ಹಲ್ಲೆ ಪ್ರಕರಣ
- ಉಡುಪಿ: ದಿನಾಂಕ 02-02-14ರಂದು ಸಂಜೆ 7:00ಗಂಟೆಗೆ ಪಿರ್ಯಾದಿದಾರರಾದ ಸೋಮಣ್ಣ, ತಂದೆ: ಬಸಪ್ಪ, ವಾಸ: ಹನುಮಂತನಗರ, ನಾಗಬನದ ಹತ್ತಿರ, ಪುತ್ತೂರು ಗ್ರಾಮ, ಉಡುಪಿರವರುಗಳು ಮಕ್ಕಳು ಇತರ ಮಕ್ಕಳೊಂದಿಗೆ ನೆರೆಮನೆಯ ಎದುರುಗಡೆ ಆಟ ಆಡಿ ಕೊಂಡಿರುವಾಗ್ಗೆ ಅವರೊಳಗೆ ಜಗಳ ಉಂಟಾದಾಗ ಪಿರ್ಯಾದಿದಾರರು ಹೋಗಿ ಜಗಳ ಬಿಡಿಸಿ ಮನೆಯ ಕಡೆಗೆ ಬರುತ್ತಿರುವಾಗ್ಗೆ ಆಪಾದಿತರಾದ ಹುಳಗಪ್ಪ, ಬನಿಯಪ್ಪ, ಮದುಕಪ್ಪ ಹಾಗೂ ದೇವಮ್ಮ ಎಂಬವರುಗಳು ಪಿರ್ಯಾದಿದಾರರನ್ನು ಅಡ್ಡಗಟ್ಟಿ ಹಳೇಯ ದ್ವೇಷದಿಂದ ಮಕ್ಕಳ ವಿಚಾರದಲ್ಲಿ ಕೈಯಿಂದ ಹೊಡೆದು, ಅವಾಚ್ಯ ಶಬ್ದಗಳಿಂದ ಬೈದಿರುವುದಾಗಿದೆ. ಈ ಬಗ್ಗೆ ಸೋಮಣ್ಣರವರು ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 37/14 ಕಲಂ 341, 355, 504, 506 ಜೊತೆಗೆ 34 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
No comments:
Post a Comment