Saturday, May 11, 2013

Daily Crimes Reported as On 11/05/2013 At 07:00 Hrs

ಇತರ ಪ್ರಕರಣ

  • ಮಣಿಪಾಲ: ಪೊಲೀಸ್ ನಿರೀಕ್ಷಕರಾದ ಶ್ರೀ  ಪ್ರವೀಣ್‌. ಹೆಚ್‌. ನಾಯಕ್‌ ಡಿ.ಸಿ.ಐ.ಬಿ, ಉಡುಪಿ ಜಿಲ್ಲೆ. ಹಾಗೂ ಅವರ ಸಿಬ್ಬಂದಿಯವರು ಮಣಿಪಾಲ ಠಾಣಾ ವ್ಯಾಪ್ತಿಯಲ್ಲಿ ರೌಂಡ್ಸ್‌ ಕರ್ತವ್ಯ ದಲ್ಲಿರುವಾಗ ಸಮಯ 18:45 ಗಂಟೆಗೆ ಶಿವಳ್ಳಿ ಗ್ರಾಮದ ಮಣಿಪಾಲದ ಮಣ್ಣುಪಳ್ಳದ ಗೇಟಿನ ಬಳಿ ಬಂದಾಗ ಕೆಎ 20ಸಿ 2467ನೇ ನಂಬ್ರ ಆಟೋ ರಿಕ್ಷಾ ನಿಂತಿದ್ದು, ಅದರ ಬಳಿ ಒಬ್ಬ ವ್ಯಕ್ತಿ ನಿಂತಿದ್ದು, ಅನುಮಾನಗೊಂಡು ಆತನ ಹೆಸರು ಮತ್ತು ವಿಳಾಸ ಕೇಳಲಾಗಿ ತನ್ನ ಹೆಸರು ಈಶ್ವರ ಪೂಜಾರಿ (30), ತಂದೆ ಸುಧಾಕರ ಪೂಜಾರಿ, ವಾಸ: ಕಾಟುದ್ಧಿ ಮನೆ, ಹೆಗ್ಗದ್ದೆ ಗ್ರಾಮ, ಸಕಲೇಶಪುರ ತಾಲೂಕು, ಹಾಸನ ಜಿಲ್ಲೆ ಎಂದು ತಿಳಿಸಿದ್ದು, ಆತನ ರಿಕ್ಷಾವನ್ನು ತಪಾಸಣೆ ಮಾಡಲಾಗಿ ಸ್ಟೇರಿಂಗ್‌ ಎದುರುಗಡೆ ಕಾಗದ ಸುತ್ತಿದ ಒಂದು ಕಟ್ಟು ಇದ್ದು, ಅದು ಬಿಡಿಸಿ ನೋಡಲಾಗಿ ನೋಟಿನ ಕಂತೆಗಳೇ ಇದ್ದು, ಅದರಲ್ಲಿ ಒಟ್ಟು ಮೌಲ್ಯ ರೂಪಾಯಿ 4,00,000/- ಹಣವಿದ್ದು, ಸದ್ರಿ ವ್ಯಕ್ತಿಯು ಯಾವುದೇ ದಾಖಲೇ ಇಲ್ಲದೆ ಹಣವನ್ನು ತಂದು ಇಟ್ಟುಕೊಂಡಿದ್ದ ಅಪರಾಧವಾಗಿರುತ್ತದೆ ಈ ಬಗ್ಗೆ ಮಣಿಪಾಲ ಠಾಣಾ ಅಪರಾಧ ಕ್ರಮಾಂಕ 97/2013 ಕಲಂ 41 (1) (ಡಿ) 102 ಸಿ.ಆರ್‌.‌ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತದೆ.

   

No comments: