ಮನುಷ್ಯ ಕಾಣೆ ಪ್ರಕರಣ
- ಉಡುಪಿ: ಪಿರ್ಯಾದಿದಾರರಾದ ಶ್ರೀಮತಿ ವಸಂತಿ (42), ವಾಸ ಡಿಸಿಎಂ ಕಾಲೋನಿ ಕುಂಜಿಬೆಟ್ಟು ಶಿವಳ್ಳಿ ಗ್ರಾಮ ಉಡುಪಿ ತಾಲೂಕು ಇವರ ಗಂಡ ರಾಜೇಶ್ (38) ಎಂಬವರೊಂದಿಗೆ 4 ವರ್ಷಗಳ ಹಿಂದೆ ಮದುವೆಯಾಗಿದ್ದು ರಾಜೇಶ್ ರವರು ಟೈಲ್ಸ್ ಫಿಟಿಂಗ್ ಕೆಲಸ ಮಾಡಿಕೊಂಡಿದ್ದು ದಿನಾಂಕ 11/11/2014 ರಂದು ಬೆಳಗ್ಗೆ 09:00 ಗಂಟೆಗೆ ಕೆಲಸಕ್ಕೆಂದು ಹೋದವರು ಮರಳಿ ವಾಪಾಸು ಮನೆಗೆ ಬಂದಿರುವುದಿಲ್ಲ. ನಂತರ ಪಿರ್ಯಾದಿದಾರರ ಗಂಡನ ಬಗ್ಗೆ ಸಂಬಂಧಿಕರಲ್ಲಿ ಪತ್ತೆಗೆ ವಿಚಾರಿಸಿದಲ್ಲಿ ಇಲ್ಲಿಯವರೆಗೆ ಪತ್ತೆಯಾಗಿರುವುದಿಲ್ಲ ಅವರು ಬಳಸುತ್ತಿದ್ದ ಮೊಬೈಲ್ಗೆ ಕರೆ ಮಾಡಿದಲ್ಲಿ ಸ್ವೀಚ್ ಆಫ್ ಆಗಿದ್ದು ಇದುವರೆಗೆ ಪ್ರತಿಕ್ರಿಯಿಸಿರುವುದಿಲ್ಲ. ಎಂಬುದಾಗಿ ಶ್ರೀಮತಿ ವಸಂತಿ ಇವರು ನೀಡಿದ ದೂರಿನಂತೆ ಉಡುಪಿ ನಗರ ಠಾಣಾ ಅಪರಾಧ ಕ್ರಮಾಂಕ 336/14 ಕಲಂ ಮನುಷ್ಯ ಕಾಣೆಯಂತೆ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತದೆ.
- ಕುಂದಾಪುರ: ಪಿರ್ಯಾದಿದಾರರಾದ ಶ್ರೀಮತಿ ಶಕುಂತಳ (35), ತಂದೆ ಭೀಮ, ವಾಸ ಹೊಳೆ ಕಟ್ಟು, ಕುಂಬಾಶಿ ಗ್ರಾಮ ಕುಂದಾಪುರ ಇವರು ವಕ್ವಾಡಿ ಎ.ಕೆ. ಟೈಲ್ಸ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡಿಕೊಂಡಿದ್ದು, ಶಕುಂತಳರವರ ತಂದೆ-ತಾಯಿಗೆ ಒಬ್ಬಳೆ ಹೆಣ್ಣು ಮಗಳಾಗಿದ್ದು, ಪಿರ್ಯಾದಿದಾರರ ತಾಯಿ ಸುಮಾರು 70 ವರ್ಷ ಪ್ರಾಯದ ಶ್ರೀಮತಿ ಲಕ್ಷ್ಮೀ ಎಂಬವರು ಮರೆವು ಹಾಗೂ ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದು, ಈ ಬಗ್ಗೆ ಚಿಕಿತ್ಸೆ ಕೊಡಿಸಿದರೂ ಗುಣಮುಖರಾಗದೇ ಇದ್ದು, ಯಾವಾಗಲೂ ಮನೆಯಿಂದ ಹೊರಗೆ ಹೋದವರು 2-3 ದಿನಗಳ ಕಳೆದು ಮನೆಗೆ ಬರುತ್ತಿದ್ದು, ದಿನಾಂಕ 22/11/2014 ರಂದು ಸಂಜೆ 06:00 ಗಂಟೆಗೆ ಮನೆಯಿಂದ ಹೊರಗೆ ಹೋದವರು ಈ ದಿನ ದಿನಾಂಕ 24/11/2014ರಂದು ಸಂಜೆ 5:30ಗಂಟೆಗೆ ಪಿರ್ಯಾಧಿದಾರರ ಪರಿಚಯದ ಸುರೇಶ್ ಎಂಬವರು ಪೋನ್ ಮಾಡಿ ತಾಯಿ ಮೃತ ಶರೀರ ಕುಂಬಾಶಿ ಗ್ರಾಮದ ಚಿಕ್ಕುಕೆರೆ ಎಂಬಲ್ಲಿ ಇರುವುದಾಗಿ ತಿಳಿಸಿದ್ದು, ಪಿರ್ಯಾದಿದಾರರ ತಾಯಿ ಮಾನಸಿಕ ಕಾಯಿಲೆಯಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಚಿಕ್ಕುಕೆರೆ ಹಾರಿ ಆತ್ಮ ಹತ್ಯೆ ಮಾಡಿಕೊಂಡಿರುವುದಾಗಿದೆ. ಎಂಬುದಾಗಿ ಶಕುಂತಳ ಇವರು ನೀಡಿದ ದೂರಿನಂತೆ ಕುಂದಾಪುರ ಠಾಣಾ ಅಪರಾಧ ಕ್ರಮಾಂಕ 62 /2014 ಕಲಂ. 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತದೆ.
No comments:
Post a Comment