ಜುಗಾರಿ
ಪ್ರಕರಣ
- ಬೈಂದೂರು: ದಿನಾಂಕ 29-03-2015 ರಂದು 16:00 ಗಂಟೆಯ ಸಮಯಕ್ಕೆ ಬೈಂದೂರು ಪೊಲೀಸ್ ಠಾಣಾ ಪಿಎಸ್ಐ ರವರಿಗೆ ಕುಂದಾಪುರ ತಾಲೂಕು ಶಿರೂರು ಗ್ರಾಮದ ಕರಾವಳಿ ವೈನ್ಸ್ ಸಮೀಪ ಸಾರ್ವಜನಿಕ ಸ್ಥಳದಲ್ಲಿ ಕೆಲವರು ಹಣವನ್ನು ಪಣವಾಗಿಟ್ಟು ಇಸ್ಪೀಟು ಎಲೆಗಳಿಂದ ಜುಗಾರಿ ಆಟವಾಡುತ್ತಿದ್ದಾರೆಂದು ಖಚಿತ ಮಾಹಿತಿ ಬಂದ ಮೇರೆಗೆ ಠಾಣಾ ಸಿಬ್ಬಂದಿಯವರು ಮತ್ತು ಪಂಚರ ನೆರವಿನಿಂದ 16:40 ಗಂಟೆಯ ಸಮಯಕ್ಕೆ ಕುಂದಾಪುರ ತಾಲೂಕು ಶಿರೂರು ಗ್ರಾಮದ ಕರಾವಳಿ ವೈನ್ಸ್ ಸಮೀಪ ಸಾರ್ವಜನಿಕ ಸ್ಥಳದಲ್ಲಿ ಹಣವನ್ನು ಪಣವಾಗಿಟ್ಟು ಇಸ್ಪೀಟು ಎಲೆಗಳಿಂದ ಜುಗಾರಿ ಆಟವಾಡುತ್ತಿದ್ದಲ್ಲಿಗೆ ದಾಳಿ ಮಾಡಿ ಆಟವಾಡುತ್ತಿದ್ದ 1) ಮಹಾಬಲ ಪೂಜಾರಿ, ಪ್ರಾಯ-38 ವರ್ಷ ತಂದೆ-ಶೀನ ಪೂಜಾರಿ, ವಾಸ-ತೆಂಕುಮನೆ, ಮೇಲ್ಪಂಕ್ತಿ, ಶೀರೂರು ಗ್ರಾಮ ಕುಂದಾಪುರ ತಾಲೂಕು 2) ಖಾಸಿಂ, ಪ್ರಾಯ-35 ವರ್ಷ, ತಂದೆ- ಜಾಫರ್ ಸಾಹೇಬ್ ವಾಸ- ಆಯೆಷಾ ಮಂಜಿಲ್, ನ್ಯೂ ಕಾಲನಿ, ಶಿರೂರು ಗ್ರಾಮ ಕುಂದಾಪುರ ತಾಲೂಕು 3) ನಾರಾಯಣ ಪೂಜಾರಿ, ಪ್ರಾಯ-54 ತಂದೆ-ದಿ.ಮಂಜಯ್ಯ ಪೂಜಾರಿ, ವಾಸ-ಮುದ್ರಮಕ್ಕಿ, ಶಿರೂರು ಗ್ರಾಮ ಕುಂದಾಪುರ ತಾಲೂಕು ಇವರನ್ನು ದಸ್ತಗಿರಿ ಮಾಡಿ ಆಟಕ್ಕೆ ಬಳಸಿದ 1390/- ರೂಪಾಯಿ ನಗದು, ಇಸ್ಪಿಟ್ ಕಾರ್ಡ್ -52 ಹಾಗೂ ಹಳೆಯ ನ್ಯೂಸ್ ಪೇಪರ್ -1ನ್ನು ಸ್ವಾಧೀನಪಡಿಸಿಕೊಂಡಿದ್ದಾಗಿದೆ. ಈ ಬಗ್ಗೆ ಬೈಂದೂರು ಠಾಣಾ 74/15 ಕಲಂ 87 ಕೆಪಿ ಯಂತೆ ಪ್ರಕರಣ ದಾಖಲಿಸಿಕೊಂಡಿರುವುದಾಗಿದೆ.
ಅಸ್ವಾಭಾವಿಕ
ಮರಣ ಪ್ರಕರಣ
- ಗಂಗೊಳ್ಳಿ: ರಾಘವೇಂದ್ರ ಶೇಟ್ ರವರು ದಿನಾಂಕ 29/03/2015 ರಂದು 23 ಗಂಟೆಯಿಂದ ದಿನಾಂಕ 30/03/2015 ರಂದು 7 ಗಂಟೆಯ ನಡುವೆ ಯಾವೊದೋ ವಿಷ ಪದಾರ್ಥ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು. ಆ ಸಮಯ ಚಿಕಿತ್ಸೆ ಬಗ್ಗೆ ಕುಂದಾಪುರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ವೈದ್ಯರು ಪರೀಕ್ಷಿಸಿ ಬೆಳಿಗ್ಗೆ 10 ಗಂಟೆಗೆ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಗಂಗೊಳ್ಳಿ ಠಾಣಾ ಅಸ್ವಾಭಾವಿಕ ಮರಣ ಕ್ರಮಾಂಕ 04/2015 ಕಲಂ:174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
- ಬ್ರಹ್ಮಾವರ: ಚಂದ್ರ ಕುಲಾಲ್ ಎಂಬವರು ವಿಪರೀತ ಮದ್ಯ ಸೇವಿಸುವ ಚಟದವರಾಗಿದ್ದು ಮತ್ತು ಸಾಲ ಬಾದೆಯಿಂದ ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 30/03/2015 ರಂದು ಬೆಳಿಗ್ಗೆ 10:30 ಗಂಟೆಯಿಂದ 11:45 ಗಂಟೆಯ ಮದ್ಯದ ಅವಧಿಯಲ್ಲಿ ಯಡ್ತಾಡಿ ಗ್ರಾಮದ ಸಾಯಿಬ್ರಕಟ್ಟೆ ಕಾಜ್ರಳ್ಳಿ ದೇವಸ್ಥಾನದ ಚರಂಡಿಯ ಬಳಿ ಯಾವುದೋ ವಿಷ ಪದಾರ್ಥ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಠಾಣಾ ಅಸ್ವಾಭಾವಿಕ ಮರಣ ಕ್ರಮಾಂಕ 16/2015 ಕಲಂ:174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
No comments:
Post a Comment