Friday, March 20, 2015

Daily Crimes Reported as On 20/03/2015 at 07:00 Hrs

ಜುಗಾರಿ ಪ್ರಕರಣ
  • ಕುಂದಾಪುರ: ದಿನಾಂಕ 19/03/15 ರಂದು ಎಂ ಮಂಜುನಾಥ ಶೆಟ್ಟಿ, ಮಾನ್ಯ ಪೊಲೀಸ್ ಉಪಾಧೀಕ್ಷಕರು, ಕುಂದಾಪುರ ಉಪ ವಿಭಾಗ ಇವರಿಗೆ ದೊರೆತ ಖಚಿತ ವರ್ತಮಾನದಂತೆ ಸಿಬ್ಬಂದಿಯವರೊಂದಿಗೆ  ಕುಂದಾಪುರ ತಾಲೂಕು ಕಂಡ್ಲೂರು ಪೇಟೆ ತಲುಪಿ ಶ್ರೀ ಅಯ್ಯಪ್ಪ ಡ್ರೆಸ್ ಸೆಂಟರ್ ಎಡಬದಿಯಲ್ಲಿರುವ   ಪಾನ್ ಸ್ಟಾಲ್ ನ ಸಾರ್ವಜನಿಕ ಸ್ಥಳದಲ್ಲಿ,  ಓರ್ವ ವ್ಯಕ್ತಿಯು ಸಾರ್ವಜನಿಕರಿಗೆ 1 ರೂಪಾಯಿಗೆ 70 ರೂಪಾಯಿ ಕೊಡುವುದಾಗಿ ಹೇಳುತ್ತಿರುವುದನ್ನು ಖಚಿತ ಪಡಿಸಿಕೊಂಡು ಮಟ್ಕಾ-ಜುಗಾರಿ ಆಟ ನಡೆಸುತ್ತಿದ್ದ  ಆರೋಪಿ ನರಸಿಂಹ ಮೊಗವೀರ  ಎಂಬಾತನನ್ನು ದಸ್ತಗಿರಿ ಮಾಡಿದ್ದು,  ಆರೋಪಿಯು ಮಟ್ಕಾ-ಜುಗಾರಿ ಆಟದಿಂದ ಸಂಗ್ರಹಿಸಿದ ಹಣವನ್ನು ಶೇಷಗಿರಿ ನಾಯಕ್  ಎಂಬುವನಿಗೆ ನೀಡುತ್ತಿರುವುದಾಗಿ  ತಿಳಿಸಿದ್ದು, ಆರೋಪಿಯನ್ನು  ದಸ್ತಗಿರಿ ಮಾಡಿ ಮಟ್ಕಾ-ಜುಗಾರಿ ಆಟಕ್ಕೆ ಬಳುಸುತ್ತಿದ್ದ ಮಟ್ಕಾ ಚೀಟಿ-1, ಬಾಲ್ ಪೆನ್ನು-1, ನಗದು ರೂ 750 /- ನ್ನು ಸ್ವಾಧೀನಪಡಿಸಿಕೊಂಡದ್ದಾಗಿದೆ. ಈ ಬಗ್ಗೆ ಕುಂದಾಪುರ ಠಾಣಾ ಅಪರಾಧ ಕ್ರಮಾಂಕ 88/2015 ಕಲಂ 78(1) (3) ಕರ್ನಾಟಕ ಪೊಲೀಸ್ ಕಾಯ್ದೆಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 
ಅಸ್ವಾಭಾವಿಕ ಮರಣ ಪ್ರಕರಣ
  • ಕೋಟ: ದಿನಾಂಕ:19/03/2015 ರಂದು ರಾಜೇಶ ನಾಯ್ಕ್  ಪ್ರಾಯ:24 ವರ್ಷ ಎಂಬುವರು ಸಾಂಸಾರಿಕ ಜೀವನದ ವಿಚಾರದಲ್ಲಿ ಬೇಸರಗೊಂಡು  ಉಡುಪಿ ತಾಲೂಕು ನಂಚಾರು ಗ್ರಾಮದ ಹೆಬ್ಬಾರ್ ಬೆಟ್ಟು ಎಂಬಲ್ಲಿನ ತನ್ನ ಮನೆಯಲ್ಲಿ ಬೆಳಿಗ್ಗೆ 09:00 ಗಂಟೆಯಿಂದ 12:30 ಗಂಟೆಯ ಮಧ್ಯಾವಧಿಯಲ್ಲಿ ಯಾವುದೋ ವಿಷ ಪದಾರ್ಥ ಮಿಶ್ರಣ ಮಾಡಿ ಕುಡಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಕೋಟ ಠಾಣಾ ಅಸ್ವಾಭಾವಿಕ ಮರಣ ಕ್ರಮಾಂಕ 12/2015 ಕಲಂ:174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 
ಅಪಘಾತ ಪ್ರಕರಣ
  • ಉಡುಪಿ: ಪಿರ್ಯಾದುದಾರರಾದ ಐವನ್ ಪೂಟಾರ್ಡ್(60) ರವರು ದಿನಾಂಕ:19/03/2015 ರಂದು ಅವರ ಬಾಬ್ತು ಕೆಎ-20 ಇಇ-3797 ನೇ ಸ್ಕೂಟರ್‌ನಲ್ಲಿ ಹೈಟೆಕ್ ಆಸ್ಪತ್ರೆಗೆ ಹೋಗುವರೇ ಮನೆಯಿಂದ ಹೊರಟು ಕಲ್ಸಂಕ ಮಾರ್ಗವಾಗಿ ಹೋಗುತ್ತಾ ಬನ್ನಂಜೆ ಬಳಿ ತಲುಪುವಾಗ್ಗೆ ಸಮಯ ಸುಮಾರು ಸಂಜೆ 05:45 ಗಂಟೆಗೆ ಪಿರ್ಯಾದುದಾರರ ಮುಂದುಗಡೆಯಿಂದ ಹೋಗುತ್ತಿದ್ದ  ಕೆಎ-20 ಬಿ-6365 ನೇ ಓಮ್ನಿ ಕಾರು ಚಾಲಕ ತನ್ನ ಕಾರನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಯಾವುದೇ ಸೂಚನೆ ನೀಡದೇ ಒಮ್ಮೆಲೆ ಬಲಕ್ಕೆ ತಿರುಗಿಸಿ ಪಿರ್ಯಾದುದಾರರ ಸ್ಕೂಟರಿಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದುದಾರರು ಸ್ಕೂಟರ್ ಸಮೇತ ರಸ್ತೆಗೆ ಬಿದ್ದು ಗಾಯಗೊಂಡಿರುತ್ತಾರೆ. ಈ ಅಪಘಾತಕ್ಕೆ ಕೆಎ-20 ಬಿ-6365 ನೇ ಓಮ್ನಿ ಕಾರು ಚಾಲಕ ವಿಠಲನಾಯ್ಕ್‌ರವರ ಅತೀವೇಗ ಹಾಗೂ ಅಜಾಗರೂಕತೆಯ ಚಾಲನೆಯೇ ಕಾರಣವಾಗಿದ್ದು ಈ ಬಗ್ಗೆ ಉಡುಪಿ ಸಂಚಾರ ಠಾಣಾ ಅಪರಾಧ ಕ್ರಮಾಂಕ 28/2015 ಕಲಂ. 279,337 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 
ಹಲ್ಲೆ ಪ್ರಕರಣ
  • ಶಿರ್ವಾ: ಪಿರ್ಯಾದಿ ಶ್ರೀ ಸಿಲ್ವೆಸ್ಟರ್‌   ಲೋಬೋ ಇವರು  ದಿನಾಂಕ: 19.03.2015 ರಂದು  ಮಧ್ಯಾಹ್ನ  1.15 ಗಂಟೆ  ಸಮಯಕ್ಕೆ  ತನ್ನ  ಮನೆಯಿಂದ   ತಂಕರಪಲ್ಕೆಯಿಂದ    ಚೆಕ್‌  ಪಾದೆಗೆ  ಹೋಗುವ   ರಸ್ತೆಗೆ   ಬಂದು  ಅಲ್ಲಿ   ನೀರಿನ  ಟ್ಯಾಂಕಿನ  ಚಾಲಕರಲ್ಲಿ  ಮರಳು  ಹಾಗೂ ಜಲ್ಲಿ   ಬಗ್ಗೆ  ವಿಚಾರಿಸಿದ್ದಲ್ಲಿ   ತಾನು ಫಿಲಿಫ್‌ರವರಿಗೆ  ರೂಪಾಯಿ  50/- ಕ್ಕೆ ನೀಡಿದ್ದಾಗಿ  ಹೇಳಿದಾಗ  ಪಿರ್ಯದಿದಾರರು  ಆಕ್ಷೇಪಿಸಿದ್ದಕ್ಕೆ  ಆರೋಪಿತ  ಫಿಲಿಫ್‌  ಡಿಸೋಜ    ಮರದ ಸ್ಟಿಕ್‌ನಿಂದ  ಎರಡು  ಕಾಲುಗಳಿಗೆ  ಹಾಗೂ ಸೊಂಟಕ್ಕೆ ಹೊಡೆದು  ರಕ್ತ  ಗಾಯಗೊಳಿಸಿದ್ದಲ್ಲದೆ    ಆರೋಪಿತನ ಹೆಂಡತಿ  ಹಾಗೂ ಮಗ  ಈತನ ಕೃತ್ಯಕ್ಕೆ  ಸಹಕರಿಸಿದ್ದಾಗಿದೆ. ಈ ಬಗ್ಗೆ ಶಿರ್ವಾ ಠಾಣಾ ಅಪರಾಧ ಕ್ರಮಾಂಕ 15/2015  ಕಲಂ 341,324,504 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 

No comments: