Friday, February 07, 2014

Daily Crime Reported on 07/02/2014 at 19:30 Hrs.



ಅಪಘಾತ ಪ್ರಕರಣ 
  • ಉಡುಪಿ: ಪಿರ್ಯಾದಿದಾರರಾದ ವಿಠಲ( 51 ವರ್ಷ) ತಂದೆ: ದೇಜು ಪೂಜಾರಿ ವಾಸ: ನಿಯರ್ ಭಾರತ್ ಪ್ರಸ್‌ ಬಳಿ, ಕಲ್ಸಂಕ, ಉಡುಪಿರವರು ಕಲ್ಸಂಕ ರಿಕ್ಷಾ ನಿಲ್ದಾಣದಲ್ಲಿ ರಿಕ್ಷಾ ಚಾಲಕನಾಗಿ ದುಡಿಯುತ್ತಿದ್ದು ದಿನಾಂಕ: 31/01/2014 ರಂದು ಕಲ್ಸಂಕ ಜಂಕ್ಷನ್ ಬಳಿ ರಿಕ್ಷಾ ನಿಲ್ದಾಣದಲ್ಲಿ ಬಾಡಿಗೆಗಾಗಿ ಕಾಯುತ್ತಿರುವಾಗ ರಾತ್ರಿ 7:50 ಗಂಟೆ ಸಮಯದಲ್ಲಿ ಉಡುಪಿ ಸಿಟಿ ಬಸ್ ನಿಲ್ದಾಣದ ಕಡೆಯಿಂದ ಮಣಿಪಾಲ ಕಡೆಗೆ ಬೈಕ್ ನಂಬ್ರ. ಕೆಎ-20-ವೈ-3465 ನೇದನ್ನು ಅದರ ಸವಾರ ಸತೀಶ್ ಕುಮಾರ್ ರವರು ಅತೀವೇಗ ಹಾಗೂ ಅಜಾಗರೂಕತೆಯಿಂದ ಸವಾರಿಮಾಡಿಕೊಂಡು ಒಮ್ಮೇಲೆ ಬೈಕ್ ಗೆ ಬ್ರೇಕ್ ಹಾಕಿದ್ದರಿಂದ ಬೈಕ್ ಸ್ಕಿಡ್‌ ಆಗಿ ಬೈಕ್ ಸಮೇತ ರಸ್ತೆಗೆ ಬಿದ್ದ ಪರಿಣಾಮ ತಲೆಯ ಹಿಂಭಾಗಕ್ಕೆ ರಕ್ತಗಾಯವಾಗಿರುತ್ತದೆ. ಕೂಡಲೇ ಪಿರ್ಯಾದಿದಾರರ ಮತ್ತು ಅಲ್ಲಿ ಸೇರಿದವರು ಮೇಲಕ್ಕೆತ್ತಿ ಉಪಚರಿಸಿ ಆಟೋ ರಿಕ್ಷಾದಲ್ಲಿ ಕರೆದುಕೊಂಡು ಹೋಗಿ ಉಡುಪಿ ಆದರ್ಶ ಆಸ್ಪತ್ರೆಗೆ ದಾಖಲು ಮಾಡಿರುವುದಾಗಿದೆ. ಈ ಅಪಘಾತಕ್ಕೆ ಬೈಕ್ ನಂಬ್ರ. ಕೆಎ-20-ವೈ-3465 ನೇದರ ಸವಾರನದ ಸತೀಶ್‌ ಕುಮಾರ್ ರವರ ಅತೀವೇಗ ಹಾಗೂ ಅಜಾಗರೂಕತೆಯ ಸವಾರಿಯೇ ಕಾರಣವಾಗಿರುತ್ತದೆ. ಎಂಬುದಾಗಿ ವಿಠಲರವರು ನೀಡಿದ ದೂರಿನಂತೆ ಉಡುಪಿ ಸಂಚಾರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 16/2014 ಕಲಂ 279, 337 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

No comments: