Sunday, March 29, 2015

Daily Crime Reports As on 29/03/2015 at 19:30 Hrs

ಹಲ್ಲೆ ಪ್ರಕರಣಗಳು
  • ಕುಂದಾಪುರ: ದಿನಾಂಕ 29.03.2015 ರಂದು ಮಧ್ಯಾಹ್ನ 12:20 ಗಂಟೆಗೆ ಆಪಾದಿತರಾದ ದಾಸ ಖಾರ್ವಿ ತಂದೆ: ಚಂದ್ರ ಖಾರ್ವಿ 2) ರಶ್ಮಿ ಬಾಯಿ ಗಂಡ: ದಾಸ ಖಾರ್ವಿ 3) ಮಹೇಶ ಖಾರ್ವಿ ತಂದೆ: ದಾಸ ಖಾರ್ವಿ ವಾಸ: ಖಾರ್ವಿ ಮೇಲ್ಕೇರಿ, ಕುಂದಾಪುರ ತಾಲೂಕು ರವರು ಸಮಾನ ಉದ್ದೇಶದಿಂದ ಪಿರ್ಯಾದಿದಾರರಾದ ಆನಂದ ಸಾರಂಗ (69) ತಂದೆ: ದಿ. ಗೋವಿಂದ ಸಾರಂಗ ವಾಸ: ಖಾರ್ವಿ ಮೇಲ್ಕೇರಿ, ಕುಂದಾಪುರ ತಾಲೂಕು ಎಂಬವರ ಮನೆಯ ಕಂಪೌಂಡ್‌ ಒಳಗೆ ಅಕ್ರಮ ಪ್ರವೇಶ ಮಾಡಿ ಕಲ್ಲು, ಕೊಡಲಿ ಹಾಗೂ ಕಾಯಿ ಬೊಂಡಾದಿಂದ ಪಿರ್ಯಾದುದಾರರ ಬೆನ್ನು ಪಕ್ಕೆಲುಬು, ಎಡಕೈಗೆ, ಕಿವಿ ಹಾಗೂ ತಲೆಗೆ ಹೊಡೆದು ಗಾಯಗೊಳಿಸಿರುವುದಿಲ್ಲದೆ ಕುತ್ತಿಗೆ ಒತ್ತಿ ನೋವು ಉಂಟುಮಾಡಿರುತ್ತಾರೆ ಎಂಬುದಾಗಿ ಆನಂದ ಸಾರಂಗ ರವರು ನೀಡಿದ ದೂರಿನಂತೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 96/2015 ಕಲಂ 447, 323, 324, ಜೊತೆಗೆ 34  ಐ.ಪಿ.ಸಿಯಂತೆ ಪ್ರಕರಣ ದಾಖಲಿಸಲಾಗಿದೆ.
  • ಕುಂದಾಪುರ: ದಿನಾಂಕ 29.03.2015 ರಂದು ಮಧ್ಯಾಹ್ನ 12:00 ಗಂಟೆಗೆ ಕುಂದಾಪುರ ತಾಲೂಕು ಕಸಬಾ ಗ್ರಾಮದ ಖಾರ್ವಿಕೇರಿ ಮೇಲ್ಕೇರಿ ಎಂಬಲ್ಲಿ ಪಿರ್ಯಾದುದಾರರಾದ ದಾಸ ಖಾರ್ವಿ (59) ತಂದೆ: ದಿ. ಚಂದ್ರ ಖಾರ್ವಿ ವಾಸ: ಖಾರ್ವಿ ಮೇಲ್ಕೇರಿ, ಕುಂದಾಪುರ ತಾಲೂಕು ಎಂಬವರ ಅಜ್ಜಿಗೆ ಸಂಬಂಧಿಸಿದ ತೆಂಗಿನ ತೋಟದಲ್ಲಿ ತೆಂಗಿನ ಕಾಯಿ ತೆಗೆಯುತ್ತಿದ್ದಾಗ ಆಪಾದಿತರಾದ 1) ಆನಂದ ಸಾರಂಗ, 2) ದಿನಕರ ಸಾರಂಗ ಮತ್ತು 3)  ಪ್ರಶಾಂತ ಸಾರಂಗ ರವರು ಸಮಾನ ಉದ್ದೇಶದಿಂದ ಒಟ್ಟು ಸೇರಿ ಅವರಲ್ಲಿ 1 ನೇ ಆರೋಪಿಯು ಕೊಡಲಿಯಿಂದ ಹೊಡೆದು ಪಿರ್ಯಾದುದಾರರ ಎಡಕಣ್ಣಿನ ಹುಬ್ಬಿನ ಮೇಲ್ಭಾಗಕ್ಕೆ ರಕ್ತಗಾಯಗೊಳಿಸಿದ್ದಲ್ಲದೆ 2 ಮತ್ತು 3 ನೇ ಆಪಾದಿತರು ಕೋಲಿನಿಂದ ಪಿರ್ಯಾದುದಾರರ ಕೈಗೆ, ಹೊಟ್ಟೆಗೆ, ಬೆನ್ನಿಗೆ ಹೊಡೆದು ನೋವು ಉಂಟುಮಾಡಿರುತ್ತಾರೆ. ಪಿರ್ಯಾದುದಾರರ ಜಾಗವನ್ನು ಆರೋಪಿತರು ತಮ್ಮದಾಗಿಸಿಕೊಳ್ಳವ ಹುನ್ನಾರದಿಂದ ಈ ಕೃತ್ಯ ನಡೆಸಿದ್ದಾಗಿರುತ್ತದೆ ಎಂಬುದಾಗಿ ದಾಸ ಖಾರ್ವಿ ರವರು ನೀಡಿದ ದೂರಿನಂತೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 97/2015 ಕಲಂ 324, ಜೊತೆಗೆ 34  ಐ.ಪಿ.ಸಿಯಂತೆ ಪ್ರಕರಣ ದಾಖಲಿಸಲಾಗಿದೆ. 

No comments: