ಅಸ್ವಾಭಾವಿಕ ಮರಣ ಪ್ರಕರಣ
- ಮಣಿಪಾಲ:ದಿನಾಂಕ 18/04/2013 ರ ಸಂಜೆಯಿಂದ ದಿನಾಂಕ 19/04/2013 ರ ಬೆಳಿಗ್ಗೆ 08:00 ಗಂಟೆ ನಡುವಿನ ಅವಧಿಯಲ್ಲಿ ಉಡುಪಿ ತಾಲೂಕು ಹಿರೇಬೆಟ್ಟು ಗ್ರಾಮದ ಸದಾಶಿವ ನಗರ ಎಂಬಲ್ಲಿ ಪಿರ್ಯಾದಿದಾರರಾದ ಸುಧೀರ್ ಪೂಜಾರಿ (32), ತಂದೆ:ಜಯಂತ ಪೂಜಾರಿ ವಾಸ: ಸದಾಶಿವ ನಗರ, ಹಿರೇಬೆಟ್ಟು ಅಂಚೆ & ಗ್ರಾಮ, ಉಡುಪಿ ತಾಲೂಕುರವರ ಮನೆಯ ಬಳಿ ಶ್ರೀಮತಿ ಲಕ್ಷ್ಮಿ (70) ಎಂಬವರು ಏಕಾಂಗಿಯಾಗಿ ವಾಸವಿದ್ದು, ಒಂದು ವಾರದಿಂದ ವಿಪರೀತ ಕುಡಿಯುತ್ತಿದ್ದು, ಸುಧೀರ್ ಪೂಜಾರಿರವರು ಈ ದಿನ ಬೆಳಿಗ್ಗೆ ಹೋಗಿ ನೋಡಲಾಗಿ ಶ್ರೀಮತಿ ಲಕ್ಷ್ಮಿರವರು ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಸುಧೀರ್ ಪೂಜಾರಿರವರು ನೀಡಿದ ದೂರಿನಂತೆ ಮಣಿಪಾಲ ಠಾಣಾ ಅಸ್ವಾಭಾವಿಕ ಮರಣ ಕ್ರಮಾಂಕ 17/2013 ಕಲಂ:174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
- ಮಣಿಪಾಲ:ದಿನಾಂಕ 18/04/2013 ರಂದು 20:00 ಗಂಟೆಗೆ ಉಡುಪಿ ತಾಲೂಕು 80 ಬಡಗಬೆಟ್ಟು ಗ್ರಾಮದ ನೇತಾಜಿ ನಗರ ಎಂಬಲ್ಲಿ ಆಪಾದಿತರುಗಳಾದ 1) ಶಿವಾನಂದ 2) ಕೃಷ್ಣ ಹಾಗೂ ಇತರ 4 ಜನರು ಅಕ್ರಮ ಕೂಟ ಸೇರಿ ಕತ್ತಿ ಹಾಗೂ ದೊಣ್ಣೆಯಿಂದ ಪಿರ್ಯಾದಿದಾರರಾದ ರಾಜ (30), ತಂದೆ:ರಂಗಪ್ಪ, ವಾಸ:ನೇತಾಜಿ ನಗರ, 80 ಬಡಗಬೆಟ್ಟು ಗ್ರಾಮ, ಉಡುಪಿ ತಾಲೂಕುರವರ ಹೆಂಡತಿ ನಂಜಮ್ಮ, ನೆರೆಮನೆಯ ಅರುಂಧತಿ ಹಾಗೂ ರಾಜರವರಿಗೆ ಹಲ್ಲೆ ನಡೆಸಿರುವುದಾಗಿದೆ. ಈ ಬಗ್ಗೆ ರಾಜರವರು ನೀಡಿದ ದೂರಿನಂತೆ ಮಣಿಪಾಲ ಠಾಣಾ ಅಪರಾಧ ಕ್ರಮಾಂಕ 83/2013 ಕಲಂ:143,147,148,324 ಜೊತೆಗೆ 149 ಐ.ಪಿ.ಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
- ಹೆಬ್ರಿ:ಪಿರ್ಯಾದಿದಾರರಾದ ಜ್ಯೋತಿ ಶೆಟ್ಟಿ(39) ಗಂಡ:ದಿನೇಶ ಶೆಟ್ಟಿ, ವಾಸ: ಲಕ್ಷ್ಮೀ ಪ್ರಸಾದ, ಶಿವಪುರ ಗ್ರಾಮ, ಕಾರ್ಕಳ ತಾಲೂಕುರವರು ಕಾರ್ಕಳ ತಾಲೂಕು ಶಿವಪುರ ಗ್ರಾಮದ ಲಕ್ಷ್ಮೀ ಪ್ರಸಾದ ಮನೆಯಲ್ಲಿ ವಾಸ ಮಾಡಿಕೊಂಡಿದ್ದು ದಿನಾಂಕ: 18/04/13 ರಂದು ರಾತ್ರಿ 9:30 ಗಂಟೆಗೆ ಮನೆಯ ಬಾಗಿಲು ಮತ್ತು ಕಿಟಕಿ ಬಡಿದು ನಂತರ ಮನೆಯ ಮೇಲೆ ಕಲ್ಲು ಹೊಡೆಯಲು ಶುರು ಮಾಡಿದ್ದು ಇದರಿಂದ ಜ್ಯೋತಿ ಶೆಟ್ಟಿರವರು ಭಯಗೊಂಡು ತನ್ನ ಚಿಕ್ಕಮ್ಮ ಸರೋಜರವರ ಮನೆಗೆ ಪೋನ್ ಮಾಡಿ, ತನ್ನ ಮನೆಗೆ ಬೀಗ ಹಾಕಿ, ಚಿಕ್ಕಮ್ಮ ಸರೋಜರವರ ಮನೆಗೆ ಹೋಗಿ ರಾತ್ರಿ ಉಳಿದು ದಿನಾಂಕ: 19/04/13 ರಂದು ಬೆಳಿಗ್ಗೆ 07:00 ಗಂಟೆಗೆ ಮನೆಗೆ ಬಂದು ನೋಡಿದಾಗ ಮನೆಯ ಹಿಂದಿನ ಬಾಗಿಲಿನ ಚಿಲಕ ತೆಗೆದಿರುವುದು ಕಂಡು ಬಂದಿದ್ದು ಮನೆಯ ಒಳಗೆ ಹೋಗಿ ನೋಡಿದಾಗ ಗೋದ್ರೇಜ್ ಕಪಾಟುವಿನ ಬೀಗ ಒಡೆದು ಕಪಾಟಿನಲ್ಲಿದ್ದ ಮನೆಯ ದಸ್ತಾವೇಜು, ಎಲ್ಲೈಸಿ ಪಾಲಿಸಿ-3, ನಗದು 6,000 ರೂಪಾಯಿ, ಚಿನ್ನಾಭರಣ, ಸೀರೆ, ಮಗುವಿನ ಬಟ್ಟೆ ಮತ್ತು 6 ಜೊತೆ ಚಪ್ಪಲಿ ಕೊಂಡು ಹೋಗಿರುವುದು ಕಂಡು ಬಂದಿದ್ದು, ಇದನ್ನು ಶಿವಪುರದ ಸುರೇಶ ಶೆಟ್ಟಿ, ತಂದೆ: ಸುಬ್ಬಯ್ಯ ಶೆಟ್ಟಿ, ವಾಸ: ಶಿವಪುರ ಎಂಬವರು ಜ್ಯೋತಿ ಶೆಟ್ಟಿರವರ ಜಾಗದ ದಾಖಲೆ ಪತ್ರವನ್ನು ಹುಡುಕುವ ಸಲುವಾಗಿ ಮತ್ತು ಜಾಗವನ್ನು ಕಸಿಯಲು ಮಾಡಿರುವ ಕುತಂತ್ರವೆಂಬುದಾಗಿ ಜ್ಯೋತಿ ಶೆಟ್ಟಿರವರಿಗೆ ಮನದಟ್ಟಾಗಿರುತ್ತದೆ. ಈ ಬಗ್ಗೆ ಜ್ಯೋತಿ ಶೆಟ್ಟಿರವರು ನೀಡಿದ ದೂರಿನಂತೆ ಹೆಬ್ರಿ ಠಾಣಾ ಅಪರಾಧ ಕ್ರಮಾಂಕ 30/13, ಕಲಂ: 457, 380 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
- ಮಣಿಪಾಲ:ದಿನಾಂಕ 18/04/2013 ರ 21:30 ರಿಂದ ದಿನಾಂಕ 19/04/2013 ರ ಬೆಳಿಗ್ಗೆ 01:30 ಗಂಟೆ ನಡುವಿನ ಅವಧಿಯಲ್ಲಿ ಉಡುಪಿ ತಾಲೂಕು ಶಿವಳ್ಳಿ ಗ್ರಾಮದ ಮಣಿಪಾಲ ಬಬ್ಬು ಸ್ವಾಮಿ ದೇವಸ್ಥಾನದ ಎದುರು ಇರುವ ಭಾರತ್ ಸ್ಟೋರ್ ಎಂಬ ಹೆಸರಿನ ಅಂಗಡಿಯ ಬಾಗಿಲಿನ ಬೀಗವನ್ನು ಯಾರೋ ಕಳ್ಳರು ಮುರಿದು ಒಳಪ್ರವೇಶಿಸಿ, ಡ್ರಾವರ್ನಲ್ಲಿಟ್ಟಿದ್ದ ರೂಪಾಯಿ 11,000/- ನಗದು ಹಾಗೂ 10 ನೊಕಿಯಾ ಕಂಪೆನಿಯ ಮೊಬೈಲ್ ಪೋನ್ಗಳನ್ನು ಕಳವು ಮಾಡಿಕೊಂಡು ಹೋಗಿರುವುದಾಗಿದೆ. ಕಳವಾದ ಸೊತ್ತುಗಳ ಒಟ್ಟು ಮೌಲ್ಯ ರೂಪಾಯಿ 61,000/- ಆಗಬಹುದು. ಈ ಬಗ್ಗೆ ರವೀಂದ್ರ ಪೈ (40) ತಂದೆ:ಸದಾನಂದ ಪೈ ವಾಸ: ಫ್ಲಾಟ್ ನಂ. 203, ಪಂಚಮಿ ರೆಸಿಡೆನ್ಸಿ, ವಿ.ಪಿ ನಗರ, ಶಿವಳ್ಳಿ ಗ್ರಾಮ, ಉಡುಪಿ ತಾಲೂಕುರವರು ನೀಡಿದ ದೂರಿನಂತೆ ಮಣಿಪಾಲ ಠಾಣಾ ಅಪರಾಧ ಕ್ರಮಾಂಕ 84/2013 ಕಲಂ:457,380 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
No comments:
Post a Comment