Saturday, July 26, 2014

Daily Crime Reported As On 26/07/2014 At 07:00 Hrs



ಹಲ್ಲೆ ಪ್ರಕರಣ
  • ಮಣಿಪಾಲ: ದಿನಾಂಕ 25/07/2014 ರಂದು 22:45 ಗಂಟೆಗೆ ಉಡುಪಿ ತಾಲೂಕು ಹೆರ್ಗಾ ಗ್ರಾಮದ ಈಶ್ವರ ನಗರದಲ್ಲಿರುವ ಡಿ.ಟಿ ಬಾರ್‌ ಬಳಿ 5 ರಿಂದ 6 ಜನ ಅಪರಿಚಿತರು ದೊಣ್ಣೆ ಹಿಡಿದುಕೊಂಡು ಅಕ್ರಮ ಕೂಟ ಸೇರಿ ಪಿರ್ಯಾದುದಾರರಾದ  ದೇಬರಾಜ್‌ ಆದಿತ್ಯ ರಾಯ್‌ (23), ತಂದೆ ಡಾ| ದೇಬಾಶಿಶ್‌, ವಾಸ ರೂಮ್ ನಂಬ್ರ 404, ವುಡ್‌ ವಿನ್ಸ್‌‌‌ ಅಪಾರ್ಟ್‌ಮೆಂಟ್‌, ಎಂಡ್‌ ಪಾಯಿಂಟ್ ರಸ್ತೆ, ಮಣಿಪಾಲ ಇವರ ಮೇಲೆ ಹಲ್ಲೆ ನಡೆಸಿದ್ದು, ಪರಿಣಾಮ ಎಡಕೈಗೆ ಬಾಸುಂಡೆ ಹಾಗೂ ಜಜ್ಜಿದ ಒಳ ನೋವುಂಟಾಗಿರುತ್ತದೆ. ಮುಖಕ್ಕೆ ಗುದ್ದಿದ ನೋವುಂಟಾಗಿರುತ್ತದೆ ಎಂಬುದಾಗಿ ದೇಬರಾಜ್‌ ಆದಿತ್ಯ ರಾಯ್‌ ಇವರು ನೀಡಿದ ದೂರಿನಂತೆ  ಮಣಿಪಾಲ ಠಾಣಾ ಅಪರಾಧ ಕ್ರಮಾಂಕ 123/14 ಕಲಂ 143, 147, 148, 324 ಜೊತೆಗೆ 149  ಐ.ಪಿ.ಸಿಯಂತೆ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತದೆ.

No comments: