Monday, September 14, 2015

Daily Crime Reported As On 14/09/2015 At 07:00 Hrs

ಹಲ್ಲೆ ಪ್ರಕರಣ 
  • ಪಡುಬಿದ್ರಿ: ದಿನಾಂಕ 13/09/2015 ರಂದು 21:15 ಗಂಟೆಗೆ ಪಲಿಮಾರು ಗ್ರಾಮದ ಮೂಡುಪಲಿಮಾರು ಬಸ್ ನಿಲ್ದಾಣದ ಬಳಿ ಇರುವ ಪಿರ್ಯಾದಿದಾರರಾದ ಅಮೀರ್ (23) ಇವರು ಮನೆ ಕಡೆಗೆ ನಡೆದುಕೊಂಡು ಬರುವಾಗ ಪರಿಚಯದ ಶೇಖರ್ ಯಾನೆ ರವಿ ಶೇಖರ್ ಎಂಬವರು ಅಮೀರ್ ರವರನ್ನು ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ  ಬೈದು ಕೆನ್ನೆಗೆ  ಕೈಯಿಂದ ಹೊಡೆದಿರುತ್ತಾರೆ.  ಆ ಸಮಯ ಅದೇ ದಾರಿಯಲ್ಲಿ ಬೈಕಿನಲ್ಲಿ ಬರುತ್ತಿದ್ದ ಪರಿಚಯದ ಸಂತು ಯಾನೆ ಸಂತೋಷ ಎಂಬಾತನು ಬೈಕನ್ನು ನಿಲ್ಲಿಸಿ ಅಮೀರ್ ರವರ ಬಳಿ ಬಂದು ಶೇಖರ ಎಂಬುವವರ ಜೊತೆಗೆ ಸೇರಿ ಕೈಯಿಂದ ಹೊಡೆದು ಕಾಲಿನಿಂದ ತುಳಿದಿರುತ್ತಾರೆ.  ಆಗ ಅಮೀರ್ ರವರ ಬೊಬ್ಬೆ ಕೇಳಿ ಅವರ ತಾಯಿ ಜುಬೈದಾರವರು ಸ್ಥಳಕ್ಕೆ ಬಂದು ಗಲಾಟೆಯನ್ನು ಬಿಡಿಸಲು ಮುಂದಾದಾಗ ಸಂತು ಯಾನೆ ಸಂತೋಷನು ಜುಬೈದಾರವರಿಗೆ ಕೈಯಿಂದ ಗುದ್ದಿ ದೂಡಿದ ಪರಿಣಾಮ ಮೂಗಿಗೆ ಗಾಯವಾಗಿ ಮೂಗಿನಿಂದ ರಕ್ತ ಬಂದಿದ್ದು, ಸ್ಥಳಕ್ಕೆ ರಫೀಕ್ , ಐ.ಪಿ. ಮಹಮ್ಮದ್ , ಮನ್ಸೂರ್ , ಖಾಸೀಂರವರು ಬರುವುದನ್ನು ನೋಡಿ ನಿನ್ನನ್ನು ಮುಂದಕ್ಕೆ ನೋಡಿಕೊಳ್ಳುತ್ತೇನೆ ಎಂದು ಜೀವ ಬೆದರಿಕೆ ಹಾಕಿರುತ್ತಾರೆ. ಜುಬೈದಾರವರು ಚಿಕಿತ್ಸೆಯ ಬಗ್ಗೆ ಉಡುಪಿ ಅಜ್ಜರಕಾಡು ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ  115/2015 ಕಲಂ. 341, 323, 354, 504, 506 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

No comments: