ಅಪಘಾತ ಪ್ರಕರಣ
- ಪಡುಬಿದ್ರಿ: ಪಿರ್ಯಾದಿದಾರರಾದ ವಿಶ್ವನಾಥ (41) ತಂದೆ ದಿ. ಸುಂದರ ಕೋಟ್ಯಾನ್, ಬುಧಗಿ, ದೊಡ್ಡಣ್ಣಗುಡ್ಡೆ, ಉಡುಪಿ. ಇವರು ದಿನಾಂಕ 23.11.2014 ರಂದು ರಾತ್ರಿ ತನ್ನ ಕಛೇರಿ ಕೆಲಸ ಮುಗಿಸಿ ತನ್ನ ಕಾರಿನಲ್ಲಿ ಎರ್ಮಾಳಿನಿಂದ ಉಡುಪಿಯಲ್ಲಿರುವ ತನ್ನ ಮನೆ ಕಡೆಗೆ ಹೋಗುತ್ತಿರುವಾಗ ರಾತ್ರಿ ಸುಮಾರು 10.05 ಗಂಟೆಗೆ ಎರ್ಮಾಳು ಬುನಯ್ಯಾ ಹೌಸ್ ಬಳಿ ತಲುಪುವಾಗ ಪಿರ್ಯಾದಿದಾರರ ಎದುರಿನಲ್ಲಿ ಓರ್ವ ಸ್ಕೂಟರ್ ಸವಾರ ಸಂದೀಪ್, C/o ಬುಧಗಿ ಸರ್ವೀಸ್ಸ್ಟೇಶನ್, ಬಡಾ ಎರ್ಮಾಳ್, ಉಡುಪಿ ಇವರು ತನ್ನ ಸ್ಕೂಟರ್ನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ರಸ್ತೆಯ ತೀರಾ ಪಶ್ಚಿಮಕ್ಕೆ ಮಣ್ಣುರಸ್ತೆಗೆ ಚಲಾಯಿಸಿದ ಪರಿಣಾಮ ಸ್ಕೂಟರ್ ಸ್ಕಿಡ್ ಆಗಿ ಸವಾರನು ಸ್ಕೂಟರ್ ಸಮೇತ ಮಣ್ಣು ರಸ್ತೆಗೆ ಬಿದ್ದಿದ್ದು, ಪಿರ್ಯಾದಿದಾರರು ತನ್ನ ಕಾರನ್ನು ನಿಲ್ಲಿಸಿ ಇಳಿದು ನೋಡಲಾಗಿ ಆತನು ಪಿರ್ಯಾದಿದಾರರ ಬುಧಗಿ ಸರ್ವಿಸ್ ಸ್ಟೇಷನ್ನಲ್ಲಿ ಕೆಲಸ ಮಾಡುವ ಸಂದೀಪ್ ಆಗಿದ್ದು, ಆತನನ್ನು ಉಪಚರಿಸಿ ನೋಡಲಾಗಿ ಆತನ ತಲೆಗೆ, ಕಾಲು, ಕೈಗಳಿಗೆ ರಕ್ತಗಾಯವಾಗಿದ್ದು, ಸ್ಕೂಟರ್ ಮುಂಭಾಗ ಜಖಂಗೊಂಡಿರುತ್ತದೆ. ಸ್ಕೂಟರ್ ನಂಬ್ರ ನೋಡಲಾಗಿ ಕೆಎ 20ಇಜಿ 7678 ಆಗಿರುತ್ತದೆ. ಸದ್ರಿ ಅಪಘಾತಕ್ಕೆ ಸ್ಕೂಟರ್ ನಂಬ್ರ ನೋಡಲಾಗಿ ಕೆಎ 20ಇಜಿ 7678ನೇದರ ಸವಾರ ಸಂದೀಪ್ನ ಅತೀವೇಗ ಹಾಗೂ ಅಜಾಗರೂಕತೆಯ ಚಾಲನೆಯೇ ಕಾರಣವಾಗಿದ್ದು ಎಂಬುದಾಗಿ ವಿಶ್ವನಾಥ ಇವರು ನೀಡಿದ ದೂರಿನಂತೆ ಪಡುಬಿದ್ರಿ ಠಾಣಾ ಅಪರಾಧ ಕ್ರಮಾಂಕ 123/2014 ಕಲಂ 279, 337 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತದೆ.
No comments:
Post a Comment