Monday, September 14, 2015

Daily Crime Reported As On 14/09/2015 At 19:30 Hrs



ಅಪಘಾತ ಪ್ರಕರಣ

  • ಕೋಟ: ಪಿರ್ಯಾದಿ ಮಂಜು ಮೊಗವೀರ (70) ತಂದೆ:ದಿವಂಗತ ಬಡಿಯ ಮೊಗವೀರ ವಾಸ: ಮಂಜುನಾಥ ನಿಲಯ, ಹೊಸ್ಮಠ, ಕೊರ್ಗಿ ಗ್ರಾಮ, ಕುಂದಾಪುರ ತಾಲೂಕು ಇವರು ದಿನಾಂಕ:13/09/2015 ರಂದು ಸಂಜೆ 6:00 ಗಂಟೆಯ ಸಮಯಕ್ಕೆ  ತೆಕ್ಕಟ್ಟೆ ದಬ್ಬೆಕಟ್ಟೆ ಟಾರು ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುವಾಗ ಕೆದೂರು ವಾಟರ್ ಟ್ಯಾಂಕ್ ಬಳಿ  ಕೆಎ 20 ಇಡಿ 0686 ನೇ ನಂಬ್ರದ ಮೋಟಾರ್ ಸೈಕಲ್ ಸವಾರ ರಾಘವೇಂದ್ರ ಶೆಟ್ಟಿರವರು ಮೋಟಾರ್ ಸೈಕಲ್‌ನ್ನು ದಬ್ಬೆಕಟ್ಟೆ ಕಡೆಯಿಂದ ಕೆದೂರು ಕಡೆಗೆ  ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ರಸ್ತೆಯ ತೀರ ಎಡಕ್ಕೆ ಚಲಾಯಿಸಿ ಮಂಜು ಮೊಗವೀರ ಇವರಿಗೆ ಹಿಂಬದಿಯಿಂದ  ಢಿಕ್ಕಿ ಹೊಡೆದ ಪರಿಣಾಮ ಟಾರು ರಸ್ತಗೆ ಬಿದ್ದು ಬಲಕಾಲಿನ ಮಣಿಗಂಟಿನ ಮೇಲ್ಬಾಗ ಮೂಳೆ ಮುರಿತದ ತೀವ್ರ ರಕ್ತ ಗಾಯವಾಗಿದ್ದು ಚಿಕಿತ್ಸೆ ಬಗ್ಗೆ ಕೋಟೇಶ್ವರ ಎನ್.ಆರ್.ಆಚಾರ್ಯ ಆಸ್ಪತ್ರೆಗೆ ಹೋಗಿ ಬಳಿಕ ಹೆಚ್ಚಿನ ಚಿಕಿತ್ಸೆ ಬಗ್ಗೆ ಉಡುಪಿ ಆದರ್ಶ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲುಗೊಂಡಿರುವುದಾಗಿದೆ, ಈ ಬಗ್ಗೆ ಕೊಟ ಠಾಣೆ ಅಪರಾಧ ಕ್ರಮಾಂಕ: 205/2015 ಕಲಂ:279,338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

No comments: