Saturday, April 11, 2015

Daily Crimes Reported as On 11/04/2015 at 19:30 Hrs


ಕಳವು ಪ್ರಕರಣ
  • ಶಂಕರನಾರಾಯಣ:ಪಿರ್ಯಾದಿದಾರರಾದ ಶ್ರೀಮತಿ ಶೈಲಜಾ (31) ಗಂಡ:ಸುಧಾಕರ ಶೆಟ್ಟಿ, ವಾಸ:ಹೊಸಬಾಳು ನಡುಮನೆ, ಆಜ್ರಿ ಗ್ರಾಮ ಕುಂದಾಪುರ ತಾಲೂಕುರವರು ದಿನಾಂಕ:09/04/15 ರಂದು ಮಧ್ಯಾಹ್ನ 03:45 ಘಂಟೆಗೆ ಥಾಣಾದಿಂದ ಮತ್ಸಗಂಧ  ರೈಲಿನಲ್ಲಿ ಮಕ್ಕಳೊಂದಿಗೆ S-5  ಸೀಟ್‌ ನಂಬ್ರ-1 ರಲ್ಲಿ  ಪ್ರಯಾಣ ಮಾಡಿದ್ದು, ನಂತರ ದಿನಾಂಕ:10/04/15 ರಂದು ಬೆಳಿಗ್ಗೆ 06:30 ಗಂಟೆಗೆ ಕುಂದಾಪುರ ಮೂಡ್ಲಕಟ್ಟೆ ರೈಲ್ವೆ ಸ್ಟೇಶನ್‌ಗೆ ರೈಲಿನಿಂದ ಬಂದು ಇಳಿದು, ನಂತರ ಅಲ್ಲಿಂದ ಮನೆಗೆ ಹೋಗಿ ರಾತ್ರಿ ಸುಮಾರು 08:00 ಘಂಟೆಗೆ ತನ್ನ ಮನೆಯಾದ ಕುಂದಾಪುರ ತಾಲೂಕಿನ ಆಜ್ರಿ ಗ್ರಾಮದ ಹೊಸಬಾಳು ನಡುಮನೆ ಎಂಬಲ್ಲಿ  ಹಣ, ಚಿನ್ನಾಭರಣಗಳು ಇರುವ ಬ್ಯಾಗಿನಿಂದ ಬಟ್ಟೆ ಹಾಗೂ ಚಿನ್ನದ ಆಭರಣ ತೆಗೆಯಲು ನೋಡಿದಾಗ, ಬ್ಯಾಗಿನ  ಜೀಪ್‌ನಿಂದ ಸ್ವಲ್ಪ ಮೇಲ್ಗಡೆ ಯಾವುದೋ ಹರಿತವಾದ ವಸ್ತುವಿನಿಂದ ಬ್ಯಾಗ್‌ ಕತ್ತರಿಸಿ, ಬ್ಯಾಗಿನ ಒಳಗಡೆ ನಗದು ಹಣ ಇರುವ  ಪರ್ಸ್-2 ಹಾಗೂ ಚಿನ್ನದ ಆಭರಣಗಳಿರುವ ಬಾಕ್ಸನಲ್ಲಿ ಇದ್ದ ಕರಿಮಣಿ ಸರ -1, ಬಳೆ-4, ನೆಕ್ಲೇಸ್-1 , ಹವಳ  ಸರ-1 , ಮಕ್ಕಳ ಚಿನ್ನದ ಚೈನ್-1, ಕಿವಿಯ ಓಲೆ-3 ಜೊತೆ,  ಉಂಗುರ-3 ಹಾಗೂ ಮೂಗಿನ ನತ್ತು-1,  ಸಣ್ಣ ಚಿನ್ನದ ನಳಿನ ಪಕ್ಕ-2 ಒಟ್ಟು ಅಂದಾಜು ಸುಮಾರು 22 ಪವನ್‌ ತೂಕದ, ಒಟ್ಟು ಅಂದಾಜು ಮೌಲ್ಯ ಸುಮಾರು 3,00,000/- ರೂಪಾಯಿಗಳ ಚಿನ್ನಾಭರಣ ಹಾಗೂ ನಗದು ಹಣ 7000/-ರೂಪಾಯಿಯನ್ನು ಯಾರೋ ಕಳ್ಳರು ಕಳವು ಮಾಡಿರುತ್ತಾರೆ.ಈ ಬಗ್ಗೆ ಶ್ರೀಮತಿ ಶೈಲಜಾರವರು ನೀಡಿದ ದೂರಿನಂತೆ ಶಂಕರನಾರಾಯಣ ಠಾಣಾ ಅಪರಾಧ ಕ್ರಮಾಂಕ 61/15 ಕಲಂ:379 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

No comments: