ಕಳವು ಪ್ರಕರಣ
- ಉಡುಪಿ: ಫಿರ್ಯಾದಿದಾರರಾದ ದೀಪಕ್ ಆಚಾರ್ಯ ತಂದೆ: ಶ್ರೀಪತಿ ಆಚಾರ್ಯ ವಾಸ: ಮನೆ ನಂ 7-69 ನಾಡು ಮೇಲ್ಮನೆ ನಾಡು ನರಸಿಂಗೆ 80ನೇ ಬಡಗುಬೆಟ್ಟು ಗ್ರಾಮ ಪರ್ಕಳ ಅಂಚೆ ಉಡುಪಿ ತಾಲೂಕು ಎಂಬವರು ತಮ್ಮ KA 20 EF 1224 ನೇ ನಂಬ್ರದ ಹೊಂಡಾ ಶೈನ್ ಬೈಕನ್ನು ದಿನಾಂಕ 26/10/2014 ರಂದು ಮಧ್ಯಾಹ್ನ 3:10 ಗಂಟೆಗೆ ಕರಾವಳಿ ಬೈಪಾಸ್ ಹತ್ತಿರದ ಗಂಗೋತ್ರಿ ಬಾರ್ ಎದುರು ಬೈಕಿಗೆ ಹ್ಯಾಂಡ್ ಲ್ಯಾಕ್ ಮಾಡದೇ ನಿಲ್ಲಿಸಿ ಹೋಗಿದ್ದು 3:50 ಗಂಟೆಗೆ ವಾಪಾಸು ಬಂದು ನೋಡಿದಾಗ ಬೈಕ್ ನಿಲ್ಲಿಸಿದ್ದ ಜಾಗದಲ್ಲಿ ಇಲ್ಲದೇ ಇದ್ದು, ಆಸುಪಾಸಿನಲ್ಲಿ ಹುಡುಕಾಡಿದರು ಪತ್ತೆಯಾಗಿರುವುದಿಲ್ಲ ಸದ್ರಿ ಬೈಕಿನಲ್ಲಿ ಆರ್. ಸಿ ಪುಸ್ತಕ, ಕರ್ನಾಟಕ ಬ್ಯಾಂಕಿನ ಎಟಿಎಮ್ ಕಾರ್ಡು ಮತ್ತು ಡ್ರೈವಿಂಗ್ ಲೈಸೆನ್ಸ್ ಇದ್ದು ಪಿರ್ಯಾದಿದಾರರ KA20EF1224 ನೇ ನಂಬ್ರದ ಹೊಂಡಾ ಶೈನ್ ಬೈಕನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು ಸದ್ರಿ ಬೈಕಿನ ಅಂದಾಜು ಮೌಲ್ಯ 40,000/- ರೂಪಾಯಿಗಳಾಗಿತ್ತದೆ ಎಂಬುದಾಗಿ ದೀಪಕ್ ಆಚಾರ್ಯ ರವರು ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 313/2014 ಕಲಂ: 379 ಐಪಿಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.
- ಪಡುಬಿದ್ರಿ: ದಿನಾಂಕ 31.10.2014 ರಂದು 03.30 ಗಂಟೆಗೆ ಉಡುಪಿ ತಾಲೂಕು ಬಡಾ ಎರ್ಮಾಳ್ ಗ್ರಾಮದ ರಾಮ್ದೇವ್ ಹೊಟೇಲ್ ಬಳಿ ರಾ.ಹೆ. 66 ರಲ್ಲಿ ಆರೋಪಿ ಲಾರಿ ನಂಬ್ರ ಎಂ ಪಿ 09 ಎಫ್ 7560 ನ್ನು ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ರಸ್ತೆ ಬದಿಯಲ್ಲಿ ಮಣ್ಣು ರಸ್ತೆಯಲ್ಲಿ ನಿಲ್ಲಿಸಿದ್ದ ಪಿರ್ಯಾಧಿದಾರರಾದ ಉಮೇಶ್ ಪಿ, (30), ತಂದೆ: ಜನಾರ್ಧನ ಪಿ,ವಾಸ: ಪುತ್ತೀಯ ಕೊವಿಲಗಮ್ ಪರಂಬ,ಚಾಲಾಪುರಂ ಅಂಚೆ, ಕೊಯಿಕೋಡಿ ತಾಲೂಕು ಮತ್ತು ಜಿಲ್ಲೆ, ಕೇರಳ ರಾಜ್ಯ ಎಂಬವರ ಲಾರಿ ನಂಬ್ರ ಕೆಎ 01 ಎಡಿ 7066 ರ ಹಿಂಬದಿ ಡಿಕ್ಕಿ ಹೊಡೆದು ಅಪಘಾತವೆಸಗಿದ ಪರಿಣಾಮ ಎರಡೂ ವಾಹನಗಳು ಜಖಂಗೊಂಡಿದ್ದು ಆರೋಪಿಯು ಚಲಾಯಿಸುತ್ತಿದ್ದ ಲಾರಿಯಲ್ಲಿದ್ದ ದಿನೇಶ್ ಚೌದರಿ ಎಂಬವರು ಸ್ಥಳದಲ್ಲಿಯೇ ಮೃತಪಟ್ಟಿದ್ದು, ವಿನೋದ್ ಚೌಧರ್ ಮತ್ತು ಜಿತಿನ್ ಚೌಧರಿ ಎಂವರಿಗೆ ಗಾಯವಾಗಿರುತ್ತದೆ. ಗಾಯಾಳುಗಳನ್ನು ಚಿಕಿತ್ಸೆ ಬಗ್ಗೆ ಉಡುಪಿ ಕಡೆಗೆ ಕರೆದುಕೊಂಡು ಹೋಗಿದ್ದು, ಮೃತನ ಮೃತದೇಹವನ್ನು ಪಡುಬಿದ್ರಿ ಪಿ.ಹೆಚ್.ಸಿ ಶವಗಾರದಲ್ಲಿ ಇರಿಸಲಾಗಿದೆ ಎಂಬುದಾಗಿ ಉಮೇಶ್ ಪಿ ರವರು ನೀಡಿದ ದೂರಿನಂತೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 111/2014 ಕಲಂ: 279, 304(ಎ) ಐಪಿಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.
- ಬೈಂದೂರು: ದಿನಾಂಕ 30/10/2014 ರಂದು ಸಂಜೆ 5:45 ಗಂಟೆಗೆ ಪಿರ್ಯಾಧಿದಾರರಾದ ರಾಮ (24) ತಂದೆ: ನಾರಾಯಣ ಪೂಜಾರಿ ವಾಸ: ಕಲ್ಲಿಕೋಣೆ ಕೋಸಳ್ಳಿ ಯಡ್ತರೆ ಗ್ರಾಮ ಕುಂದಾಪುರ ತಾಲೂಕು ಎಂಬವರ ತಮ್ಮ ಲಕ್ಷ್ಮಣನು ಕುಂದಾಪುರ ತಾಲೂಕು ಶಿರೂರು ಗ್ರಾಮದ ಶಿರೂರು ಕಮರ್ಶಿಯಲ್ ಚೆಕ್ ಪೋಸ್ಟ ಬಳಿ ಹಾದು ಹೋಗುವ ರಾಹೆ 66ರ ಪಕ್ಕದಲ್ಲಿ ಮಣ್ಣು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವ ಸಮಯ ಭಟ್ಕಳ ಕಡೆಯಿಂದ ಬೈಂದೂರು ಕಡೆಗೆ ಕೆ.ಎ 20 ಇಇ 8407 ನೇ ಮೋಟಾರ್ ಸೈಕಲ್ ಅನ್ನು ಅದರ ಸವಾರ ಚಂದ್ರ ಪುಜಾರಿ ಎಂಬಾತನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಹಿಂದಿನಿಂದ ಡಿಕ್ಕಿಹೊಡೆದ ಪರಿಣಾಮ ಲಕ್ಷ್ಮಣನು ಮಣ್ಣು ರಸ್ತೆಗೆ ಬಿದ್ದು ಆತನ ಬಲಕಾಲಿಗೆ ತೀವೃ ಸ್ವರೂಪದ ಗಾಯ ಆಗಿರುತ್ತದೆ. ಆತನ್ನು ಚಿಕಿತ್ಸೆಯ ಬಗ್ಗೆ ಕುಂದಾಪುರದ ಚಿನ್ಮಯಿ ಆಸ್ಪತ್ರೆಗೆ ಒಳರೋಗಿಯಾಗಿ ದಾಖಲಿಸಿರುವುದಾಗಿದೆ ಎಂಬುದಾಗಿ ರಾಮ ರವರು ನೀಡಿದ ದೂರಿನಂತೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 223/2014 ಕಲಂ: 279, 338 ಐಪಿಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.
