ಅಪಘಾತ ಪ್ರಕರಣ
- ಬ್ರಹ್ಮಾವರ: ದಿನಾಂಕ 23/07/2014 ರಂದು ಬೆಳಿಗ್ಗೆ ಸುಮಾರು 04:30 ಗಂಟೆ ಸಮಯಕ್ಕೆ ವಾರಂಬಳ್ಳಿ ಗ್ರಾಮದ ಬ್ರಹ್ಮಾವರ ಆಕಾಶವಾಣಿ ಜಂಕ್ಷನ್ ಬಳಿ ಕೆಎ-27ಎ-215 ನೇ ಲಾರಿ ಚಾಲಕನು ತನ್ನ ಲಾರಿಯನ್ನು ಬಾರ್ಕೂರು ಕಡೆಯಿಂದ ಬ್ರಹ್ಮಾವರ ಕಡೆಗೆ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಆಕಾಶವಾಣಿ ಜಂಕ್ಷನ್ ಬಳಿ ಮೆಸ್ಕಾಂ ಗೆ ಸೇರಿದ ಕಂಬ ಜಿ.ಒ.ಎಸ್ ಮತ್ತು ಡಿಪಿ ಸ್ಟ್ರಕ್ಟರ್ ಗೆ ಢಿಕ್ಕಿ ಹೊಡೆದ ಪರಿಣಾಮ ಮೆಸ್ಕಾಂ ಗೆ 50,000/- ನಷ್ಟ ಉಂಟುಮಾಡಿದ್ದಲ್ಲದೇ ಲಾರಿ ಮಗುಚಿಬಿದ್ದು ಜಖಂ ಗೊಂಡಿರುತ್ತದೆ.ಈ ಬಗ್ಗೆ ದಿವಾಕರ ಎಸ್ ಸಹಾಯಕ ಇಂಜಿನಿಯರ್ ಬ್ರಹ್ಮಾವರ ಶಾಖೆ ರವರು ನೀಡಿದ ದೂರಿನಂತೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 147/2014 ಕಲಂ 279, ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
- ಕೋಟ: ಪಿರ್ಯಾದಿ ಗಣೇಶ ಪೂಜಾರಿ(30)ತಂದೆ:ಶಂಕರ ಪೂಜಾರಿ ವಾಸ: ರಾಮಚಂದ್ರ ನಿಲಯ ಗೋಪಾಡಿ, ಬಿಜಾಡಿ ಗ್ರಾಮ ಕುಂದಾಪುರ ತಾಲುಕು ಎಂಬವ ರ ತಂದೆ ಶಂಕರ ಪೂಜಾರಿ(80)ರವರು ದಿನಾಂಕ-23/07/2014 ರಂದು ತನ್ನ ಅಕ್ಕ ಸೋಮಕ್ಕನ ಮೃತ ಶರೀರದ ದಹನದ ಬಳಿಕ ತನ್ನ ಸಂಬಂಧಿಕರೊಂದಿಗೆ ಸೇರಿಕೊಂಡು ಮದ್ಯಾಹ್ನ 1:30 ಗಂಟೆಗೆ ಸುಮಾರಿಗೆ ಉಡುಪಿ ತಾಲೂಕು ಕೋಟತಟ್ಟು ಗ್ರಾಮದ ಕೋಟ ಅಂಬಾಗಿಲು ಕೆರೆಯಲ್ಲಿ ಸ್ನಾನ ಮಾಡಲು ಕೆರೆಗೆ ಇಳಿದವರು ಈಜುತ್ತಾ ಮುಂದಕ್ಕೆ ಹೋದವರು ಸುಸ್ತಾಗಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾಗಿರುತ್ತದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಕ್ರಮಾಂಕ 34/2014 ಕಲಂ 174 ಸಿ.ಆರ್. ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
No comments:
Post a Comment