ಅಪಘಾತ ಪ್ರಕರಣ
- ಬ್ರಹ್ಮಾವರ: ದಿನಾಂಕ 27/04/2015 ರಂದು ಬೆಳಿಗ್ಗೆ 10:30 ಗಂಟೆಗೆ ಉಡುಪಿ ತಾಲೂಕು, ಕಾಡೂರು ಗ್ರಾಮದ, ಮುಂಡಾಡಿ ಹಂಚಿನ ಕಾರ್ಖಾನೆ ಬಳಿ ಕೊಕ್ಕರ್ಣೆ ಕಡೆಯಿಂದ ಬ್ರಹ್ಮಾವರ ಕಡೆಗೆ ಆರೋಪಿ ಮಿಥುನ್ ಶೆಟ್ಟಿ ಎಂಬಾತನು ತನ್ನ ಕೆಎ-20-ಡಬ್ಲೂ-5105 ನೇ ಹಿರೋ ಹೊಂಡ ಫ್ಯಾಶನ್ ಫ್ರೋ ಮೋಟಾರ್ ಸೈಕಲ್ನ್ನು ತಿರುವು ರಸ್ತೆಯಲ್ಲಿ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸುತ್ತಾ ಮುಂದಿನಿಂದ ಹೋಗುತ್ತಿದ್ದ ಓಮಿನಿ ಕಾರನ್ನು ಓವರ್ ಟೇಕ್ ಮಾಡುವ ಭರದಲ್ಲಿ ಎದುರಿನಿಂದ ಬರುತ್ತಿದ್ದ ಕೆಎ-20-ಎಕ್ಸ್-2251 ನೇ ಟಿವಿಎಸ್ ಸ್ಟಾರ್ ಸಿಟಿ ಮೋಟಾರ್ ಸೈಕಲ್ ಗೆ ಡಿಕ್ಕಿ ಹೊಡೆದ ಪರಿಣಾಮ ಎರಡೂ ಮೊಟಾರ್ ಸೈಕಲ್ಗಳು ರಸ್ತೆಯಲ್ಲಿ ಮಗುಚಿ ಬಿದ್ದು ಆರೋಪಿ ಚಲಾಯಿಸುತ್ತಿದ್ದ ಮೋಟಾರ್ ಸೈಕಲ್ ನ ಸಹ ಸವಾರ ಅಮಿತ್ ಶೆಟ್ಟಿ ಎಂಬವನ ತಲೆಗೆ ತೀವ್ರ ತರಹದ ಗಾಯವಾಗಿರುತ್ತದೆ. ಎದುರುನಿಂದ ಬರುತ್ತಿದ್ದ ಮೋಟಾರ್ ಸೈಕಲ್ನ ಸವಾರನಾದ ರವೀಂದ್ರ ಶೆಟ್ಟಿಯ ಬಲಕಾಲಿಗೆ ತೀವ್ರ ಗಾಯವಾಗಿರುತ್ತದೆ. ಗಾಯಗೊಂಡವರನ್ನು ಮಣಿಪಾಲ ಕೆಎಮ್ಸಿ ಆಸ್ಪತ್ರೆಗೆ ಚಿಕಿತ್ಸೆ ಬಗ್ಗೆ ದಾಖಲು ಮಾಡಿರುತ್ತಾರೆ ಎಂಬುದಾಗಿ ರಮೇಶ್ ಶೆಟ್ಟಿ (33), ತಂದೆ: ಭುಜಂಗ ಶೆಟ್ಟಿ, ವಾಸ: ಸೂರಾಲ್, ಹಲುವಳ್ಳಿ ಗ್ರಾಮ, ಉಡುಪಿ ತಾಲೂಕು ರವರು ನೀಡಿದ ದೂರಿನಂತೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 66/2015 ಕಲಂ 279, 338 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.
No comments:
Post a Comment