ಅಪಘಾತ ಪ್ರಕರಣ
- ಮಣಿಪಾಲ: ದಿನಾಂಕ 29.03.15 ರಂದು ಮಧ್ಯಾಹ್ನ ಸುಮಾರು 02:30 ಗಂಟೆಗೆ ಉಡುಪಿ ತಾಲೂಕು ಶಿವಳ್ಳಿ ಗ್ರಾಮದ ಪೆರಂಪಳ್ಳಿ ರೈಲ್ವೇ ಬ್ರಿಡ್ಜನ ರಸ್ತೆಯಲ್ಲಿ ಮ್ಯಾಕ್ಸಿ ಕ್ಯಾಬ್ ನಂಬ್ರ ಕೆಎ 19 ಸಿ 5901 ನೇದರ ಚಾಲಕನು ತನ್ನ ಮ್ಯಾಕ್ಸಿ ಕ್ಯಾಬ್ಅನ್ನು ಅಂಬಾಗಿಲು ಕಡೆಯಿಂದ ಮಣಿಪಾಲ ಕಡೆಗೆ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ತನ್ನ ವಿರುದ್ದ ದಿಕ್ಕಿನಿಂದ ಬರುತ್ತಿದ್ದ ಹೊಸ ದ್ಚಿಚಕ್ರ ವಾಹನ ಫ್ಯಾಷನ್ ಪ್ರೊ ಮೋಟಾರು ಸೈಕಲ್ಗೆ ಢಿಕ್ಕಿ ಹೊಡೆದ ಪರಿಣಾಮ ಮೋಟಾರು ಸೈಕಲ್ನಲ್ಲಿ ಸವಾರಿ ಮಾಡುತ್ತಿದ್ದ ಜಗನ್ನಾಥ ಶೆಟ್ಟಿ, ಹಾಗೂ ಸಹ ಸವಾರರಾದ ನವೀನ ಶೆಟ್ಟಿ ಮತ್ತು ಜೀವನ ಶೆಟ್ಟಿ ಎಂಬವರುಗಳು ರಸ್ತೆಗೆ ಬಿದ್ದು ಜಖಂಗೊಂಡವರು ಉಡುಪಿ ಹೈಟೆಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡು, ಅವರಲ್ಲಿ ಜೀವನ ಶೆಟ್ಟಿ ಎಂಬವರಿಗೆ ತೀವ್ರ ಜಖಂಗೊಂಡವರನ್ನು ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಿಸಿದ್ದು, 16:00 ಗಂಟೆಗೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಮಣಿಪಾಲ ಠಾಣಾ ಅಪರಾಧ ಕ್ರಮಾಂಕ 45/15 ಕಲಂ 279, 337, 304(ಎ) ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
- ಮಣಿಪಾಲ: ದಿನಾಂಕ 23/03/15 ರಂದು ಬೆಳಿಗ್ಗೆ 8:30 ಗಂಟೆಗೆ ಪಿರ್ಯಾದಿದಾರರಾದ ತಿಪ್ಪಣ್ಣ ಇವರು ತನ್ನ ಹೊಂಡಾ ಮೋಟಾರ್ ಸೈಕಲ್ ನಂಬ್ರ KA 20 EH 0249 ಅನ್ನು ಮಣಿಪಾಲದ ಆರ್.ಎಸ್.ಬಿ ಸಭಾಭವನದ ಬಳಿ ರಸ್ತೆಯಲ್ಲಿ ಇಟ್ಟು ಸಭಾ ಭವನದ 4 ನೇ ಅಂತಸ್ತಿಗೆ ಹೋಗಿ ಕೆಲಸ ಮಾಡಿ, ಸುಮಾರು 10:30 ಗಂಟೆಗೆ ಚಾ ಕುಡಿಯಲು ವಾಪಾಸು ಬಂದಾಗ ಮೋಟಾರ್ ಸೈಕಲ್ ಇಲ್ಲದೇ ಇದ್ದು, ಮೋಟಾರ್ ಸೈಕಲನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ, ಅಂದಾಜು ಮೌಲ್ಯ ಸುಮಾರು 45,000/- ರೂಪಾಯಿ ಆಗಬಹುದು, ಇದು ಕಪ್ಪು ಬಣ್ಣದಾಗಿದ್ದು, ಇಂಜಿನ್ ನಂಬ್ರ KC09E86850025 , ಚಾಸೀಸ್ ನಂಬ್ರ MEHKC09CKE8839487 ಆಗಿರುತ್ತದೆ. ಈ ಬಗ್ಗೆ ಮಣಿಪಾಲ ಠಾಣಾ ಅಪರಾಧ ಕ್ರಮಾಂಕ 44/15 ಕಲಂ 379 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
No comments:
Post a Comment