Thursday, September 11, 2014

Daily Crime Reports As On 11/09/2014 At 19:30 Hrs

ಅಪಘಾತ ಪ್ರಕರಣ
  • ಕುಂದಾಪುರ: ದಿನಾಂಕ 11/09/2014  ರಂದು  ಬೆಳಿಗ್ಗೆ  ಸಮಯ ಸುಮಾರು 8:45 ಗಂಟೆಗೆ ಕುಂದಾಪುರ ತಾಲೂಕು ಕೊಟೇಶ್ವರ ಗ್ರಾಮದ ಕೊಟೇಶ್ವರ ಪೆಟ್ರೋಲ್ ಬಂಕ್   ಬಳಿಯ  ಕಿನಾರಾ ಬೀಚ್‌  ರಸ್ತೆಯ ನಾಗಲ್ಯಾಂಡ್  ಹೊಟೇಲ್ ಬಳಿ ರಸ್ತೆಯಲ್ಲಿ ಆಪಾದಿತ ಗಣೇಶ  ಆಚಾರ್ ಎಂಬವರು KA19-P-5819ನೇ ಕಾರನ್ನು ಕೋಡಿ ಕಡೆಯಿಂದ ಕೊಟೇಶ್ವರ ಕಡೆಗೆ ಅತೀವೇಗ ಹಾಗೂ ಅಜಾಗರುಕತೆಯಿಂದ ಚಲಾಯಿಸಿಕೊಂಡು  ರಸ್ತೆಯ  ಬಲ ಬದಿಗೆ  ಬಂದು,   ಮನೋಜ್‌  ಎಂಬವರು ಕೊಟೇಶ್ವರ  ಪೇಟೆ  ಕಡೆಯಿಂದ ಕೋಡಿ  ಕಡೆಗೆ  ಮನೋಜ್  ಎಂಬವರು ಸವಾರಿ  ಮಾಡಿಕೊಂಡು ಹೋಗುತ್ತಿದ್ದ  KA20-V-3608 ಬೈಕ್‌  ಗೆ ಎದುರುನಿಂದ ಡಿಕ್ಕಿ  ಹೊಡೆದ ಪರಿಣಾಮ ಮನೋಜ್‌ ಅವರ  ತಲೆಗೆ, ಕೈ  ಕಾಲಿಗೆ ಹಾಗೂ  ಮೈ ಕೈ  ರಕ್ತಗಾಯ  ಹಾಗೂ  ಒಳನೋವು ಉಂಟಾಗಿ ಕೊಟೇಶ್ವರ ಎನ್‌.ಆರ್. ಆಚಾರ್ಯ ಆಸ್ಪತ್ರೆಯಲ್ಲಿ  ಚಿಕಿತ್ಸೆ ಪಡೆದು,   ಹೆಚ್ಚಿನ  ಚಿಕಿತ್ಸೆ  ಬಗ್ಗೆ  ಉಡುಪಿ  ಆದರ್ಶ  ಆಸ್ಪತ್ರೆಯಲ್ಲಿ  ಒಳ ರೋಗಿಯಾಗಿ ದಾಖಲಾಗಿರುವುದಾಗಿದೆ ಎಂಬುದಾಗಿ ನಾರಾಯಣ  ಮೊಗವೀರ  ತಂದೆ ದಿ. ಸುಬ್ಬಯ್ಯ   ಮೊಗವೀರ ವಾಸ: ಶ್ರೀ ಮಂಜುನಾಥ  ನಿವಾಸ , ಕಮ್ತಿಯಾರ್ ಬೆಟ್ಟು,ಕೊಟೇಶ್ವರ ಗ್ರಾಮ ಕುಂದಾಪುರ  ತಾಲೂಕು ಕುಂದಾಪುರರವರು ನೀಡಿದ ದೂರಿನಂತೆ ಕುಂದಾಪುರ ಸಂಚಾರ ಠಾಣೆಯಲ್ಲಿ ಅಪರಾಧ ಕ್ರಮಾಂಕ 111/2014 ಕಲಂ 279, 337 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಗಂಡಸು ಕಾಣೆ ಪ್ರಕರಣ

  • ಉಡುಪಿ: ಇಂದಿರಾ ಯು ಗಂಡ  ಟಿ.ಸುಬ್ರಹ್ಮಣ್ಯ ವಾಸ: ವಿಜಯಾ ಬ್ಯಾಂಕ್ ಬಳಿ ಸರಕಾರಿ ಬಾವಿ ಹತ್ತಿರ ಕೊರಂಗ್ರಪಾಡಿ ಉಡುಪಿರವರ ಗಂಡ ಟಿ.ಸುಬ್ರಹ್ಮಣ್ಯ (60) ರವರು ದಿನಾಂಕ 08/09/2014 ರಂದು ಬೆಳಿಗ್ಗೆ 10:00 ಗಂಟೆಗೆ ಉಡುಪಿಗೆ ಹೋಗಿ ಬರುತ್ತೇನೆಂದು ಹೋದವರು ವಾಪಾಸು ಮನೆಗೆ ಬಾರದೇ ಕಾಣೆಯಾಗಿರುತ್ತಾರೆ ಈ ಬಗ್ಗೆ ಸಂಬಂದಿಕರ ಮನೆ ಹಾಗೂ ಉಡುಪಿ ಶ್ರೀ ಕೃಷ್ಣಮಠದ ಬಳಿ, ಉಡುಪಿ ಬಸ್ ನಿಲ್ದಾಣ, ಹಾಗೂ ಕೆಲವು ಕಡೆ ಹುಡುಕಾಡಿದಲ್ಲಿ ಈ ದಿನದ ವರೆಗೆ ಪತ್ತೆಯಾಗಿರುವುದಿಲ್ಲ ಎಂಬುದಾಗಿ ಇಂದಿರಾ ಯು ರವರು ನೀಡಿದ ದೂರಿನಂತೆ ಉಡುಪಿನಗರ ಠಾಣೆಯಲ್ಲಿ ಅಪರಾಧ ಕ್ರಮಾಂಕ 272 /2014 ಕಲಂ ಗಂಡಸು ಕಾಣೆಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

No comments: