Saturday, August 01, 2015

Daily Crime Reports As On 01/08/2015 At 07:00 Hrs



ಕಳವು ಪ್ರಕರಣ
  • ಮಣಿಪಾಲ: ಪಿರ್ಯಾದಿ ಶ್ರೀಮತಿ ವೇದಾವತಿ ಶೆಟ್ಟಿ, ಗಂಡ: ಸುದೇಶ್‌ ಶೆಟ್ಟಿ, ವಾಸ: ಬಿಲ್ಡಿಂಗ್‌ ನಂಬ್ರ 70, ರೂಮ್‌ ನಂಬ್ರ 701, ಸುಖ್‌ ಸಾಗರ್‌, ಸಿಹೆಚ್‌ಎಸ್‌ ಸೊಸೈಟಿ, ತಿಲಕ್‌ನಗರ, ಚೆಂಬೂರು, ಮುಂಬಯಿರವರು ದಿನಾಂಕ 17/04/2015 ರಂದು ಮುಂಬೈ ತಿಲಕ್ ನಗರದಿಂದ ಟ್ರೈನ್ ನಂಬ್ರ :12619 ನೇ ಲೋಕ ಮಾನ್ಯ ತಿಲಕ್ ಎಕ್ಸ್ ಪ್ರೆಸ್ ಬಿ3  ನಲ್ಲಿ ಸೀಟ್ ನಂಬ್ರ 38 ರಲ್ಲಿ ಮದ್ಯಾಹ್ನಗಂಟೆ 3:20 ರ ವೇಳೆಗೆ ಮುಂಬೈ ಯಿಂದ ಹೊರಟು ದಿನಾಂಕ 18/04/2015 ರಂದು ಬೆಳಿಗ್ಗೆ ಗಂಟೆ 06:15 ರ ವೇಳೆಗೆ ಮುಲ್ಕಿ ರೈಲು ನಿಲ್ದಾಣ ತಲುಪಿ, ಮುಲ್ಕಿ ರೈಲು ನಿಲ್ದಾಣದಿಂದ ಲಗೇಜು ಪಡೆದು ಮನೆಗ ಹೋಗಿ ಚಿನ್ನಾಭರಣಗಳಿದ್ದ ಬ್ಯಾಗನ್ನು ತರೆದು ನೋಡಿದಾಗ ಸೂಟ್ ಕೇಸ್ ನೊಳಗೆ ಟಿಫಿನ್ ಬಾಕ್ಸ್ ನಲ್ಲಿ ಇಟ್ಟಿದ್ದ 1) ಸುಮಾರು 4 ಪವನ್ ತೂಕದ, ಅಂದಾಜು ಮಾಲ್ಯ ರೂ 65,000/- ದ 1-ಚಿನ್ನದ ಕರಿಮಣಿ ಸರ, 2) ಸುಮಾರು 3 ಪವನ್ ತೂಕದ, ಅಂದಾಜು ಮಾಲ್ಯ ರೂ 45,000/- ದ ಡಾಲರ್ ಇರುವ 1-ಚಿನ್ನದ ಸರ, 3) ಸುಮಾರು 6 ಪವನ್ ತೂಕದ ಅಂದಾಜು ಮಾಲ್ಯ ರೂ 90.000/- ದ 2-ಬಂಗಾರದ ಬಳೆಗಳು, 4) ಸುಮಾರು 1 ಪವನ್ ತೂಕದ ಅಂದಾಜು ಮಾಲ್ಯ ರೂ 20,000/- ದ ಅಮೇರಿಕನ್ ಡೈಮಂಡ್ ಇರುವ ಕಿವಿಯ ಬೆಂಡೋಲೆ,  5) ಸುಮಾರು ಅರ್ಧ ಪವನ್ ತೂಕದ ಅಂದಾಜು ಮಾಲ್ಯ ರೂ 10,000 ದ ಬಂಗಾರದ ಪ್ಲೇನ್ 1-ಉಂಗುರ ಇವುಗಳು ಕಳವಾಗಿರುವುದು, ಕಳವಾದ ಬಂಗಾರಗಳ ಒಟ್ಟು ಮಾಲ್ಯ ರೂ 2,30,000/- ಆಗಿದ್ದು, ಅಂದಾಜು ತೂಕ 14.5 ಪವನ್ ಆಗಿರುತ್ತದೆ,  ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 150/15 ಕಲಂ 379 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
ಅಪಘಾತ ಪ್ರಕರಣ
  • ಮಣಿಪಾಲ: ದಿನಾಂಕ 30/07/15ರಂದು ರಾತ್ರಿ 11:30ಗಂಟೆಗೆ ಉಡುಪಿ ತಾಲೂಕು ಹೆರ್ಗಾ ಗ್ರಾಮದ ಈಶ್ವರನಗರ ಎಂಬಲ್ಲಿ Dee Tee ಬಾರ್‌ ಸಮೀಪ ಉಡುಪಿ ಕಾರ್ಕಳ ರಸ್ತೆಯಲ್ಲಿ ಪಿರ್ಯಾದಿ ಸಂದೇಶ ಶೆಟ್ಟಿ, ತಂದೆ: ದಿ.ಪ್ರಕಾಶ್ ಶೆಟ್ಟಿ, ವಾಸ: ಸಿದ್ದಿವಿನಾಯಕ ಹೌಸ್‌, ಗುಡ್ಡೆಯಂಗಡಿ, ಬೊಮ್ಮರಬೆಟ್ಟು ಗ್ರಾಮ, ಉಡುಪಿರವರು ತನ್ನ ಕಾರು ನಂಬ್ರ ಕೆಎ 20 ಪಿ 5521 ನೇದನ್ನು ಉಡುಪಿ ಕಡೆಯಿಂದ ಹಿರಿಯಡ್ಕ ಕಡೆಗೆ ಚಲಾಯಿಸಿಕೊಂಡು ಹೋಗುವಾಗ Dee Tee ಬಾರ್‌ ಎದುರಿನಿಂದ ಮೋಟಾರ್ ಸೈಕಲ್ ನಂಬ್ರ KA 20 EE 7837ನೇದರ ಸವಾರ ಅಂಕುರ್‌ ಮಲಿಕ್‌ ಎಂಬುವರು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಸವಾರಿ ಮಾಡಿಕೊಂಡು ರಸ್ತೆ ಬಲಬದಿಗೆ ಬಂದು ಕಾರಿನ ಎಡಬದಿಗೆ ಢಿಕ್ಕಿ ಹೊಡೆದ ಪರಿಣಾಮ ಮೋಟಾರ್ ಸೈಕಲ್‌ ಸವಾರ ಹಾಗೂ ಸಹ ಸವಾರರಿಗೆ ಗಾಯವುಂಟಾಗಿರುತ್ತದೆ, ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 151/15 ಕಲಂ 279,337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

No comments: