ಮನುಷ್ಯ ಕಾಣೆ ಪ್ರಕರಣ
- ಗಂಗೊಳ್ಳಿ: ಪಿರ್ಯಾದುದಾರರಾದ ನರಸಿಂಹ (31) ತಂದೆ ನಾಗ ಮೊಗವೀರ, ದಾರುಮನೆ, ನಾಡಾ ಪಡುಕೋನೆ ಗ್ರಾಮ, ಕುಂದಾಪುರ ತಾಲೂಕು ಎಂಬವರ ಅಣ್ಣನಾದ ಶೇಖರ, ಪ್ರಾಯ 40 ವರ್ಷ, ಎಂಬವರು ದಿನಾಂಕ 26/03/2015 ರಂದು ಬೆಳಿಗ್ಗೆ 6:00 ಗಂಟೆಗೆ ಮನೆಯಿಂದ ಹೊರಗಡೆ ಹೋದವರು ವಾಪಾಸು ಮನೆಗೆ ಬಾರದೆ ಕಾಣೆಯಾಗಿರುತ್ತಾರೆ. ಕಾಣೆಯಾದ ಶೇಖರರವರಿಗೆ ಮಾತು ಬರುವುದಿಲ್ಲ ಹಾಗೂ ಕಿವಿಯು ಕೇಳುವುದಿಲ್ಲ. ಕಾಣೆಯಾದ ಶೇಖರ ರವರನ್ನು ಸಂಬಂಧಿಕರ ಮನೆಗಳಲ್ಲಿ ಹುಡುಕಾಡಿದರೂ ಪತ್ತೆಯಾಗಿರುವುದಿಲ್ಲ ಎಂಬುದಾಗಿ ನರಸಿಂಹ ರವರು ನೀಡಿದ ದೂರಿನಂತೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 41/15 ಕಲಂ ಮನುಷ್ಯ ಕಾಣೆಯಂತೆ ಪ್ರಕರಣ ದಾಖಲಿಸಲಾಗಿದೆ.
ಅಪಘಾತ ಪ್ರಕರಣ
- ಕಾರ್ಕಳ: ದಿನಾಂಕ 29/03/2015 ರಂದು 11:30 ಗಂಟೆಗೆ ಹರಿಯಪ್ಪ ರಾವ್ ಎಂಬವರು ಕಾರ್ಕಳ ತಾಲೂಕಿನ ಕಸಬ ಗ್ರಾಮದ ಆನೆಕೆರೆ ಮಸೀದಿ ಎದುರು ಹಾದು ಹೋಗಿರುವ ಮಂಗಳೂರು ರಸ್ತೆಯ ಎಡ ಬದಿಯಲ್ಲಿ ಆನೆಕೆರೆ ಕಡೆಯಿಂದ ಕಾರ್ಕಳ ಕಡೆಗೆ ನಡೆದುಕೊಂಡು ತೆರಳುತ್ತಿದ್ದ ಸಮಯ ಅವರ ಹಿಂದಿನಿಂದ ಅಂದರೆ ಆನೆಕೆರೆ ಕಡೆಯಿಂದ ಕಾರ್ಕಳ ಬಸ್ಸು ನಿಲ್ದಾಣದ ಕಡೆಗೆ KA.19.D.663 ನೇ ನಂಬ್ರದ ಬಸ್ಸನ್ನು ಅದರ ಚಾಲಕನು ನಿರ್ಲಕ್ಷ್ಯತನದಿಂದ ರಸ್ತೆಯ ತೀರಾ ಎಡ ಬದಿಯಲ್ಲಿ ಚಲಾಯಿಸಿ ಹರಿಯಪ್ಪ ರಾವ್ ಇವರಿಗೆ ಡಿಕ್ಕಿ ಹೊಡೆದ ಪರಿಣಾಮ ಪಾದಾಚಾರಿ ಹರಿಯಪ್ಪ ರಾವ್ ಇವರ ಬಲ ಹಣೆಯ ಬಳಿ ಹಾಗೂ ಎದೆಯಲ್ಲಿ ರಕ್ತ ಗಾಯವಾಗಿರುತ್ತದೆ ಎಂಬುದಾಗಿ ಅಣ್ಣಿ ಮಡಿವಾಳ, 54 ವರ್ಷ, ತಂದೆ: ದಿವಂಗತ ಪೋಂಕ್ರ, ವಾಸ: ಮುತ್ತು ನಿವಾಸ, ಗುಂಡಾಜೆ ಶಾಲೆಯ ಬಳಿ, ಮಿಯಾರು ಗ್ರಾಮ, ಕಾರ್ಕಳ ತಾಲೂಕು ರವರು ನೀಡಿದ ದೂರಿನಂತೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 31/15 ಕಲಂ 279, 337 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.
No comments:
Post a Comment