Friday, July 25, 2014

Daily Crimes Reported as On 25/07/2014 at 19:30 Hrs



ಅಪಘಾತ ಪ್ರಕರಣ

  • ಕುಂದಾಪುರ ಸಂಚಾರ: ದಿನಾಂಕ 25/07/2014 ರಂದು ಸಮಯ ಸುಮಾರು ಮಧ್ಯಾಹ್ನ  12:00 ಗಂಟೆಗೆ  ಕುಂದಾಪುರ  ತಾಲೂಕು ಬೀಜಾಡಿ ಗ್ರಾಮದ ಉಪಾದ್ಯಾಯ  ಕಾಂಪ್ಲೆಕ್ಸ್  ಬಳಿ  ರಾ.ಹೆ 66  ರಸ್ತೆಯಲ್ಲಿ,  ಆಪಾದಿತ  ಕೆ. ಸತೀಶ  ಎಂಬವರು  KA20-C-1683  ನೇ ಗೂಡ್ಸ್  ಟೆಂಪೋವನ್ನು ಕುಂದಾಪುರ  ಕಡೆಯಿಂದ   ಕುಂಭಾಶಿಕಡೆಗೆ   ಅತೀವೇಗದಿಂದ ಹಾಗೂ  ಅಜಾಗರುಕತೆಯಿಂದ ಚಲಾಯಿಸಿಕೊಂಡು   ಬಂದು  ಯಾವುದೇ  ಸೂಚನೆ   ನೀಡದೇ   ರಸ್ತೆಯ  ಬಲಬದಿಗೆ  ತಿರುಗಿಸಿದ  ಸಮಯ  ಅದೇ  ದಿಕ್ಕಿನಿಂದ  ಅಂದರೆ  ಕುಂದಾಪುರ  ಕಡೆಯಿಂದ   ಕುಂಭಾಶಿಗೆ  ಕಡೆಗೆ  ರತ್ನಾಕರ  ಕೆ.ಎನ್‌ ಎಂಬವರು KA20-EG-1168 ನೇ  ಬೈಕ್‌ ನ್ನು   ಅತೀವೇಗ  ಹಾಗೂ ಅಜಾಗರುಕತೆಯಿಂದ  ಸವಾರಿ  ಟೆಂಪೋವನ್ನು ಓವರ್  ಟೇಕ್‌‌  ಮಾಡಿದಾಗ ಟೆಂಪೋದ  ಬಲಬದಿ  ಬೈಕ್‌‌ಗೆ  ತಾಗಿ ಬೈಕ್‌  ಸವಾರ  ರಸ್ತೆಯಲ್ಲಿ ಬಿದ್ದಿದ್ದು ಬೈಕ್‌‌  ರಸ್ತೆ ಯಿಂದ  ಜಾರಿಕೊಂಡು ರಸ್ತೆಯ  ಬಲಬದಿಯ ಸಣ್ಣ ಗಿಡದ ಹತ್ತಿರದಲ್ಲಿ  ಕುಳಿತು  ಮೂತ್ರ ಮಾಡುತ್ತಿದ್ದ  ಲಿಂಗಪ್ಪ ಎಂಬವರಿಗೆ  ತಾಗಿದ  ಪರಿಣಾಮ   ಲಿಂಗಪ್ಪ  ಹಾಗೂ ರತ್ನಾಕರ  ಕೆ.ಎನ್‌    ಎಂಬವರು ಗಾಯಗೊಂಡು ಕೊಟೇಶ್ವರ  ಎನ್‌.ಆರ್‌  ಆಚಾರ್ಯ   ಆಸ್ಪತ್ರೆಗೆ  ಚಿಕಿತ್ಸೆಗೆ ಬಂದಾಗ   ಆಶ್ಪತ್ರೆಯ  ವೈದ್ಯರು ಲಿಂಗಪ್ಪ ಎಂಬವರಿಗೆ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆ  ಬಗ್ಗೆ   ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಗೆ   ಕಳುಹಿಸಿಕೊಟ್ಟಿದ್ದು,   ಗಾಯಾಳು ರತ್ನಾಕರ  ಕೆ.ಎನ್‌ ಕೊಟೇಶ್ವರ  ಎನ್‌.ಆರ್‌  ಆಚಾರ್ಯಆಸ್ಪತ್ರೆಯಲ್ಲಿ ಒಳ ರೋಗಿಯಾಗಿ  ದಾಖಲಾಗಿರುತ್ತಾರೆ. ಈ ಬಗ್ಗೆ ಗಣೇಶ ಅಚಾರಿ  (34)ತಂದೆ : ಕೃಷ್ಣಯ್ಯ  ಆಚಾರಿ ವಾಸ:   ಮುದ್ದೇರ ಕಟ್ಟೆ,  ಬೀಜಾಡಿ ಗ್ರಾಮ ಕೊಟೇಶ್ವರ  ಅಂಚೆ,  ಕುಂದಾಪುರ ತಾಲೂಕು ರವರು ನೀಡಿದ ದೂರಿನಂತೆ ಕುಂದಾಪುರ ಸಂಚಾರ ಠಾಣಾ ಕ್ರಮಾಂಕ 95/2014 279, 337, ಭಾ.ದ.ಸಂ ಯಂತೆ ಪ್ರಕರಣ ದಾಖಲಸಿಕೊಳ್ಳಲಾಗಿದೆ.     




No comments: