ಕಳವು ಪ್ರಕರಣ
- ಕಾರ್ಕಳ: ಪಿರ್ಯಾದಿದಾರರಾದ ಸತೀಶ ಪ್ರಾಯ 27 ವರ್ಷ ತಂದೆ; ಸುಂದರ ಮೂಲ್ಯ ವಾಸ; ದೇವಿಪ್ರಾಸಾದ್ ಮನೆ ಈದು ಗ್ರಾಮ, ಕಾರ್ಕಳ ತಾಲೂಕು ರವರು ಕೆಎ 20 ಇಜಿ 0959 ನೇ ನಂಬ್ರದ ಹಿರೋ ಗ್ಲಾಮರ್ ಮೋಟಾರ್ ಬೈಕಿನ ಮಾಲಿಕರಾಗಿದ್ದು. ದಿನಾಂಕ 06/04/2015 ರಂದು ರಾತ್ರಿ 8.00 ಗಂಟೆಗೆ ಬೈಕನ್ನು ಹೊಸ್ಮಾರು ಜಂಕ್ಷನ್ ರಾಧಿಕ ಸ್ಟೋರ್ ಬಳಿ ನಿಲ್ಲಿಸಿ ತನ್ನ ಸ್ನೇಹಿತರ ಜೊತೆ ಮಾತನಾಡಲು ಹೋಗಿದ್ದು ನಂತರ ವಾಪಾಸ್ಸು 9.00 ಗಂಟೆಗೆ ಬೈಕ್ ನಿಲ್ಲಿಸಿದ ಸ್ಥಳಕ್ಕೆ ಬಂದಾಗ ಬೈಕ್ ನಿಲ್ಲಿಸಿದ ಜಾಗದಲ್ಲಿರದೇ ಇದ್ದು ನಂತರ ಸಮೀಪದಲ್ಲಿ ಹುಡುಕಾಡಿ ತನ್ನ ಸ್ನೇಹಿತರು ಯಾರಾದರೂ ಕೊಂಡು ಹೋಗಿರಬಹುವುದೆಂದು ತಿಳಿದು ಅವರುಗಳಲ್ಲಿ ವಿಚಾರಿಸಿದಾಗ ಪತ್ತೆಯಾಗಿರುವುದಿಲ್ಲ. ಸದ್ರಿ ಬೈಕನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದಾಗಿರುತ್ತದೆ. ಕಳವು ಆದ ಬೈಕಿನ ಅಂದಾಜು ಮೌಲ್ಯ 45,000/- ರೂಪಾಯಿ ಆಗಿರುತ್ತದೆ ಎಂಬುದಾಗಿ ಸತೀಶ ರವರು ನೀಡಿದ ದೂರಿನಂತೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 54/2015 ಕಲಂ 379 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.
No comments:
Post a Comment