Friday, October 31, 2014

Daily Crimes Reported as On 31/10/2014 at 17:00 Hrs

ಜೂಜಾಟ ಪ್ರಕರಣ

  • ಹಿರಿಯಡ್ಕ: ದಿನಾಂಕ: 31/10/2014 ರಂದು ಬೆಳಿಗ್ಗೆ 5.15 ಗಂಟೆಗೆ  ಆತ್ರಾಡಿ  ಗ್ರಾಮದ ಪರೀಕ ಮಹಾಲಿಂಗೇಶ್ವರ ದೇವಸ್ಥಾನದ ಬಳಿ ಅಂದರ್ ಬಾಹರ್ ಎಂಬ ಜೂಜಾಟವನ್ನು ಆಡುತ್ತಿರುವುದಾಗಿ ಖಚಿತ ಮಾಹಿತಿ ಬಂದ ಮೇರೆಗೆ ರಫೀಕ್ ಎಂ ಪೊಲೀಸ್ ನಿರೀಕ್ಷಕರು ಹಿರಿಯಡ್ಕ ಪೊಲೀಸ್ ಠಾಣೆ  ಇವರು ಸಿಬ್ಬಂದಿಯವರೊಂದಿಗೆ  ಸ್ಥಳಕ್ಕೆ ಹೋಗಿ ದಾಳಿ ನಡೆಸಿ ಆರೋಪಿತ 1] ಪ್ರವೀಣ್ ರೈ(48), ತಂದೆ: ಬಾಲಕೃಷ್ಣ ರೈ, ವಾಸ: ಪರೀಕ ಅರಮನೆ, ಆತ್ರಾಡಿ ಗ್ರಾಮ, ಉಡುಪಿ ತಾಲೂಕು 2] ಸುಕೇಶ ರೈ (48) ತಂದೆ: ಮಂಜಯ್ಯ ಶೆಟ್ಟಿ  ವಾಸ: ಪರೀಕ ಅರಮನೆ, ಆತ್ರಾಡಿ ,ಉಡುಪಿ ತಾಲೂಕು  ಮತ್ತು  3] ಸುಪಾಲ್ ರೈ, ತಂದೆ:ಮಂಜಯ್ಯ ರೈ,  ವಾಸ: ಪರೀಕ ಅರಮನೆ, ಆತ್ರಾಡಿ  ಗ್ರಾಮ ಉಡುಪಿ ತಾಲೂಕು ಇವರನ್ನು ವಶಕ್ಕೆ ಪಡೆದು ಜೂಜಾಟಕ್ಕೆ ಬಳಸಿದ ನಗದು ಹಣ ರೂಪಾಯಿ 16,380/-,  ಇಸ್ಪೀಟು ಎಲೆಗಳು- 52, ಮತ್ತು ನೆಲಕ್ಕೆ ಹಳೇ ಪ್ಲಾಸ್ಟಿಕ್ ಚೀಲ-1, ಕ್ಯಾಂಡೆಲ್ -1 ಅನ್ನು  ಸ್ವಾಧೀನಪಡಿಸಿಕೊಂಡು ಹಿರಿಯಡ್ಕ ಠಾಣೆಯಲ್ಲಿ ಅಪರಾಧ ಕ್ರಮಾಂಕ 101/2014 U/s 87ಕೆ.ಪಿ ಕಾಯಿದೆಯಂತೆ ಪ್ರಕರಣ ದಾಖಲಿಸಿರುವುದಾಗಿದೆ.

ಮನುಷ್ಯ ಕಾಣೆ ಪ್ರಕರಣ

  • ಶಂಕರನಾರಾಯಣ: ಚನ್ನೇಗೌಡ (59) ಎಂಬವರು ಕುಂದಾಪುರ ತಾಲೂಕು ಸಿದ್ಧಾಪುರ ಗ್ರಾಮದ ತನ್ನ ಮನೆಯಿಂದ ದಿನಾಂಕ: 30/10/2014 ರಂದು 11.45 ಗಂಟೆಗೆ ಹೋದರು ತನಕ ಮನೆಗೆ ಬಾರದೆ ಕಾಣೆಯಾಗಿರುತ್ತಾರೆ. ಈ ಬಗ್ಗೆ ಶಂಕರನಾರಾಯಣ ಠಾಣೆಯಲ್ಲಿ ಅಪರಾಧ ಕ್ರಮಾಂಕ 166/14 ಕಲಂ: ಮನುಷ್ಯ ಕಾಣೆಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಕಾರ್ಕಳ: ಕೃಷ್ಣ ಪೂಜಾರಿ ಎಂಬವರು ದಿನಾಂಕ: 29/10/2014 ರಂದು ಬೆಳಿಗ್ಗೆ 9:00 ಗಂಟೆಗೆ ಕಾರ್ಕಳ ತಾಲೂಕು ಕುಕ್ಕುಂದೂರು ಗ್ರಾಮ ನಕ್ರೆ ಪೊಸನೊಟ್ಟು ಎಂಬಲ್ಲಿಂದ ಮನೆಯಿಂದ  ಹೋದವರು ವಾಪಾಸ್ಸು ಮನೆಗೆ ಬಾರದೇ ಇದ್ದು ದಿನಾಂಕ: 30/10/2014 ರಂದು ಬೆಳಿಗ್ಗೆ 7:30 ಅವರ ಮೃತದೇಹವು ಮನೆ ಸಮೀಪದ ಬಾವಿಯಲ್ಲಿ ಪತ್ತೆಯಾಗಿರುತ್ತದೆಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣಾ ಅಸ್ವಾಭಾವಿಕ ಮರಣ ಪ್ರಕರಣ ಕ್ರಮಾಂಕ 46/2014 ಕಲಂ 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 

No comments: