ಅಪಘಾತ ಪ್ರಕರಣ
- ಗಂಗೊಳ್ಳಿ:ದಿನಾಂಕ:23/10/2014ರಂದು ಪಿರ್ಯಾದಿದಾರರಾದ ಶ್ರೀಕಾಂತ್ (22) ತಂದೆ:ದಿವಂಗತ ವಸಂತ ವಾಸ:ಪೋರ್ಟಬಂಗ್ಲೆ, ಗಂಗೊಳ್ಳಿ ಗ್ರಾಮ, ಕುಂದಾಪುರ ತಾಲೂಕುರವರು ಗಂಗೊಳ್ಳಿ ಪೇಟೆಯಿಂದ ವಾಪಾಸು ಮನೆಗೆ ಬರುವರೇ ಸುಮಾರು 21:30 ಗಂಟೆಗೆ ಗಂಗೊಳ್ಳಿ ಬಾವಿಕಟ್ಟೆ ಸರ್ಕಲ್ನ ಪೂರ್ವಕಡೆ ಗಂಗೊಳ್ಳಿ ತ್ರಾಸಿ ರಸ್ತೆ ದಾಟುವರೇ ನಿಂತುಕೊಂಡಿರುವಾಗ ಗಂಗೊಳ್ಳಿ ಕಡೆಯಿಂದ ಕೆಎ 20 ಇಎಫ್ 4868 ನೇ ಮೋಟಾರು ಸೈಕಲ್ನ ಸವಾರ ರವೀಂದ್ರ ಎಂಬವರು ತನ್ನ ಬೈಕನ್ನು ಗಂಗೊಳ್ಳಿ ಕಡೆಯಿಂದ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ತೀರಾ ಬಲಕಡೆ ಬಂದು ಶ್ರೀಕಾಂತ್ರವರ ಕಾಲಿಗೆ ಢಿಕ್ಕಿ ಹೊಡೆದ ಪರಿಣಾಮ ಶ್ರೀಕಾಂತ್ರವರ ಬಲ ಕಾಲಿಗೆ ಮೂಳೆ ಮುರಿತದ ಗಾಯವಾಗಿದ್ದು, ಕುಂದಾಪುರ ಚಿನ್ಮಯಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ, ಈ ಅಫಘಾತಕ್ಕೆ ಕೆಎ 20 ಇಎಫ್ 4868ನೇ ಮೋಟಾರು ಸೈಕಲ್ ಸವಾರನ ಅತೀವೇಗ ಹಾಗೂ ಅಜಾಗರೂಕತೆಯ ಚಾಲನೆಯೇ ಕಾರಣವಾಗಿರುತ್ತದೆ.ಈ ಬಗ್ಗೆ ಶ್ರೀಕಾಂತ್ರವರು ನೀಡಿದ ದೂರಿನಂತೆ ಗಂಗೊಳ್ಳಿ ಠಾಣಾ ಅಪರಾಧ ಕ್ರಮಾಂಕ 178/2014 ಕಲಂ:279,338 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
No comments:
Post a Comment