Saturday, November 22, 2014

Daily Crimes Reported as On 22/11/2014 at 17:00 Hrs


ಹುಡುಗಿ ಕಾಣೆ ಪ್ರಕರಣ
  • ಕೋಟ:ಪಿರ್ಯಾದಿದಾರರಾದ ಸ್ವಾಮಿ (38) ತಂದೆ:ಮಾರ ಸ್ವಾಮಿ, ವಾಸ:ಮುಳ್ಳಗುಡ್ಡೆ ಹೈಸ್ಕೂಲ್ ಹತ್ತಿರ 5 ಸೆಂಟ್ಸ್, ಬೇಳೂರು ಗ್ರಾಮ ಕುಂದಾಪುರ ತಾಲೂಕುರವರ ಮಗಳು ಸೌಮ್ಯ (19) ಎಂಬವರು ದಿನಾಂಕ:21/11/2014 ರಂದು ಬೆಳಿಗ್ಗೆ 10:00 ಗಂಟೆಗೆ ಕುಂದಾಪುರ ತಾಲೂಕು, ಬೇಳೂರು ಗ್ರಾಮದ, ಹೈಸ್ಕೂಲ್ ಬಳಿ, ಮುಳ್ಳುಗುಡ್ಡೆ 5 ಸೆಂಟ್ಸ್ ಎಂಬಲ್ಲಿ ತನ್ನ ಮನೆಯಿಂದ ಕೋಟ ಅಮೃತೇಶ್ವರಿ ದೇವಸ್ಥಾನಕ್ಕೆ ಹೋಗುವುದಾಗಿ ಹೇಳಿ ಹೋದವಳು ಈವರೆಗೆ ವಾಪಾಸು ಮನೆಗೆ ಬಾರದೆ ಕಾಣೆಯಾಗಿರುತ್ತಾರೆ.ಈ ಬಗ್ಗೆ ಸ್ವಾಮಿರವರು ನೀಡಿದ ದೂರಿನಂತೆ ಕೋಟ ಠಾಣಾ ಅಪರಾಧ ಕ್ರಮಾಂಕ 224/2014 ಕಲಂ ಹುಡುಗಿ ಕಾಣೆ ಎಂಬುದಾಗಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಕಾಣೆಯಾದ ವ್ಯಕ್ತಿಯ ವೃತ ದೇಹ ಪತ್ತೆ
  • ಕೋಟ:ಪಿರ್ಯಾದಿದಾರರಾದ ಮಂಜುನಾಥ ಮರಕಾಲ (58) ತಂದೆ:ದಿವಂಗತ ಬೀರ ಮರಕಾಲ, ತೆಂಗಿನ ಜೆಡ್ಡು, ಕನ್ನಾರು, ಚೇರ್ಕಾಡಿ ಗ್ರಾಮ, ಉಡುಪಿ ತಾಲೂಕುರವರ ಚಿಕ್ಕಮ್ಮನ ಮಗನಾದ ಕೃಷ್ಣ (43) ತಂದೆ:ಶಿವ ಮರಕಾಲ ಎಂಬವರು ದಿನಾಂಕ:21/11/2014 ರಂದು ಸಂಜೆ 7:00 ಗಂಟೆಗೆ ಉಡುಪಿ ತಾಲೂಕು ಆವರ್ಸೆ ಗ್ರಾಮದ ಕಿರಾಡಿ ಕೆಳಮಠದ ಉಮೇಶ ಅಡಿಗರ ಮನೆಯ ಗ್ರಾನೈಟ್ ಕೂಡಿಸುವ ಕೆಲಸ ಮುಗಿಸಿ ಪಕ್ಕದಲ್ಲಿರುವ ಸೀತಾ ನದಿಗೆ ಸ್ನಾನ ಮಾಡಲು ನೀರಿಗೆ ಇಳಿದಾಗ ಆಕಸ್ಮಿಕವಾಗಿ ಕಾಲುಜಾರಿ ನೀರಿಗೆ ಬಿದ್ದವರು ಮೇಲಕ್ಕೆ ಬಂದಿಲ್ಲವಾಗಿ ಮಂಜುನಾಥ ಮರಕಾಲರವರಿಗೆ ಉಮೇಶ ಅಡಿಗರು ವಿಷಯ ತಿಳಿಸಿದ್ದು, ಮಂಜುನಾಥ ಮರಕಾಲರವರು ಕಿರಾಡಿ ಹೊಳೆಯ ಬಳಿ ಬಂದು ಹುಡುಕಾಡಿದಲ್ಲಿ ಮೃತ ಶರೀರ ಪತ್ತೆಯಾಗಿರುವುದಿಲ್ಲ. ಈ ಬಗ್ಗೆ ಕೋಟ ಠಾಣೆಯಲ್ಲಿ ಗಂಡಸು ಕಾಣೆ ಪ್ರಕರಣ ದಾಖಲಾಗಿದ್ದು, ಈ ದಿನ ದಿನಾಂಕ:22/11/2014 ರಂದು ಮಧ್ಯಾಹ್ನ 12:30 ಗಂಟೆಗೆ ಮುಳುಗು ತಜ್ಞರು ನದಿಯಲ್ಲಿರುವ ಶವವನ್ನು ಮೇಲಕ್ಕೆತ್ತಿದ್ದು, ಮೃತರು ಆಕಸ್ಮಿಕವಾಗಿ ಕಾಲುಜಾರಿ ನೀರಿಗೆ ಬಿದ್ದು ಮೃತಪಟ್ಟಿರುವುದಾಗಿದ್ದು, ಮೃತರ ಮರಣದಲ್ಲಿ ಬೇರೆ ಯಾವುದೇ ಸಂಶಯವಿರುವುದಿಲ್ಲ ಎಂಬುದಾಗಿ ಮಂಜುನಾಥ ಮರಕಾಲರವರು ನೀಡಿದ ದೂರಿನಂತೆ ಕೋಟ ಠಾಣಾ ಅಸ್ವಾಭಾವಿಕ ಮರಣ ಕ್ರಮಾಂಕ 51/2014 ಕಲಂ 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

No comments: