ಅಸ್ವಾಭಾವಿಕ ಮರಣ ಪ್ರಕರಣ
- ಉಡುಪಿ: ಫಿರ್ಯಾದಿದಾರರಾದ ಸತೀಶ ಪೂಜಾರಿ (39) ತಂದೆ ದಿ: ಗುಲ್ಲ ಪೂಜಾರಿ ವಾಸ: ಬೆಳ್ಳೆ ಅಂಗಡಿ ಹತ್ತಿರ ಪಡುಬೆಳ್ಳೆ, ಬೆಳ್ಳೆ ಗ್ರಾಮ ಉಡುಪಿ ತಾಲೂಕು ಎಂಬವರ ಅಣ್ಣ ಸುಮಾರು 10 ವರ್ಷಗಳಿಂದ ಟಿ.ಬಿ ಖಾಯಿಲೆಯಿಂದ ಬಳಲುತ್ತಿದ್ದು, ದಿನಾಂಕ 26/09/14 ರಂದು ಬೆಳಿಗ್ಗೆ 11:00 ಗಂಟೆಗೆ ಫಿರ್ಯಾದಿದಾರರ ಅಣ್ಣ ಸುರೇಶ ಪೂಜಾರಿಯವರು ಉಡುಪಿ ಕೆಎಸ್ಆರ್ಟಿಸಿ ಬಸ್ಸ್ ನಿಲ್ದಾಣದ ಹತ್ತಿರ ಮಲಗಿದಲ್ಲಿಯೇ ಮೃತ ಪಟ್ಟಿದ್ದು ಉಡುಪಿ ಅಜ್ಜರಕಾಡು ಆಸ್ಪತ್ತೆಯಲ್ಲಿ ಮೃತ ದೇಹ ಇಟ್ಟಿರುವ ವಿಷಯ ತಿಳಿದು ಫಿರ್ಯಾದಿದಾರರರು ಹೋಗಿ ನೋಡಿದ್ದು ಫಿರ್ಯಾದಿದಾರರ ಅಣ್ಣ ಟಿ.ಬಿ ಖಾಯಿಲೆಯಿಂದ ಮೃತಪಟ್ಟಿದ್ದಾಗಿರುತ್ತದೆ ಎಂಬುದಾಗಿ ಸತೀಶ ಪೂಜಾರಿ ರವರು ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಸಂಖ್ಯೆ 58/2014 ಕಲಂ 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
No comments:
Post a Comment