡೆಗೆ ಬರುತ್ತಿರುವಾಗ ಮದ್ಯಾಹ್ನ 13-30 ಗಂಟೆ ಸಮಯಕ್ಕೆ ಶಿರ್ವಾ ನ್ಯಾರ್ಮ ಎಂಬಲ್ಲಿ ಎದುರಿನಿಂದ ಅಂದರೆ ಶಿರ್ವಾ ಕಡೆಯಿಂದ ಒಂದು ಟಿಪ್ಪರ್ ಲಾರಿ ಬರುತ್ತಿದ್ದು ಸದ್ರಿ ಟಿಪ್ಪರ್ ನ ಹಿಂದೆ ಕೆಎ 20 ಇಡಿ-0562ನೇ ಮೋಟಾರ್ ಸೈಕಲ್ ನಲ್ಲಿ ಆರೋಪಿತ ಶಿವಕುಮಾರ್ ಎಂಬಾತನು ಸಹಸವಾರ ರಮೇಶ್ ಎಂಬವನನ್ನು ಕುಳ್ಳಿರಿಸಿಕೊಂಡು ಮೋಟಾರ್ ಸೈಕಲ್ ಅನ್ನು ಅತೀ ವೇಗ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಟಿಪ್ಪರ್ ಲಾರಿಯನ್ನು ಓವರ್ ಟೇಕ್ ಮಾಡಿಕೊಂಡು ಲಾರಿಯ ಬಲಬದಿಯಲ್ಲಿ ಬಂದು ನಿತಿನ್ರವರ ಮೋಟರ್ ಸೈಕಲ್ ಗೆ ಡಿಕ್ಕಿ ಹೊಡೆದ ಪರಿಣಾಮ ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದು ಎಡ ಕೈಗೆ ತರುಚಿದ ಗಾಯವಾಗಿದ್ದು, ಅಲ್ಲದೆ ಅಪಘಾತ ನಡೆಸಿದ ಮೋಟಾರ್ ಸೈಕಲ್ ನಲ್ಲಿ ಸಹ ಸವಾರನಾಗಿದ್ದ ರಮೇಶನಿಗೆ ಎಡ ಕಾಲಿನ ಪಾದದ ಬಳಿ ರಕ್ತ ಗಾಯ ವಾಗಿರುತ್ತದೆ ಎಂಬುದಾಗಿ ನೀಡಿದ ದೂರಿನಂತೆ ಶಿರ್ವಾ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ: 26/2015 ಕಲಂ. 279, 337 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
No comments:
Post a Comment