ಅಪಘಾತ ಪ್ರಕರಣ
- ಕುಂದಾಪುರ ಸಂಚಾರ: ದಿನಾಂಕ 25/07/2014 ರಂದು ಸಮಯ ಸುಮಾರು ಮಧ್ಯಾಹ್ನ 12:00 ಗಂಟೆಗೆ ಕುಂದಾಪುರ ತಾಲೂಕು ಬೀಜಾಡಿ ಗ್ರಾಮದ ಉಪಾದ್ಯಾಯ ಕಾಂಪ್ಲೆಕ್ಸ್ ಬಳಿ ರಾ.ಹೆ 66 ರಸ್ತೆಯಲ್ಲಿ, ಆಪಾದಿತ ಕೆ. ಸತೀಶ ಎಂಬವರು KA20-C-1683 ನೇ ಗೂಡ್ಸ್ ಟೆಂಪೋವನ್ನು ಕುಂದಾಪುರ ಕಡೆಯಿಂದ ಕುಂಭಾಶಿಯ ಕಡೆಗೆ ಅತೀವೇಗದಿಂದ ಹಾಗೂ ಅಜಾಗರುಕತೆಯಿಂದ ಚಲಾಯಿಸಿಕೊಂಡು ಬಂದು ಯಾವುದೇ ಸೂಚನೆ ನೀಡದೇ ರಸ್ತೆಯ ಬಲಬದಿಗೆ ತಿರುಗಿಸಿದ ಸಮಯ ಅದೇ ದಿಕ್ಕಿನಿಂದ ಅಂದರೆ ಕುಂದಾಪುರ ಕಡೆಯಿಂದ ಕುಂಭಾಶಿಗೆ ಕಡೆಗೆ ರತ್ನಾಕರ ಕೆ.ಎನ್ ಎಂಬವರು KA20-EG-1168 ನೇ ಬೈಕ್ ನ್ನು ಅತೀವೇಗ ಹಾಗೂ ಅಜಾಗರುಕತೆಯಿಂದ ಸವಾರಿ ಟೆಂಪೋವನ್ನು ಓವರ್ ಟೇಕ್ ಮಾಡಿದಾಗ ಟೆಂಪೋದ ಬಲಬದಿ ಬೈಕ್ಗೆ ತಾಗಿ ಬೈಕ್ ಸವಾರ ರಸ್ತೆಯಲ್ಲಿ ಬಿದ್ದಿದ್ದು ಬೈಕ್ ರಸ್ತೆ ಯಿಂದ ಜಾರಿಕೊಂಡು ರಸ್ತೆಯ ಬಲಬದಿಯ ಸಣ್ಣ ಗಿಡದ ಹತ್ತಿರದಲ್ಲಿ ಕುಳಿತು ಮೂತ್ರ ಮಾಡುತ್ತಿದ್ದ ಲಿಂಗಪ್ಪ ಎಂಬವರಿಗೆ ತಾಗಿದ ಪರಿಣಾಮ ಲಿಂಗಪ್ಪ ಹಾಗೂ ರತ್ನಾಕರ ಕೆ.ಎನ್ ಎಂಬವರು ಗಾಯಗೊಂಡು ಕೊಟೇಶ್ವರ ಎನ್.ಆರ್ ಆಚಾರ್ಯ ಆಸ್ಪತ್ರೆಗೆ ಚಿಕಿತ್ಸೆಗೆ ಬಂದಾಗ ಆಶ್ಪತ್ರೆಯ ವೈದ್ಯರು ಲಿಂಗಪ್ಪ ಎಂಬವರಿಗೆ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆ ಬಗ್ಗೆ ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದು, ಗಾಯಾಳು ರತ್ನಾಕರ ಕೆ.ಎನ್ ಕೊಟೇಶ್ವರ ಎನ್.ಆರ್ ಆಚಾರ್ಯಆಸ್ಪತ್ರೆಯಲ್ಲಿ ಒಳ ರೋಗಿಯಾಗಿ ದಾಖಲಾಗಿರುತ್ತಾರೆ. ಈ ಬಗ್ಗೆ ಗಣೇಶ ಅಚಾರಿ (34)ತಂದೆ : ಕೃಷ್ಣಯ್ಯ ಆಚಾರಿ ವಾಸ: ಮುದ್ದೇರ ಕಟ್ಟೆ, ಬೀಜಾಡಿ ಗ್ರಾಮ ಕೊಟೇಶ್ವರ ಅಂಚೆ, ಕುಂದಾಪುರ ತಾಲೂಕು ರವರು ನೀಡಿದ ದೂರಿನಂತೆ ಕುಂದಾಪುರ ಸಂಚಾರ ಠಾಣಾ ಕ್ರಮಾಂಕ 95/2014 279, 337, ಭಾ.ದ.ಸಂ ಯಂತೆ ಪ್ರಕರಣ ದಾಖಲಸಿಕೊಳ್ಳಲಾಗಿದೆ.
No comments:
Post a Comment