Saturday, July 26, 2014

Daily Crime Reports as on 26/07/2014 at 17:00 Hrs



ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಮೃತ ಪಟ್ಟ ಪ್ರಕರಣ

  • ಕೋಟ: ಪಿರ್ಯಾದಿದಾರರಾದ ಅವಿನಾಶ್ ಸುವರ್ಣ (23) ತಂದೆ ಪುರಂದರ ಪುತ್ರನ್ ವಾಸ ಸಾಲಿಕೆರೆ ಹಂದಾಡಿ ಗ್ರಾಮ ಉಡುಪಿ ತಾಲುಕು ಎಂಬವರ ಮಾವ ಜಯಕರ ಸುವರ್ಣ ಪ್ರಾಯ 32 ವರ್ಷ ಎಂಬವರು ತನ್ನ ಅಣ್ಣನಾದ ಸುರೇಶ ಸುವರ್ಣ ಎಂಬವರೊಂದಿಗೆ ದಿನಾಂಕ 23/07/2014 ರಂದು ಬೆಳಿಗ್ಗೆ 9:೦೦ ಗಂಟೆಗೆ ಹಾರಾಡಿಯ ಸೀತಾ ನದಿಯಲ್ಲಿ ದೋಣೆಯಲ್ಲಿ ಮೀನು ಹಿಡಿಯಲು ಹೋದವರು ನೀರಿನ ಸೆಳೆತಕ್ಕೆ ಸಿಕ್ಕಿ ದೋಣಿ ಸಮೇತ ನೀರಿನಲ್ಲಿ ಮುಳುಗಿ ಕಾಣೆಯಾಗಿದ್ದು ಕಾಣೆಯಾದವಪೈಕಿ ಸುರೇಶ ಸುವರ್ಣ ಎಂಬವರ ಮೃತ ಶರೀರವು ದಿನಾಂಕ 25/07/2014 ರಂದು ಬೆಳಿಗ್ಗೆ 07:00 ಗಂಟೆಗೆ ಕೋಡಿ ತಲೆಯ ಸಮುದ್ರ ತೀರದಲ್ಲಿ ಪತ್ತೆಯಾಗಿರುತ್ತದೆ. ಕಾಣೆಯಾಗಿದ್ದ ಜಯಕರ ಸುವರ್ಣ ಎಂಬವರ ಮೃತ ಶರೀರವು ಪಾರಂಪಳ್ಳಿ ಪಡುಕೆರೆ ಎಂಬಲ್ಲಿ ಸಮುದ್ರ ತೀರದಲ್ಲಿ ದಿನಾಂಕ 26/07/2014 ರಂದು ಪತ್ತೆಯಾಗಿರುತ್ತದೆ. ಮೃತರು ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಮೃತ ಪಟ್ಟಿರುವುದಾಗಿದೆ ಎಂಬುದಾಗಿ ಅವಿನಾಶ್ ಸುವರ್ಣ ರವರು ನೀಡಿದ ದೂರಿನಂತೆ ಕೋಟ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಸಂಖ್ಯೆ 36/2014 ಕಲಂ 174 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

No comments: