Wednesday, March 25, 2015

Daily Crimes Reported as On 25/03/15 at 17:00 Hrs

ಅಪಘಾತ ಪ್ರಕರಣ
  • ಕುಂದಾಪುರ: ದಿನಾಂಕ 25/03/2015  ರಂದು ಸಮಯ  ಸುಮಾರು   ಬೆಳಿಗ್ಗೆ 09:45 ಗಂಟೆಗೆ ಕುಂದಾಪುರ ತಾಲೂಕು  ಹೆಮ್ಮಾಡಿ ಗ್ರಾಮದ  ಹೆಮ್ಮಾಡಿ  ಬಸ್  ಸ್ಟಾಪ್  ಬಳಿ  ರಾ.ಹೆ 66 ರಸ್ತೆಯಲ್ಲಿ ಆಪಾದಿತ ಆನಂದ  ಶೆಟ್ಟಿ ಎಂಬವರು KA-20-C-8544 ನೇ  ಮಿನಿ ಟಿಪ್ಪರ್  ಲಾರಿಯನ್ನು ಕುಂದಾಪುರ ಕಡೆಯಿಂದ ತ್ರಾಸಿ ಕಡೆಗೆ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿ ಮಂಜುನಾಥ  ಗಾಣಿಗ  ಇವರು ತನ್ನ ಬಾಬ್ತು KA-20-EH-3594 ನೇ ಬೈಕ್  ನಲ್ಲಿ ಸಹ ಸವಾರರಾಗಿ ಗೋಪಾಲ ಗಾಣಿಗರವರನ್ನು ಕುಳ್ಳಿರಿಸಿಕೊಂಡು ತ್ರಾಸಿ  ಕಡೆಗೆ ಹೋಗಲು ಬೈಕ್ನ್ನು  ಸ್ಟಾರ್ಟ್ ಮಾಡುವಾಗಲೇ ಹಿಂದುಗಡೆಯಿಂದ ಡಿಕ್ಕಿ  ಹೊಡೆದ  ಪರಿಣಾಮ  ಪಿರ್ಯಾದಿದಾರರು ಹಾಗೂ ಸಹ ಸವಾರ ಬೈಕ್  ಸಮೇತ  ರಸ್ತೆಯಲ್ಲಿ  ಬಿದ್ದು   ಸಹ ಸವಾರನಿಗೆ ಗಾಯವುಂಟಾಗಿ ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ. ಈ ಬಗ್ಗೆ ಕುಂದಾಪುರ ಸಂಚಾರ ಠಾಣಾ ಅಪರಾಧ ಕ್ರಮಾಂಕ 33/15 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 
ಅಸ್ವಾಭಾವಿಕ ಮರಣ ಪ್ರಕರಣ
  • ಕೊಲ್ಲೂರು : ದಿನಾಂಕ: 25/03/2015 ರಂದು ಹಳ್ಳಿಬೇರು, ಕೊಲ್ಲೂರು ಗ್ರಾಮ ಎಂಬಲ್ಲಿ 12.30 ಗಂಟೆಗೆ ಸಂಗೀತಾ ಪ್ರಾಯ:4ವರ್ಷ ಮನೆಯ ಸಮೀಪದ ನುಗ್ಗೆ ಮರದ ಕೆಳಗೆ ಆಟವಾಡುತ್ತಿದ್ದು ಆಗ ಜೋರಾಗಿ ಸುಂಟರ ಗಾಳಿ ಬೀಸಿದ್ದು ನುಗ್ಗೆ ಮರವು ಬುಡ ಸಮೇತ ಅದರ ಅಡಿ ಆಟವಾಡುತ್ತಿದ್ದ ಸಂಗೀತಳ ಮೇಲೆ ಬಿದ್ದು ಪರಿಣಾಮ ಆಕೆಯ ಕಾಲು ಮತ್ತು ಮೈಗೆ ತೀವ್ರ ಸ್ವರೂಪದ ಏಟಾಗಿದ್ದು  ಆಕೆಯನ್ನು 108 ಅಂಬುಲೆನ್ಸನಲ್ಲಿ ಚಿಕಿತ್ಸೆಗೆ ಕುಂದಾಪುರದ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಆಸ್ಪತ್ರೆಯಲ್ಲಿ ಮದ್ಯಾಹ್ನ 2.00 ಗಂಟೆಗೆ ವೈದ್ಯಾಧಿಕಾರಿಗಳು ಪರೀಕ್ಷಿಸಿದ್ದು ಮೃತ ಪಟ್ಟಿರುವುದಾಗಿದೆ. ಈ ಬಗ್ಗೆ ಕೊಲ್ಲೂರು ಠಾಣಾ ಅಸ್ವಾಭಾವಿಕ ಮರಣ ಕ್ರಮಾಂಕ 05/2015 ಕಲಂ:174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 

No comments: