ಜುಗಾರಿ ಪ್ರಕರಣ
- ಕೋಟ: ದಿನಾಂಕ 11/04/2015 ರಂದು ಪಿರ್ಯಾದಿ ಕಮಲಾಕರ್ ಆರ್ ನಾಯ್ಕ್ ಪಿ.ಎಸ್.ಐ ಕೋಟ ಠಾಣೆ ಇವರು ಸಿಬ್ಬಂದಿಗಳೊಂದಿಗೆ ಇಲಾಖಾ ಜೀಪು ನಂಬ್ರ ಕೆ.ಎ:20 ಜಿ:208 ನೇದರಲ್ಲಿ ರೌಂಡ್ಸ್ ಕರ್ತವ್ಯದಲ್ಲಿವಾಗ ದೊರೆತ ಖಚಿತ ವರ್ತಮಾನದಂತೆ ಉಡುಪಿ ತಾಲೂಕು ಐರೋಡಿ ಗ್ರಾಮದ ಸುಷ್ಮಾ ವೈನ್ ಶಾಪ್ ಬಳಿ ಇರುವ ಮೀನು ಮಾರ್ಕೆಟ್ ಬಳಿ ಸಾರ್ವಜನಿಕ ಸ್ಥಳದಲ್ಲಿ ಹಣವನ್ನು ಪಣವನ್ನಾಗಿರಿಸಿ ಮಟ್ಕಾ-ಜುಗಾರಿ ಆಟ ನಡೆಸುತ್ತಿದ್ದುದನ್ನು ಖಚಿತ ಪಡಿಸಿಕೊಂಡು 18:30 ಗಂಟೆಗೆ ದಾಳಿ ನಡೆಸಿ ಮಟ್ಕಾ ಜುಗಾರಿ ಆಟ ನಡೆಸುತ್ತಿದ್ದ ಆರೋಪಿ , ಶಂಭು ಪೂಜಾರಿ ಪ್ರಾಯ 52 ವರ್ಷ ಎಂಬವರನ್ನು ದಸ್ತಗಿರಿ ಮಾಡಿದ್ದು, ಸದ್ರಿ ಆರೋಪಿಯಿಂದ ಮಟ್ಕಾ-ಜುಗಾರಿ ಆಟಕ್ಕೆ ಬಳುಸುತ್ತಿದ್ದ ಮಟ್ಕಾ ಚೀಟಿ-1, ಬಾಲ್ ಪೆನ್ನು-1, ನಗದು ರೂ-195/- ನ್ನು ಸ್ವಾಧೀನಪಡಿಸಿಕೊಂಡದ್ದಾಗಿದೆ ತಾನು ಮಟ್ಕಾ-ಜುಗಾರಿಯಿಂದ ಸಂಗ್ರಹಿಸಿದ ಹಣವನ್ನು ಮಟ್ಕಾ ಬಿಡ್ಡರ್ ತೆಕ್ಕಟ್ಟೆ ಗ್ರಾಮದ ಚಂದ್ರ ಶೇಖರ ಶೆಟ್ಟಿ ಎಂಬವರಿಗೆ ಕೊಡುತ್ತಿರುವುದಾಗಿದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಅಪರಾಧ ಪ್ರಕರಣ 68/15 ಕಲಂ: 78 (1),(3) KP ACT ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
- ಶಂಕರನಾರಾಯಣ :ದಿನಾಂಕ 11-04-2015 ರಂದು ಕುಂದಾಪುರ ತಾಲೂಕು ಕುಂದಾಪುರ ಹೋಬಳಿಯ ಬೆಳ್ವೆ ಗ್ರಾಮದ ಗುಮ್ಮೊಲ ಹಳ್ನೀರು ಎಂಬಲ್ಲಿರುವ ಸರ್ಕಾರಿ ಹಾಡಿಯಲ್ಲಿ ಅಂದರ್ ಬಾಹರ್ ಇಸ್ಪಿಟ್ ಜುಗಾರಿ ಆಟ ವನ್ನು ಆರೋಪಿತ ರಾದ 1.ಶೇಖರ ಪೂಜಾರಿ 2. ಬಾಬಣ್ಣ ನಾಯ್ಕ 3.ಗಣೇಶ ನಾಯ್ಕ 4.ರಾಜು ನಾಯ್ಕ 5.ಗೋಪಾಲ ನಾಯ್ಕ 6.ಚಂದ್ರ 7.ಅರ್ಜುನ 8.ಸುರೇಶ 9.ಕರುಣ ಶೆಟ್ಟಿ 10.ಶಂಕರ ಇವರು ಆಡುತ್ತಿದ್ದು ಇವರ ಪೈಕಿ 1 ಶೇಖರ ಪೂಜಾರಿ, 2 ಬಾಬಣ್ಣ ನಾಯ್ಕ 3 ಗಣೇಶ ನಾಯ್ಕ 4 ರಾಜು ನಾಯ್ಕ ಇವರನ್ನು ದಸ್ತಗಿರಿಮಾಡಿದ್ದು ಉಳಿದ ಆರೋಪಿತರು ಓಡಿ ಹೋಗಿರುತ್ತಾರೆ. ಆರೋಪಿತರು ಆಟಕ್ಕೆ ಉಪಯೋಗಿಸಿದ ಇಸ್ಪೀಟ್ ಎಲೆ 52 ನಗದು 4,300/- ರೂಪಾಯಿ ಅನ್ನು ಸ್ವಾಧೀನ ಪಡಿಸಿದ್ದು, ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಅಪರಾಧ ಪ್ರಕರಣ 62/15 ಕಲಂ: 87 KP ACT ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಅಸ್ವಾಭಾವಿಕ ಮರಣ ಪ್ರಕರಣ
- ಶಂಕರನಾರಾಯಣ: ದಿನಾಂಕ 12/04/2015 ರಂದು 00:15 ಗಂಟೆಗೆ ಕುಂದಾಪುರ ತಾಲೂಕು ಶಂಕರನಾರಾಯಣ ಗ್ರಾಮದ ಹಡುವಲುಬೈಲು ಎಂಬಲ್ಲಿ ಹೆರಿಯಣ್ಣ ಹೆಗ್ಡೆ (43 ವರ್ಷ) ಎಂಬವರು ಮಾನಸಿಕ ಖಾಯಿಲೆಯಿಂದ ಅನಾರೋಗ್ಯದಿಂದ ಬಳಲುತ್ತಿದ್ದವರು ಜೀವನದಲ್ಲಿ ಜಿಗುಪ್ಸೆ ಹೊಂದಿ ತನ್ನ ಮನೆಯ ಪಕ್ಕಾಸಿಗೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ. ಈ ಬಗ್ಗೆ ಶಂಕರನಾರಾಯಣ ಠಾಣಾ ಅಸ್ವಾಭಾವಿಕ ಮರಣ ಕ್ರಮಾಂಕ 03/2015 ಕಲಂ:174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
No comments:
Post a Comment