ಜುಗಾರಿ ಪ್ರಕರಣ:
- ಅಮಾಸೆಬೈಲು: ದಿನಾಂಕ 06/08/2015 ರಂದು ಸುನಿಲ್ ಕುಮಾರ್ ಎಂ.ಎಸ್. ಪಿ.ಎಸ್.ಐ ಅಮಾಸೆಬೈಲು ಪೊಲೀಸ್ ಠಾಣೆ ರವರಿಗೆ ಸಂಜೆ 04:00 ಗಂಟೆಗೆ ಖಿಚಿತ ವರ್ತಮಾನದ ಮೇರೆಗೆ ಹೊಸಂಗಡಿ ಗ್ರಾಮದಲ್ಲಿ ಬಾಳೆಜಡ್ಡು ಸರಕಾರಿ ಕಾಡು ಪ್ರದೇಶದಲ್ಲಿ ಆರು ಜನರು ಹಣವನ್ನು ಪಣವಾಗಿಟ್ಟುಕೊಂಡು ಅಂದರ್ ಬಾಹರ್ ಇಸ್ಪಿಟ್ ಜುಗಾರಿ ಆಟ ಆಡುತ್ತಿರುವರ ಮೇಲೆ ದಾಳಿ ನಡೆಸಿ 1) ರಘು ಗೊಲ್ಲ (53) ವಾಸ: ಗದ್ದೆಮನೆ ಹೊಸಂಗಡಿ ಗ್ರಾಮ ಕುಂದಾಪುರ ತಾಲೂಕು ಮತ್ತು 2) ಸಂತೋಷ ಶೆಟ್ಟಿ (27) ವಾಸ: ಕೆರೆಕಟ್ಟೆ ಹೊಸಂಗಡಿ ಕುಂದಾಪುರ ತಾಲೂಕು ಇವರನ್ನು ವಶಕ್ಕೆ ತೆಗೆದುಕೊಂಡಿದ್ದು, ಉಳಿದವರಾದ 1) ಸುಕುಮಾರ ಶೆಟ್ಟಿ ಕೋಣನಬೈಲು. 2) ಮಹೇಶ ಶೆಟ್ಟಿ ಯಡಮೊಗ್ಗೆ, 3) ಭುಜಂಗ ಶೆಟ್ಟಿ ಕೊಣನಬೈಲು 4) ಭುಜಂಗ ಶೆಟ್ಟಿ ಜಡ್ಡು ರವರುಗಳು ಓಡಿ ಹೋಗಿರುತ್ತಾರೆ, ಜೂಜಾಟಕ್ಕೆ ಬಳಸಿದ ಪ್ಲಾಸ್ಟಿಕ್ ಟಾರ್ಪಲ್-1, ಇಸ್ಫಿಟ್ ಎಲೆಗಳು-52, ಜೂಜಾಟಕ್ಕೆ ಪಣವಾಗಿಟ್ಟ ನಗದು ರೂ 500 /- ನ್ನು ಸ್ವಾಧೀನಪಡಿಸಿಕೊಳ್ಳಲಾಯಿತು, ಈ ಬಗ್ಗೆ ಅಮಾಸೆಬೈಲು ಪೋಲಿಸ್ ಠಾಣೆ ಅಪರಾಧ ಕ್ರಮಾಂಕ 43/2015 ಕಲಂ 87 KP Act ರಂತೆ ಪ್ರಕರಣ ದಾಖಲಾಗಿರುತ್ತದೆ.
No comments:
Post a Comment