ಗಂಡಸು ಕಾಣೆ ಪ್ರಕರಣ
- ಉಡುಪಿ: ಪಿರ್ಯಾದಿದಾರರಾದ ಶ್ರೀಮತಿ ಪೂರ್ಣಿಮಾ, ವಾಸ ಹನುಮಂತನಗರ,
ಸಂತೆಕಟ್ಟೆ ಅಂಚೆ, ಪುತ್ತೂರು ಗ್ರಾಮ, ಉಡುಪಿ ಇವರ ಗಂಡ ಜಯ ಎಂಬವರು ದಿನಾಂಕ 02/05/13 ರಂದು ಬೆಳಿಗ್ಗೆ
08:30 ಗಂಟೆಗೆ ಮನೆಯಿಂದ ಕೆಲಸಕ್ಕೆ ಹೋಗುವುದಾಗಿ ಹೇಳಿ ಹೋದವರು ಈತನಕ ಮನೆಗೂ ಬಾರದೇ, ಸ್ನೇಹಿತರ ಮನಗೂ ಹೋಗದೇ, ಸಂಬಂಧಿಕರ ಮನೆಗೂ ಹೋಗದೇ
ಕಾಣೆಯಾಗಿದ್ದಾಗಿರುತ್ತದೆ ಎಂಬುದಾಗಿ ಶ್ರೀಮತಿ ಪೂರ್ಣಿಮಾ ಇವರು ನೀಡಿದ ದೂರಿನಂತೆ ಉಡುಪಿ ನಗರ ಠಾಣಾ ಅಪರಾಧ
ಕ್ರಮಾಂಕ 229/13 ಕಲಂ ಗಂಡಸು ಕಾಣೆ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
- ಕುಂದಾಪುರ: ದಿನಾಂಕ 10/05/2013
ರಂದು ಬೆಳಿಗ್ಗೆ ಎಂದಿನಂತೆ ಮನೆಯಿಂದ ಹಾಲನ್ನು ಕೋಣಿ ಹಾಲು ಡೈರಿಗೆ ಅವರ ಬಾಬ್ತು ಸೈಕಲ್ ನಲ್ಲಿ
ತೆಗೆದುಕೊಂಡು ಹೋಗುತ್ತಿದ್ದಾಗ ಸುಮಾರು 7:15 ಗಂಟೆ ಸಮಯಕ್ಕೆ ಕೋಣಿ ಹಾಲು ಡೈರಿ ಎದುರು ಫಿರ್ಯಾದಿದಾರರಾದ ಕೃಷ್ಣಯ್ಯ ಶೇರಿಗಾರ
(84), ತಂದೆ ದಿ. ವಾಸುದೇವ ಶೇರಿಗಾರ, ವಾಸ ಹೊಸಮನೆ, ರಂಬಳ್ಳಿ, ಹಂಗ್ಲೂರು ಗ್ರಾಮ, ಕುಂದಾಪುರ
ತಾಲೂಕು
ಇವರು ಹೋಗುತ್ತಿದ್ದಾಗ
ಆಟೋ ರಿಕ್ಷಾ ನಂಬ್ರ ಕೆಎ 20ಸಿ 3035 ನೇದರ ಚಾಲಕ ಆಟೋ ರಿಕ್ಷಾವನ್ನು ಅತೀ ವೇಗ ಹಾಗೂ
ಅಜಾಗರೂಕತೆಯಿಂದ ಚಲಾಯಿಸಿಕೊಂಡು ರಸ್ತೆಯ ತೀರಾ ಎಡಭಾಗಕ್ಕೆ ಹೋಗಿ ಕೃಷ್ಣಯ್ಯ ಶೇರಿಗಾರರವರು
ಸವಾರಿ ಮಾಡಿಕೊಂಡಿದ್ದ ಸೈಕಲಿಗೆ ಹಿಂದಿನಿಂದ ಢಿಕ್ಕಿ ಹೊಡೆದ ಪರಿಣಾಮ ಕೃಷ್ಣಯ್ಯ ಶೇರಿಗಾರ ಇವರು ಸೈಕಲ್
ಸಮೇತ ರಸ್ತೆಗೆ ಬಿದ್ದು ಅವರಿಗೆ ಬಲಬದಿಯ ಸೊಂಟಕ್ಕೆ, ಬಲಕೈಗೆ, ತಲೆಯ
ಬಲಬದಿಗೆ, ಬಲಕಾಲಿಗೆ ತರಚಿದ ರಕ್ತಗಾಯವಾಗಿರುತ್ತದೆ. ನಂತರ ಗಾಯಗೊಂಡ ಕೃಷ್ಣಯ್ಯ ಶೇರಿಗಾರವರನ್ನು
ಚಿಕಿತ್ಸೆಯ ಬಗ್ಗೆ ಕುಂದಾಪುರ ಚಿನ್ಮಯಿ ಆಸ್ಪತ್ರೆಗೆ ದಾಖಲಿಸಿದ್ದಾಗಿದೆ ಎಂಬುದಾಗಿ ಕೃಷ್ಣಯ್ಯ ಶೇರಿಗಾರ ಇವರು ನೀಡಿದ ದೂರಿನಂತೆ ಕುಂದಾಪುರ ಠಾಣಾ ಅಪರಾಧ ಕ್ರಮಂಕ 207/13 ಕಲಂ 279, 337 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ
ಕೈಗೊಳ್ಳಲಾಗಿದೆ.
- ಗಂಗೊಳ್ಳಿ: ದಿನಾಂಕ 18/04/2013 ರಂದು ರಾತ್ರಿ ಮಲಗುವಾಗ ಉಪ್ಪರಿಗೆಯಲ್ಲಿನ ಪಿರ್ಯಾದಿದಾರರಾದ ವಸಂತಿ (26) ತಂದೆ ಮಹಾಬಲ ದೇವಾಡಿಗ, ವಾಸ ಚೈತ್ರ ನಿಲಯ ಪ್ರವಾಸಿ ಮಂದಿರದ ಬಳಿ ತ್ರಾಸಿ ಗ್ರಾಮ ಕುಂದಾಪುರ ತಾಲೂಕು ಇವರು ರೂಮಿನ ಕಪಾಟಿನಲ್ಲಿ ಚಿಕ್ಕ ಭರಣಿಯಲ್ಲಿ 2.30 ಪವನ್ ಲಕ್ಷ್ಮೀ ತಾಳಿ ಇರುವ ಚಿನ್ನದ ಸರವನ್ನು ತೆಗೆದಿರುಸಿದ್ದು ಅದರ ಅಂದಾಜು ಮೌಲ್ಯ 45,000 ರೂಪಾಯಿ ಆಗಬಹುದು ದಿನಾಂಕ 21/04/2013 ರಂದು ಮೇಲೆ ಹೋಗಿ ನೋಡಿದಾಗ ಇಟ್ಟ ಜಾಗದಲ್ಲಿ ಸರ ಇಲ್ಲದಿರುವುದು ಕಂಡು ಎಷ್ಟು ಹುಡುಕಾಡಿದರು ಸಿಕ್ಕಿರುವುದಿಲ್ಲ ದಿನಾಂಕ 19/04/2013 ರಿಂದ 20/04/2013ರವರೆಗೆ ತ್ರಾಸಿಯ ಕೇಶವನು ಉಪ್ಪರಿಗೆಯಲ್ಲಿ ಪೈಂಟಿಂಗ್ ಕೆಲಸ ಮಾಡಲು ಹೋಗಿದ್ದಾನೆ ಅದುದರಿಂದ ಬಂಗಾರದ ಸರವನ್ನು ಕೇಶವನೇ ಕದ್ದಿರಬಹುದೆಂದು ಅನುಮಾನವಾಗಿರುತ್ತದೆ ವಸಂತಿರವರು ಅಣ್ಣನ ಮದುವೆ ಇದ್ದಿರುವುದರಿಂದ ಆತನು ತಂದು ಕೊಡಬಹುದು ಎಂಬ ನಿರೀಕ್ಷೆಯಿಂದ ಕಪ್ಲೇಂಟ್ ಕೊಡಲು ತಡ ಮಾಡಬೇಕಾಯಿತು ಎಂಬುದಾಗಿ ವಸಂತಿ ಇವರು ನೀಡಿದ ದೂರಿನಂತೆ ಗಂಗೊಳ್ಳಿ ಠಾಣಾ ಅಪರಾಧ ಕ್ರಮಾಂಕ 67/2013 ಕಲಂ 380 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
No comments:
Post a Comment