Friday, October 31, 2014

Daily Crimes Reported as On 31/10/2014 at 07:00 Hrs


ಅಪಘಾತ ಪ್ರಕರಣ
  • ಕೋಟ:ಪಿರ್ಯಾದಿದಾರರಾದ ಉಮಾನಾಥ ಶೆಟ್ಟಿ (24) ತಂದೆ:ಬಿ.ಕುಶಲ ಶೆಟ್ಟಿ, ವಾಸ:ವಡ್ಡರ್ಸೆ ಹಾಡಿಮನೆ, ವಡ್ಡರ್ಸೆ ಗ್ರಾಮ, ಉಡುಪಿ ತಾಲೂಕುರವರು ದಿನಾಂಕ:29/10/2014 ರಂದು ಮಧ್ಯಾಹ್ನ 1:10 ಗಂಟೆಗೆ ತನ್ನ ಮೋಟಾರ್ ಸೈಕಲ್‌ ನಂಬ್ರ ಕೆಎ 20 ಇಎಫ್ 8820 ರ ನೇದರಲ್ಲಿ ತನ್ನ ತಾಯಿ ಲಕ್ಷ್ಮೀ ಶೆಡ್ತಿಯವರನ್ನು ಸಹಸವಾರರನ್ನಾಗಿ ಕುಳ್ಳಿರಿಸಿಕೊಂಡು ಕೋಟ-ಸೈಬ್ರಕಟ್ಟೆ ರಸ್ತೆಯಲ್ಲಿ ಕೋಟ ಹೈಸ್ಕೂಲ್ ಕಡೆಗೆ ಹೋಗುತ್ತಿರುವಾಗ ಬನ್ನಾಡಿ ಗ್ರಾಮದ ವೇಣುಗೋಪಾಲ ಶೆಟ್ಟಿಯವರ ಮನೆಯ ಎದುರು ಹೋಗುತ್ತಿರುವಾಗ ಉಮಾನಾಥ ಶೆಟ್ಟಿರವರ ಮುಂದೆ ಹೋಗುತ್ತಿದ್ದ ಕೆ ಎ 20 ಡಿ 5777 ನೇ ನಂಬ್ರದ ಬಸ್ ಚಾಲಕನು ತನ್ನ ಬಸ್ಸನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ, ಯಾವುದೇ ಮನ್ಸೂಚನೆ ನೀಡದೆ ಅಜಾಗರೂಕತೆಯಿಂದ  ನಿಲ್ಲಿಸಿದ ಪರಿಣಾಮ ಉಮಾನಾಥ ಶೆಟ್ಟಿರವರು ಚಲಾಯಿಸುತ್ತಿದ್ದ ಮೋಟಾರ್ ಸೈಕಲ್ ಬಸ್‌ನ ಹಿಂಭಾಗಕ್ಕೆ ಢಿಕ್ಕಿ ಹೊಡೆದು ಉಮಾನಾಥ ಶೆಟ್ಟಿ ಹಾಗೂ ಉಮಾನಾಥ ಶೆಟ್ಟಿರವರ ತಾಯಿ ಲಕ್ಷ್ಮೀ ಶೆಡ್ತಿ ಮೋಟಾರ್ ಸೈಕಲ್‌ ಸಮೇತ ಟಾರು ರಸ್ತೆಯ ಮೇಲೆ ಬಿದ್ದು ಉಮಾನಾಥ ಶೆಟ್ಟಿರವರಿಗೆ ಸಾದಾ ಸ್ವರೂಪದ ರಕ್ತಗಾಯ ಹಾಗೂ ಲಕ್ಷ್ಮೀ ಶೆಡ್ತಿಯವರಿಗೆ ತೀವ್ರ ಸ್ವರೂಪದ ರಕ್ತಗಾಯವಾಗಿ ಮಣಿಪಾಲ್ ಕೆ.ಎಂ.ಸಿ ಆಸ್ಪತ್ರೆಗೆ ಚಿಕಿತ್ಸೆ ಬಗ್ಗೆ ದಾಖಲಾಗಿದ್ದಾಗಿದೆ. ಈ ಬಗ್ಗೆ ಉಮಾನಾಥ ಶೆಟ್ಟಿರವರು ನೀಡಿದ ದೂರಿನಂತೆ ಕೋಟ ಠಾಣಾ ಅಪರಾಧ ಕ್ರಮಾಂಕ 211/2014 ಕಲಂ:279,337,338 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

No comments: