ಕಳವು ಪ್ರಕರಣ
- ಶಂಕರನಾರಾಯಣ: ದಿನಾಂಕ 25-02-2015 ರಂದು 8:30 ಗಂಟೆಯಿಂದ ದಿನಾಂಕ 28-02-2015 ರಂದು ಬೆಳಿಗ್ಗೆ 8:30 ಗಂಟೆಯ ನಡುವಿನ ಅವದಿಯಲ್ಲಿ ಉಡುಪಿ ತಾಲೂಕು ಹಿಲಿಯಾಣ ಗ್ರಾಮ ಹಿಲಿಯಾಣ ಮುಂದಲ್ಬೆಟ್ಟು ಎಂಬಲ್ಲಿರುವ ಕಲ್ಲುಕುಟಿಗ ಸಪರಿವಾರ ದೈವಸ್ಥಾನದ ಬಾಗಿಲಿನ ಬೀಗವನ್ನು ಯಾರೋ ಕಳ್ಳರು ಯಾವುದೋ ಗಟ್ಟಿಯಾದ ಸಾದನದಿಂದ ಬಲತ್ಕಾರವಾಗಿ ಒಡೆದು ದೈವಸ್ಥಾನದ ಒಳಗಡೆ ಹೋಗಿ ದೈವಸ್ಥಾನದ ಒಳಗಡೆಯಿದ್ದ ಕಾಣಿಕೆ ಡಬ್ಬಿಯನ್ನು ಕಳವು ಮಾಡಿಕೊಂಡು ಹೋಗಿದ್ದು, ಕಾಣಿಕೆ ಡಬ್ಬಿಯಲ್ಲಿ ಸುಮಾರು 23,000/- ರೂಪಾಯಿ ಕಾಣಿಕೆ ಹಣವಿರುತ್ತದೆ ಎಂಬುದಾಗಿ ಸಂತೋಷ್ ಶೆಟ್ಟಿ (25) ತಂದೆ ದಿ. ರಾಜೀವ ಹೆಗ್ಡೆ ವಾಸ ಮುಂದಲ್ಬೆಟ್ಟು, , ಹಿಲಿಯಾಣ ಗ್ರಾಮ ರವರು ನೀಡಿದ ದೂರಿನಂತೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 31/15 ಕಲಂ 454, 457, 380 ಐಪಿಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.
ಅಪಘಾತ ಪ್ರಕರಣ
- ಉಡುಪಿ: ದಿನಾಂಕ 28/02/2015 ರಂದು ಪಿರ್ಯಾದಿದಾರರಾದ ರಮಾನಂದ (38) ತಂದೆ: ದಿ.ದಾಸ ಪೂಜಾರಿ ವಾಸ: ಗಿರಿಜಾ ನಿವಾಸ ಕಲೈಬೈಲು, ಸಂಪಿಗೆ ನಗರ, ಪಿತ್ರೋಡಿ, ಉದ್ಯಾವರ, ಉಡುಪಿ ತಾಲೂಕು ಎಂಬವರು ತನ್ನ ಹೊಸ ಪ್ಲೆಜರ್ ಮೋಟಾರ್ ಸೈಕಲ್ನಲ್ಲಿ ತನ್ನ ಮಗಳು ಕು. ತಸ್ವಿ ಳನ್ನು ಸಹಸವಾರಳಾಗಿ ಕುಳ್ಳಿರಿಸಿಕೊಂಡು ತನ್ನ ಮನೆಯಿಂದ ನೇಜಾರಿಗೆ ಹೋಗುವರೇ ಕುತ್ಪಾಡಿ ರಾಮಕೃಷ್ಣ ಭಜನಾ ಮಂದಿರದ ಬಳಿ ತಲುಪುವಾಗ ಎದುರಿನಿಂದ ಅಂದರೆ ಕಡೆಕಾರು ಕಡೆಯಿಂದ ಸಂಪಿಗೆ ನಗರ ಕಡೆಗೆ ಕೆಎ 20 ಎನ್ 8283 ನೇ ವ್ಯಾಗನರ್ ಕಾರಿನ ಚಾಲಕ ಶ್ರೀಶ ಭಟ್ ಎಂಬವರು ತನ್ನ ಕಾರನ್ನು ಅತೀ ವೇಗೆ ಹಾಗೂ ನಿರ್ಲಕ್ಷತನದಿಂದ ರಸ್ತೆಯ ತೀರಾ ಬಲಬದಿಗೆ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರು ಚಲಾಯಿಸುತ್ತಿದ್ದ ಬೈಕ್ನ ಬಲ ಮುಂಬಾಗಕ್ಕೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ಕಾರಿನ ಮುಂಬಾಗದ ಗ್ಲಾಸ್ಗೆ ಬಿದ್ದ ಪರಿಣಾಮ ಬಲಕೆನ್ನೆಯ ಮೇಲ್ಬಾಗದಲ್ಲಿ, ಬಲಕಿವಿಯ ಬಳಿ, ಹಾಗೂ ಬಲಕುತ್ತಿಗೆಯ ಬಳಿ ರಕ್ತಗಾಯವಾಗಿರುತ್ತದೆ. ಪಿರ್ಯಾದಿದಾರರ ಮಗಳಿಗೆ ಯಾವುದೇ ಗಾಯವಾಗಿರುವುದಿಲ್ಲ. ಅಲ್ಲಿ ಸೇರಿದ್ದವರು ಪಿರ್ಯಾದಿಯನ್ನು ಉಪಚರಿಸಿ ಆದರ್ಶ ಆಸ್ಪತ್ರೆಗೆ ಚಿಕಿತ್ಸೆಯ ಬಗ್ಗೆ ದಾಖಲಿಸಿರುವುದಾಗಿದೆ ಎಂಬುದಾಗಿ ರಮಾನಂದ ರವರು ನೀಡಿದ ದೂರಿನಂತೆ ಉಡುಪಿ ಸಂಚಾರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 20/15 ಕಲಂ 279, 337 ಐಪಿಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.
No comments:
Post a Comment