- ಮಲ್ಪೆ: ಪಿರ್ಯಾದಿದಾರರಾದ ರಾಜೇಶ್ (28) ತಂದೆ: ಕೃಷ್ಣ ಪೂಜಾರಿ ವಾಸ: ವಸಂತಿ ನಿಲಯ, ಕೆರೆಮಠದ ಬಳಿ, ಮೂಡಬೆಟ್ಟು, ಕೊಡವೂರು ಗ್ರಾಮ ಉಡುಪಿ ತಾಲೂಕು ಎಂಬವರ ತಂದೆಯಾದ ಕೃಷ್ಣ ಪೂಜಾರಿ ಪ್ರಾಯ 58 ವರ್ಷ ಎಂಬವರು ಕುಡಿತದ ಚಟವನ್ನು ಹೊಂದಿದ್ದು, ದಿನಾಂಕ 30/10/2014 ರಂದು ಸಂಜೆ ಎಂದಿನಂತೆ ಮಧ್ಯಪಾನ ಮಾಡಿ ಮನೆಗೆ ಬಂದಿದ್ದು ರಾತ್ರಿ 8:00 ಗಂಟೆಗೆ ಮನೆಯವರೊಂದಿಗೆ ಊಟ ಮಾಡಿ ಎಂದಿನಂತೆ ಮಲಗಲು ಕೊಡವೂರು ಗ್ರಾಮದ ಮೂಡಬೆಟ್ಟು ಕೆರೆಮಟದ ಬಳಿ, ಇರುವ ತಮ್ಮ ಹಳೆ ಪಾಳು ಬಿದ್ದ ಮನೆಗೆ ಹೋಗಿದ್ದು ಪಿರ್ಯದಿದಾರರು ರಾತ್ರಿ 9:30 ಗಂಟೆಗೆ ನೋಡುವಾಗ ಕೃಷ್ಣ ಪೂಜಾರಿ (58) ರವರು ಮಾಡಿನ ಜಂತಿಗೆ ನೈಲಾನ್ ಹಗ್ಗದಿಂದ ಕುತ್ತಿಗೆಗೆ ನೇಣು ಬಿಗಿದು ನೇತಾಡುತ್ತಿದ್ದು ಸದ್ರಿಯವರನ್ನು ಚಿಕಿತ್ಸೆಗೆ ಉಡುಪಿಯ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಲ್ಲಿ ಮೃತಪಟ್ಟಿರುವುದಾಗಿದೆ. ಮೃತರು ಮದ್ಯಪಾನ ಸೇವಿಸುವ ಚಟವನ್ನು ಹೊಂದಿದ್ದು, ಮಾನಸಿಕ ಸ್ಥೀಮಿತ ಕಳೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿರಬಹುದಾಗಿದೆ ಎಂಬುದಾಗಿ ರಾಜೇಶ್ ರವರು ನೀಡಿದ ದೂರಿನಂತೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಸಂಖ್ಯೆ 51/2014 ಕಲಂ 174 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.
No comments:
Post a Comment