ಕಳವು ಪ್ರಕರಣ
- ಉಡುಪಿ: ಫಿರ್ಯಾದಿ ನಾಗೇಶ ಸುವರ್ಣ ಇವರು ದಿನಾಂಕ 10/06/2015 ರಂದು ತನ್ನ ಕಪ್ಪು ಬಣ್ಣದ ಬಜಾಜ್ ಕ್ಯಾಲಿಬರ್ ಮೋಟಾರು ಸೈಕಲ್ ಕೆಎ 20 ಕೆ 3447 ನೇದನ್ನು ರಾತ್ರಿ 21:00 ಗಂಟೆಗೆ ಮನೆಯ ಕಂಪೌಂಡು ಒಳಗೆ ಇಟ್ಟಿದ್ದು ಮರುದಿನ ಬೆಳಿಗ್ಗೆ 05:00 ಗಂಟೆಗೆ ನೋಡಿದಾಗ ಸದ್ರಿ ಮೋಟಾರು ಸೈಕಲ್ ಇಟ್ಟ ಸ್ಥಳದಲ್ಲಿ ಇಲ್ಲದೇ ಇದ್ದು ಅದನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ. ಕಳವಾದ ಮೋಟಾರು ಸೈಕಲ್ನ ಅಂದಾಜು ಮೌಲ್ಯ ರೂಪಾಯಿ 10,000/ ಆಗಬಹುದು. ಈ ಬಗ್ಗೆ ಉಡುಪಿ ನಗರ ಪೋಲಿಸ್ ಠಾಣೆ ಅಪರಾಧ ಕ್ರಮಾಂಕ 178/2015 ಕಲಂ: 379 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
ಅಫಘಾತ ಪ್ರಕರಣ
- ಪಡುಬಿದ್ರಿ: ದಿನಾಂಕ 06.08.2015 ರಂದು ಪಿರ್ಯಾದಿ ಅಬ್ದುಲ್ ಸಮದ್ ಇವರು ಅವರ ಟೆಂಪೋವನ್ನು ಚಲಾಯಿಸಿಕೊಂಡು ಉಚ್ಚಿಲದಿಂದ ಕಾಪು ಕಡೆಗೆ ಹೋಗುತ್ತಿರುವಾಗ ಅವರ ಮುಂದಿನಿಂದ KA 16 A 484 ನೇ ನಂಬ್ರದ ಬಸ್ನ್ನು ಅದರ ಚಾಲಕನು ನಾಗೇಶ ಎಂಬಾತನು ಉಚ್ಚಿಲ ಕಡೆಯಿಂದ ಉಡುಪಿ ಕಡೆಗೆ ರಾಹೆ 66 ರಲ್ಲಿ ಅತಿವೇಗದಿಂದ ಚಲಾಯಿಸಿಕೊಂಡು ಹೋಗುತ್ತಾ ಬೆಳಿಗ್ಗೆ 10:15 ಗಂಟೆ ಸಮಯಕ್ಕೆ ಬಡಾ ಗ್ರಾಮದ ಉಚ್ಚಿಲ ನಾರಾಯಣ ಗುರು ರಸ್ತೆ ಕ್ರಾಸ್ ಬಳಿ ಪ್ರಯಾಣಿಕರನ್ನು ಹತ್ತಿಸಲು ಯಾವುದೇ ಸೂಚನೆ ನೀಡದೆ ಬಸ್ನ್ನು ಒಮ್ಮೆಲೆ ರಸ್ತೆಯಲ್ಲಿಯೇ ನಿಲ್ಲಿಸಿದ್ದು ಈ ಸಮಯ ಬಸ್ನ ಹಿಂದಿನಿಂದ ಉಡುಪಿ ಕಡೆಗೆ ಹೋಗುತ್ತಿದ್ದ KA 45 U 1239 ನೇ ಮೋಟಾರು ಸೈಕಲ್ ಸವಾರ ಮುರಳೀಧರ ರವರು ಬಸ್ನ ಹಿಂಬದಿ ಬಲಭಾಗಕ್ಕೆ ಢಿಕ್ಕಿ ಹೊಡೆದು ಗಾಯಗೊಂಡಿದ್ದು ಚಿಕಿತ್ಸೆಯ ಬಗ್ಗೆ ಉಡುಪಿ ಆದರ್ಶ ಆಸ್ಪತ್ರೆಗೆ ದಾಖಲಾಗಿದ್ದವರು 11:30 ಗಂಟೆಗೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಪಡುಬಿದ್ರಿ ಪೋಲಿಸ್ ಠಾಣೆ ಅಪರಾಧ ಕ್ರಮಾಂಕ 103/2015 ಕಲಂ; 279, 304 (ಎ) ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
ಅಸ್ವಾಭಾವಿಕ ಮರಣ ಪ್ರಕರಣ
- ಮಲ್ಪೆ: ಗಿರಿಯ ಬಂಗೇರ, ಪ್ರಾಯ
65 ವರ್ಷ ಇವರು ಕಾಲು ನೋವು ಹಾಗೂ ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದು, ದಿನಾಂಕ
05-08-2015 ರಂದು ಮಧ್ಯಾಹ್ನ 01:30 ಗಂಟೆಯಿಂದ ಸಂಜೆ 05:00 ಗಂಟೆಯ ಮದ್ಯಾವಧಿಯಲ್ಲಿ ಜೀವನದಲ್ಲಿ
ಜಿಗುಪ್ಸೆಗೊಂಡು ಮನೆಯ ಹತ್ತಿರದ ಸುರೇಶ ಪೂಜಾರಿ, ಪಂದುಬೆಟ್ಟು
ರವರ ಬಾಬ್ತು ಹೊಸದಾಗಿ ನಿರ್ಮಾಣಗೊಳ್ಳುತ್ತಿದ್ದ ಮನೆಯ ಪಶ್ಚಿಮ ಬದಿಯ ಕಿಟಕಿಯ ಸರಳಿಗೆ ನೈಲಾನ ಹಗ್ಗದಿಂದ
ಕುತ್ತಿಗೆಗೆ ನೇಣು ಬಿಗಿದುಕೊಂಡು ಅತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಮಲ್ಪೆ ಪೋಲಿಸ್ ಠಾಣೆ ಯುಡಿಆರ್ ಕ್ರಮಾಂಕ 31/2015 ಕಲಂ: 174 ಸಿ.ಆರ್.ಪಿ.ಸಿ.ಯಂತೆ
ಪ್ರಕರಣ ದಾಖಲಾಗಿರುತ್ತದೆ.
No comments:
Post a Comment