ಕಳವು ಪ್ರಕರಣ
- ಶಂಕರನಾರಾಯಣ: ದಿನಾಂಕ 09-09-2014 ರಂದು ಸಂಜೆ 3:15 ಗಂಟೆಯಿಂದ ಅದೇ ದಿನ ಸಂಜೆ 4:30 ಗಂಟೆಯ ನಡುವಿನ ಅವದಿಯಲ್ಲಿ ಯಾರೋ ಕಳ್ಳರು ಕಳವು ಮಾಡುವ ಉದ್ದೇಶದಿಂದ ಹೊಂಚು ಹಾಕಿ ಕುಂದಾಫುರ ತಾಲೂಕು 28 ಹಾಲಾಡಿ ಗ್ರಾಮದ ಜಮದಗ್ನಿ ಎಂಬಲ್ಲಿರುವ ಪಿರ್ಯಾದಿ ರಾಘವೆಂದ್ರ ನಾಯ್ಕ(30) ತಂದೆ:- ದಿವಂಗತ ಮಲ್ಲು ನಾಯ್ಕಜನತಾ ಕಾಲೋನಿ, ಯಡ್ತಾಡಿ ಗ್ರಾಮ ಅಂಚೆ ಸೈಬ್ರಕಟ್ಟೆ ಇವರ ತಂಗಿಯ ಗಂಡನ ಮನೆಯ ಬೀಗವನ್ನು ತೆಗೆದು ಒಳ ಹೋಗಿ ಗೋದ್ರೇಜ್ನ ಲಾಕರ್ನ ಬೀಗ ತೆಗೆದು ಲಾಕರ್ನಲ್ಲಿ ಚಿನ್ನ ಇಡುವ ಬಾಕ್ಸ್ ನಲ್ಲಿದ್ದ ಒಂದು ಕಾಲು ಪವನ್ತೂಕದ ಹವಳ ಪೋಣಿಸಿದ ಚಿನ್ನದ ಸರ-1 , ಅರ್ದ ಪವನ್ತೂಕದ ಚಿನ್ನದ ಲೋಲಕ್-1 ಜೊತೆ ಮತ್ತು ಅರ್ದ ಪವನ್ ತೂಕದ ಚಿನ್ನದ ಉಂಗುರ-1 ವನ್ನು ಕಳವು ಮಾಡಿಕೊಂಡು ಹೋಗಿದ್ದು ಕಳವಾದ ಚಿನ್ನದ ಅಂದಾಜು ಬೆಲೆ ಸುಮಾರು 24,000/- ರೂಪಾಯಿ ಆಗಿರುತ್ತದೆ ಎನ್ನುವುದಾಗಿ ಶ್ರೀ ರಾಘವೇಂದ್ರ ನಾಯ್ಕ ರವರು ನೀಡಿದ ದೂರಿನಂತೆ ಶಂಕರ ನಾರಾಯಣ ಠಾಣೆಯಲ್ಲಿ ಅಪರಾಧ ಕ್ರಮಾಂಕ 136/14 ಕಲಂ:454,380 IPC ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
No comments:
Post a Comment