Saturday, February 28, 2015

Daily Crime Reported As On 28/02/2015 At 17:00 Hrs

ಅಪಘಾತ ಪ್ರಕರಣ:
  • ಕೋಟ: ಪಿರ್ಯಾಧಿ ರತ್ನಾಕರ ಶೆಟ್ಟಿ (36),ತಂದೆ:ದಿ.ಭಾಸ್ಕರ ಶೆಟ್ಟಿ ವಾಸ:ಮಡಿವಾಳ ಮಕ್ಕಿ,ಹೊಂಬಾಡಿ-ಮಂಡಾಡಿ  ಗ್ರಾಮ,ಕುಂದಾಪುರ ತಾಲೂಕು ಇವರು ದಿನಾಂಕ:27/02/2015 ರಂದು ಸಂಜೆ 4:15 ಗಂಟೆಗೆ ಕೆ.ಎ:21 ಎಂ:1313 ನೇ ನಂಬ್ರದ ಮಾರುತಿ-800 ಕಾರಿನಲ್ಲಿ ವನಜಾ,ರಾಜೀವಿ,ಸುರಕ್ಷಾ ಎಂಬವರೊಂದಿಗೆ ಹೊಂಬಾಡಿ ಮಂಡಾಡಿ ಗ್ರಾಮ ಪಂಚಾಯತ್ ಕಚೇರಿ ಹುಣ್ಸೆಮಕ್ಕಿಗೆ ಹೆಲ್ತ್ ಕಾರ್ಡ್‌ಗೆ  ಭಾವಚಿತ್ರ ತೆಗೆಯಲು ಹೋಗುವರೇ ಹುಣ್ಸೆಮಕ್ಕಿ ನೀರಿನ ಟ್ಯಾಂಕ್ ಹತ್ತಿರ ಬೇಳೂರು-ಹುಣ್ಸೆಮಕ್ಕಿ ರಸ್ತೆಯಲ್ಲಿ ಹೋಗುತ್ತಿರುವಾಗ ಪಿರ್ಯಾಧಿದಾರರ ಕಾರಿನ ಚಾಲಕ ರಾಘವೇಂದ್ರ ಕುಲಾಲ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಕಾರು ಚಲಾಯಿಸಿ ನಾಯಿ ಅಡ್ಡ ಬಂದ್ದನ್ನು ಗಮನಿಸಿ ಕಾರಿನ ಬ್ರೇಕ್ ಹಾಕಿದಾಗ ಹತೋಟಿ ತಪ್ಪಿ ರಸ್ತೆಯ ಬಲ ಬದಿಯ ಚರಂಡಿಗೆ ಕಾರು ಬಿದ್ದ ಪರಿಣಾಮ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಪಿರ್ಯಾಧಿದಾರರಿಗೆ ಹಾಗೂ ವನಜಾ, ರಾಜೀವಿ, ಸುರಕ್ಷಾ ಎಂಬವರಿಗೆ ರಕ್ತಗಾಯವಾಗಿದ್ದು ಚಿಕಿತ್ಸೆ ಬಗ್ಗೆ ಆಸ್ಪತ್ರೆಗೆ ದಾಖಲುಗೊಂಡಿರುವುದಾಗಿದೆ. ಈ ಬಗ್ಗೆ ಕೋಟ ಠಾಣೆಯಲ್ಲಿ ಅಪರಾಧ ಕ್ರಮಾಂಕ 41/2015 ಕಲಂ 279,337 ಐಪಿಸಿ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ
ಕಳವು ಪ್ರಕರಣ
  • ಕುಂದಾಪುರ: ಪಿರ್ಯಾದಿ ಕೆ. ಸುಧಾಕರ ಶೆಟ್ಟಿ (58) ಮಾಲೀಕರು, ದುರ್ಗಾ ಪ್ರಸಾದ್ ಮೋಟಾರ್ಸ್ ಕುಂದಾಪುರ ಇವರ ದುರ್ಗಾ ಪ್ರಸಾದ್ ಕಂಪೌಂಡ್‌ ನಲ್ಲಿರುವ ಗ್ಯಾರೇಜಿನಲ್ಲಿ ಕೆಲಸ ಮಾಡುತ್ತಿರುವ ಆಪಾದಿತ ಪ್ರವೀಣ್ ಆಚಾರ್ಯ ಹಾಗೂ ಇತರರು ದಿನಾಂಕ: 27/02/2015 ರ ರಾತ್ರಿ 09:00 ಗಂಟೆಯಿಂದ ದಿನಾಂಕ: 28/02/2015 ರ ಬೆಳಿಗ್ಗೆ 09:00 ಗಂಟೆಯ ಮಧ್ಯಾವಧಿಯಲ್ಲಿ ಪಿರ್ಯಾದಿದಾರರಿಗೆ ಸಂಬಂದಿಸಿದ ಒಟ್ಟು 55,800/- ಮೌಲ್ಯದ  Welding Machine, Painting spray Machine, Graning machine, Gass cutter, Driller, Gun handle, Two table stands, cooking materials, Spares, Tools, Body anglers, Pipes ಮೊದಲಾದ ಸೊತ್ತುಗಳನ್ನು ಕಳವು ಮಾಡಿಕೊಂಡು ಹೋಗಿರುವುದಾಗಿ ಕುಂದಾಪುರ ಠಾಣೆಗೆ ದೂರು ನೀಡಿದ್ದು ಠಾಣೆಯಲ್ಲಿ ಅಪರಾಧ ಕ್ರಮಾಂಕ 59/2015 ಕಲಂ: 381 ಐಪಿಸಿ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

No comments: