Tuesday, September 22, 2015

Daily Crime Reported As On 22/09/2015 At 17:00 Hrs

ಅಪಘಾತ ಪ್ರಕರಣಗಳು
  • ಶಿರ್ವಾ:  ದಿನಾಂಕ 20/09/15 ರಂದು ರಾತ್ರಿ 09:50 ಗಂಟೆಗೆ ಶಂಕರಪುರ ಬಬ್ಬು ಸ್ವಾಮಿ ದೇವಸ್ಥಾನದ ಬಳಿ ಆರೋಪಿ ತನ್ನ ಮೋಟಾರು ಸೈಕಲ್ ನಂಬ್ರ ಕೆಎ 20 ಡಬ್ಲೂ 7102 ನೇದನ್ನು ಶಂಕರಪುರ ಕಡೆಯಿಂದ  ಸುಭಾಸ್ ನಗರ ಕಡೆಗೆ  ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ರಸ್ತೆಯ ತೀರಾ ಎಡಬದಿಗೆ ಬಂದು  ಪಿರ್ಯಾದಿದಾರರಾದ ಕಾರ್ತಿಕ್ ಶೆಟ್ಟಿ (21), ತಂದೆ: ಶೇಖರ ಶೆಟ್ಟಿ, ವಾಸ: ಮಂಡೇಡಿ ಪಡು ಮೇಲ್ ಮನೆ ಇನ್ನಂಜೆ ಗ್ರಾಮ ಉಡುಪಿ ತಾಲೂಕು ಇವರು ಚಲಾಯಿಸಿಕೊಂಡು ಬರುತ್ತಿದ್ದ ಕೆಎ20 ಯು 9006ನೇ ಮೋಟಾರು ಸೈಕಲ್ ಗೆ  ಡಿಕ್ಕಿ ಹೊಡೆದ ಪರಿಣಾಮ ಮೋಟಾರು ಸೈಕಲ್ ಸಮೇತ ರಸ್ತೆಗೆ ಬಿದ್ದು ಕಾರ್ತಿಕ್ ಶೆಟ್ಟಿ ಯವರ ಎಡ ಕಾಲಿನ  ಮೊಣಗಂಟಿನ ಕೆಳಗೆ ಹಾಗೂ ಪಾದದ ಹೆಬ್ಬೆರೆಳಿನ ಬಳಿ ತರಚಿದ ಗಾಯ ಹಾಗೂ ಆರೋಪಿ ಮೋಟಾರು ಸೈಕಲ್ ಸವಾರನಿಗೆ ತಲೆಗೆ ಹಾಗೂ ಕಾಲಿಗೆ ತೀವ್ರ ತರದ ಗಾಯವಾಗಿರುತ್ತದೆ. ಅಫಘಾತದ ಪರಿಣಾಮ ಎರಡು ಮೋಟಾರು ಸೈಕಲ್ ಜಖಂಗೊಂಡಿರುತ್ತದೆ. ಈ ಬಗ್ಗೆ ಶಿರ್ವಾ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 68/2015 ಕಲಂ: 279, 337, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಗಂಗೊಳ್ಳಿ: ದಿನಾಂಕ: 21/09/2015 ರಂದು 21:30 ಗಂಟೆಗೆ ಕುಂದಾಪುರ ತಾಲೂಕು ಗಂಗೊಳ್ಳಿ ಗ್ರಾಮದ ಕಲೈಕಾರ್ ಮಠದ ಗಣೇಶ ವಿಗ್ರಹ ವಿಸರ್ಜನಾ ಮೆರವಣಿಗೆ ಸಮಯ ಡಿ ಜೆ ಸೌಂಡ್ ಬಾಕ್ಸ್ ಗೆ ವಿದ್ಯುತ್ ಸಂಪರ್ಕ ಮಾಡಲು ಜನರೇಟರ್ ಲೋಡ್ ಮಾಡಿ ಸಾಗಿಸುತ್ತಿದ್ದ ಕೆಎ 20 ಸಿ 8659 ನೇ ನಂಬ್ರದ ಸೂಪರ್ ಏಸ್ ಟಾಟಾ ಟೆಂಪೋ ಚಾಲಕನು ತನ್ನ ಟೆಂಪೋವನ್ನು ಗಂಗೊಳ್ಳಿ ಅಂಬಿಕಾ ದೇವಸ್ಥಾನದ ಎದುರು ರಸ್ತೆಯಲ್ಲಿ,  ಬಾವಿಕಟ್ಟೆಯಿಂದ ಬಂದರು ಕಡೆಗೆ ಅಜಾಗರೂಕತೆಯಿಂದ ಚಲಾಯಿಸಿ ಟೆಂಪೋದ ಚಕ್ರವು ಮೆರವಣಿಗೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಗೌರೀಶ್ ಖಾರ್ವಿ ಎಂಬುವವರ ಬಲಕಾಲಿನ ಪಾದದ ಮೇಲೆ ಹರಿದುದ್ದರಿಂದ ಬಲಕಾಲು ಪಾದ ಹಾಗೂ ಬಲಕಾಲಿನ ಪಾದದ ಗಂಟಿಗೆ ರಕ್ತಗಾಯವಾಗಿ ಕುಂದಾಪುರ ಚಿನ್ಮಯಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ  ದಾಖಲಾಗಿರುವುದಾಗಿದೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 117/2015 ಕಲಂ: 279, 337  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  
  • ಕಾರ್ಕಳ: ದಿನಾಂಕ 22/09/2015 ರಂದು ಮಧ್ಯಾಹ್ನ 12:15 ಗಂಟೆಗೆ  ಕಾರ್ಕಳ ತಾಲೂಕು  ನಿಟ್ಟೆ ಗ್ರಾಮದ ಸಾಗರ ಅರ್ಕೇಡ್ ಕಟ್ಟಡದ ಎದುರಿನ ರಾಜ್ಯ ಹೆದ್ದಾರಿಯಲ್ಲಿ   ಪಿರ್ಯಾದಿದಾರರಾದ ಕೆ ದೀಪಕ್ ಕಾಮತ್  (37), ತಂದೆ: ದಿ ಪದ್ಮನಾಭ ಕಾಮತ್, ಕಾಮತ್ ಬಿಲ್ಡಿಂಗ್ ಕಾಂಜರಕಟ್ಟೆ, ಸಾಂತೂರು, ಇನ್ನಾ ಗ್ರಾಮ, ಉಡುಪಿ ಜಿಲ್ಲೆ ಇವರು ಮೋಟಾರ್ ಸೈಕಲಿನಲ್ಲಿ ಸವಾರಿ ಮಾಡುತ್ತಾ ಹೋಗುತ್ತಿರುವಾಗ KA 20 B 8095 ನೇಯ 407 ಗೂಡ್ಸ್ ವಾಹನವನ್ನು ಅದರ ಚಾಲಕ ಕಾರ್ಕಳ ಕಡೆಯಿಂದ ಅತೀವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಹೋಗಿ ಎದುರುಗಡೆಯಿಂದ ಬೆಳ್ಮಣ್  ಕಡೆಯಿಂದ ಕಾರ್ಕಳ ಕಡೆಗೆ  ಬರುತ್ತಿರುವ ಇನ್ನೊವಾ ಕಾರು ನಂಬ್ರ  KA 18 M 7354 ನೇಯದಕ್ಕೆ ಡಿಕ್ಕಿ ಹೊಡೆದ ಪರಿಣಾಮವಾಗಿ ಕಾರನ್ನು ಚಲಾಯಿಸುತ್ತಿದ್ದ ಕೆ ದೀಪಕ್ ಕಾಮತ್ ರವರ ಪರಿಚಯಸ್ಥರಾದ ಜಯರಾಜ್ ಪೈ ಯವರಿಗೆ ಬಲಕೈಗೆ ತರಚಿದ ಗಾಯ  ಮತ್ತು ಕಿಬ್ಬೊಟ್ಟೆಗೆ ಗುದ್ದಿದ ನೋವು ಉಂಟಾಗಿರುತ್ತದೆ.ಆರೋಪಿ 407 ಗೂಡ್ಸ್ ವಾಹನ ನಂಬ್ರ KA 20 B 8095 ನೇಯದರ ಚಾಲಕನಿಗೂ ಸಣ್ಣಪುಟ್ಟ ಗಾಯವಾಗಿದ್ದು ನಿಟ್ಟೆ  ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುತ್ತಾರೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 151/2015 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 
ಗಂಡಸು ಕಾಣೆ ಪ್ರಕರಣ
  • ಹಿರಿಯಡ್ಕ: ಪಿರ್ಯಾದಿದಾರರಾದ ಶ್ರೀಮತಿ ಮಮತಾ (35), ಗಂಡ: ದಯಾನಂದ ನಾಯ್ಕ, ವಾಸ: ಕೇರಾಫ್ ಗಣೇಶ, ನಿತ್ಯಾನಂದ ನಿಲಯ, ಹಿರಿಯಡ್ಕ ಪೋಸ್ಟ್, ಬೊಮ್ಮಾರಬೆಟ್ಟು ಗ್ರಾಮ ಇವರ ಗಂಡ ದಯಾನಂದ ನಾಯ್ಕ (39)ಎಂಬುವವರು ದಿನಾಂಕ 19/09/15 ರಂದು ಬೆಳಿಗ್ಗೆ 07:00 ಗಂಟೆಗೆ ಬೊಮ್ಮಾರಬೆಟ್ಟು  ಗ್ರಾಮದ ಹಿರಿಯಡ್ಕದ ತನ್ನ ಮನೆಯಿಂದ ತನ್ನ ಟೆಂಪೋವನ್ನು ಚಲಾಯಿಸಿಕೊಂಡು ಹೋಗಿ ಹಿರಿಯಡ್ಕ ಗಣೇಶ ಕಲಾಮಂದಿರದ ರಸ್ತೆ ಬದಿಯಲ್ಲಿ ನಿಲ್ಲಿಸಿ ಹೋದವರು ಇದುವರೆಗೂ ಮನೆಗೆ ವಾಪಾಸು ಬಾರದೆ ಕಾಣೆಯಾಗಿರುವುದಾಗಿದೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 95/2015 ಕಲಂ: ಗಂಡಸು ಕಾಣೆ ಯಂತೆ ಪ್ರಕರಣ ದಾಖಲಾಗಿರುತ್ತದೆ.

1 comment:

letsfly said...

Karnataka Police Recruitment 2018 has published notification of Civil Police Constable (Men & Women) vacancies.Candidates can apply Karnataka Police Recruitment 2018 on the official website.